Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಉಡುಪಿಯಲ್ಲಿ ‘ಸಮಾಧಾನ ಮಹೋತ್ಸವ’ಕ್ಕೆ ವಿರೋಧ: ಸಂಘಟನೆಗಳಿಂದ ಅನುಮತಿ ರದ್ದುಪಡಿಸುವಂತೆ ಒತ್ತಾಯ….!

Dhrishya News by Dhrishya News
19/03/2026
in ಕರಾವಳಿ, ಸುದ್ದಿಗಳು
0
ಉಡುಪಿಯಲ್ಲಿ ‘ಸಮಾಧಾನ ಮಹೋತ್ಸವ’ಕ್ಕೆ ವಿರೋಧ: ಸಂಘಟನೆಗಳಿಂದ ಅನುಮತಿ ರದ್ದುಪಡಿಸುವಂತೆ ಒತ್ತಾಯ….!
0
SHARES
1
VIEWS
Share on FacebookShare on Twitter

ಉಡುಪಿ, ಮಾ. 19: ಉಡುಪಿ ನಗರದಲ್ಲಿ ಮಾರ್ಚ್ 20ರಿಂದ 22ರವರೆಗೆ ಆಯೋಜಿಸಲಿರುವ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮವನ್ನು ಕುರಿತಂತೆ ವಿವಾದ ತೀವ್ರಗೊಂಡಿದೆ.

ತಮಿಳುನಾಡಿನ ಪ್ರಚಾರಕ ಮೋಹನ್ ಸಿ. ಲಾಜರಸ್ ನೇತೃತ್ವದಲ್ಲಿ ಮಿಷನ್ ಕಾಂಪೌಂಡ್ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಇದರ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಕಾರ್ಯಕ್ರಮವು ಮತಾಂತರ ಉದ್ದೇಶ ಹೊಂದಿದೆ ಎಂದು ಆರೋಪಿಸಿರುವ ಸಂಘಟನೆಗಳು, ಜಿಲ್ಲಾಡಳಿತ ತಕ್ಷಣ ಅನುಮತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿವೆ.

ಹಿಂದೂ ಮುಖಂಡ ಶ್ರೀಕಾಂತ ಶೆಟ್ಟಿ ಮಾತನಾಡಿ, “ಇಂತಹ ಕಾರ್ಯಕ್ರಮಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ವಿವಾದಾತ್ಮಕ ವ್ಯಕ್ತಿಗಳಿಗೆ ವೇದಿಕೆ ನೀಡಬಾರದು” ಎಂದು ಅಭಿಪ್ರಾಯಪಟ್ಟರು.

ಮೋಹನ್ ಸಿ. ಲಾಜರಸ್ ವಿರುದ್ಧ ಹಿಂದಿನಿಂದಲೇ ದ್ವೇಷ ಭಾಷಣ, ಧಾರ್ಮಿಕ ಭಾವನೆಗೆ ಧಕ್ಕೆ ಹಾಗೂ ಮತಾಂತರ ಆರೋಪಗಳು ಕೇಳಿಬಂದಿದ್ದು, ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಸಂಘಟನೆಗಳು ದೂರಿವೆ.

ಇದಲ್ಲದೆ, ‘ಜೀಸಸ್ ರಿಡೀಮ್ಸ್’ ಸಂಸ್ಥೆಯ ಮೇಲೂ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಕೇಂದ್ರ ಗೃಹ ಸಚಿವಾಲಯವು ಅದರ ಲೈಸೆನ್ಸ್ ಅಮಾನತು ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆದಲ್ಲಿ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಕಾರ್ಯಕ್ರಮಕ್ಕೆ ಅವಕಾಶ ನೀಡಿದಲ್ಲಿ ಜಿಲ್ಲಾವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

Previous Post

ಉಡುಪಿ ಬನ್ನಂಜೆಯಲ್ಲಿ ಪ್ರೊಫೆಷನಲ್ ಸೆಟ್‌ಅಪ್ ಹೊಂದಿರುವ ಬ್ಯೂಟಿ ಪಾರ್ಲರ್ ಮಾರಾಟಕ್ಕೆ..!!

