ಪುತ್ತೂರು, ಮಾ. 17: ನಗರದಲ್ಲಿ ಸೋಮವಾರ ರಾತ್ರಿ ಬೀಸಿದ ಬಿರುಸಿನ ಗಾಳಿ-ಮಳೆಯಿಂದ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಿದ್ದ ಬೃಹತ್ ರಾಷ್ಟ್ರಧ್ವಜ ಹಾನಿಗೊಳಗಾಗಿ ಕೆಳಗೆ ಬಿದ್ದ ಘಟನೆ ನಡೆದಿದೆ. ರಾಜ್ಯದಲ್ಲೇ ಮೂರನೇ ಅತಿ ಎತ್ತರದ ಧ್ವಜಸ್ತಂಭ ಎಂಬ ಖ್ಯಾತಿ ಪಡೆದಿರುವ ಈ ಸ್ಥಳದಲ್ಲಿ ಸಂಭವಿಸಿದ ಘಟನೆ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ದೇಶಭಕ್ತಿಯ ಪ್ರತೀಕವಾಗಿ ಕೆಲವೇ ದಿನಗಳ ಹಿಂದೆ ದೇವಸ್ಥಾನದ ಆವರಣದಲ್ಲಿ ಅತಿ ಎತ್ತರದ ಸ್ತಂಭಕ್ಕೆ ಈ ಧ್ವಜವನ್ನು ಏರಿಸಲಾಗಿತ್ತು. ಆದರೆ ರಾತ್ರಿ ವೇಳೆ ಬೀಸಿದ ಪ್ರಬಲ ಗಾಳಿಯ ಪರಿಣಾಮವಾಗಿ ಧ್ವಜ ಹರಿದು ನೆಲಕ್ಕಿಳಿದಿದೆ.