Next Post

ಯುಗಾದಿ–ರಂಜಾನ್ ಹಬ್ಬ: ವಿಶೇಷ ರೈಲು ಸೇವೆ ಆರಂಭ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಯುಗಾದಿ–ರಂಜಾನ್ ಹಬ್ಬ: ವಿಶೇಷ ರೈಲು ಸೇವೆ ಆರಂಭ…!

ಯುಗಾದಿ–ರಂಜಾನ್ ಹಬ್ಬ: ವಿಶೇಷ ರೈಲು ಸೇವೆ ಆರಂಭ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ: ಶಾಸಕರ ಮನವಿ….!

ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ: ಶಾಸಕರ ಮನವಿ….!

19/03/2026
ಮಧ್ಯಪ್ರಾಚ್ಯ ಯುದ್ಧ ಪರಿಣಾಮ: ಕುಡಿಯುವ ನೀರಿನ ಬಾಕ್ಸ್‌ಗೆ  ದರ ಏರಿಕೆ….!

ಮಧ್ಯಪ್ರಾಚ್ಯ ಯುದ್ಧ ಪರಿಣಾಮ: ಕುಡಿಯುವ ನೀರಿನ ಬಾಕ್ಸ್‌ಗೆ ದರ ಏರಿಕೆ….!

19/03/2026
ಸೈಬರ್‌ ಮೋಸ ಹೊಸ ತಂತ್ರ: ಗ್ಯಾಸ್‌ ಬಿಲ್‌ ಹೆಸರಿನಲ್ಲಿ ಎಪಿಕೆ ಮೂಲಕ ವಂಚನೆ….!

ಸೈಬರ್‌ ಮೋಸ ಹೊಸ ತಂತ್ರ: ಗ್ಯಾಸ್‌ ಬಿಲ್‌ ಹೆಸರಿನಲ್ಲಿ ಎಪಿಕೆ ಮೂಲಕ ವಂಚನೆ….!

19/03/2026
ಯುಗಾದಿ–ರಂಜಾನ್ ಹಬ್ಬ: ವಿಶೇಷ ರೈಲು ಸೇವೆ ಆರಂಭ…!

ಯುಗಾದಿ–ರಂಜಾನ್ ಹಬ್ಬ: ವಿಶೇಷ ರೈಲು ಸೇವೆ ಆರಂಭ…!

19/03/2026

Recent News

ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ: ಶಾಸಕರ ಮನವಿ….!

ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ: ಶಾಸಕರ ಮನವಿ….!

19/03/2026
ಮಧ್ಯಪ್ರಾಚ್ಯ ಯುದ್ಧ ಪರಿಣಾಮ: ಕುಡಿಯುವ ನೀರಿನ ಬಾಕ್ಸ್‌ಗೆ  ದರ ಏರಿಕೆ….!

ಮಧ್ಯಪ್ರಾಚ್ಯ ಯುದ್ಧ ಪರಿಣಾಮ: ಕುಡಿಯುವ ನೀರಿನ ಬಾಕ್ಸ್‌ಗೆ ದರ ಏರಿಕೆ….!

19/03/2026
ಸೈಬರ್‌ ಮೋಸ ಹೊಸ ತಂತ್ರ: ಗ್ಯಾಸ್‌ ಬಿಲ್‌ ಹೆಸರಿನಲ್ಲಿ ಎಪಿಕೆ ಮೂಲಕ ವಂಚನೆ….!

ಸೈಬರ್‌ ಮೋಸ ಹೊಸ ತಂತ್ರ: ಗ್ಯಾಸ್‌ ಬಿಲ್‌ ಹೆಸರಿನಲ್ಲಿ ಎಪಿಕೆ ಮೂಲಕ ವಂಚನೆ….!

19/03/2026
ಯುಗಾದಿ–ರಂಜಾನ್ ಹಬ್ಬ: ವಿಶೇಷ ರೈಲು ಸೇವೆ ಆರಂಭ…!

ಯುಗಾದಿ–ರಂಜಾನ್ ಹಬ್ಬ: ವಿಶೇಷ ರೈಲು ಸೇವೆ ಆರಂಭ…!

19/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved