ಕುಕ್ಕುಂದೂರು, ಮಾ.14: ಕುಕ್ಕುಂದೂರುನ ಮೇಲ್ಜಡ್ಡು ಪ್ರದೇಶದಲ್ಲಿ ವಾಸಿಸುತ್ತಿರುವ ಎರಡು ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಹಾಗೂ ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕುಲಾಲ ಸಂಘಗಳ ಪ್ರತಿನಿಧಿಗಳು ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ನಾನಿಳ್ತಾರ್ ಕುಲಾಲ ಸಂಘ, ಕಾರ್ಕಳ ಕುಲಾಲ ಸಂಘ ಮತ್ತು ಹೊಸ್ಮಾರು ಕುಲಾಲ ಸಂಘದ ಸದಸ್ಯರು ಸಂಬಂಧಿತ ಎರಡು ಮನೆಗಳಿಗೆ ಭೇಟಿ ನೀಡಿ, ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಆ ಕುಟುಂಬಗಳ ರಕ್ಷಣೆಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಸಂಘದ ಪ್ರತಿನಿಧಿಗಳು ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ನಾನಿಳ್ತಾರ್ ಕುಲಾಲ ಸಂಘದ ಮಾಜಿ ಅಧ್ಯಕ್ಷ ಕುಶ ಮೂಲ್ಯ ಅವರು, ಈ ಎರಡು ಕುಟುಂಬಗಳು ಸುಮಾರು 35 ವರ್ಷಗಳಿಂದ ಅಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿದ್ದು, ಅವರಿಗೆ ಅನಾವಶ್ಯಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಬಳಿಕ ಸಂಘದ ಸದಸ್ಯರು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ಹಲವು ವರ್ಷಗಳಿಂದ ಮುಂದುವರಿದಿರುವ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಆಗ್ರಹಿಸಿದರು. ನಂತರ ಪೊಲೀಸ್ ಇಲಾಖೆಯಿಗೂ ಮನವಿ ನೀಡಿ, ಸಂಬಂಧಿತ ಎರಡು ಕುಟುಂಬಗಳಿಗೆ ಅಗತ್ಯ ರಕ್ಷಣೆ ಒದಗಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಜಯರಾಮ್ ಬಂಗೇರ (ಕೆರ್ವಾಶೆ), ಪ್ರಮೋದ್ ಕುಲಾಲ್ (ಹೊಸ್ಮಾರು), ಜಗನ್ನಾಥ ಕುಲಾಲ್ (ಬೆಳ್ಮಣ್), ವಿಠಲ್ ಕುಲಾಲ್ (ಬೆಲಾಡಿ), ಬೊಗ್ಗು ಮೂಲ್ಯ (ಬೆಲಾಡಿ), ರಮೇಶ್ ಮಾಳ, ಜ್ಯೋತಿ ಕುಲಾಲ್ (ಪದವು), ಜ್ಯೋತಿ ಬಾರಡಿ, ಗೋಪಾಲ ಮೂಲ್ಯ, ಸಂತೋಷ ಕುಲಾಲ್ (ಪದವು), ಚಂದ್ರ ಮೂಲ್ಯ, ರಾಜೇಶ್ ಕುಲಾಲ್ (ಸಾಂತೂರ್), ಚಿತ್ರೀಶ್ ಕುಲಾಲ್ (ಇನ್ನಾ), ನಿಲೇಶ್ ಕುಲಾಲ್, ಪ್ರೇಮ್ ಕುಲಾಲ್, ರಾಜೇಶ್ ಕುಲಾಲ್ (ಇನ್ನಾ), ನಾಗೇಶ್ ಕುಲಾಲ್ (ಬೆಳ್ಮಣ್), ವಿಕಾಸ್ ಕುಲಾಲ್, ಶಶಿಧರ್ ಕುಲಾಲ್ (ಕೆರ್ವಾಶೆ), ಸುರೇಶ್ ಕುಲಾಲ್ (ಪಾಲಜೆ), ದೇವಪ್ಪ ಕುಲಾಲ್ (ನಿಟ್ಟೆ), ಶಂಕರ್ ಕುಲಾಲ್ (ಗುರ್ಬೇಟ್ಟು) ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದಲ್ಲದೆ ನಿನ್ನೆ ಕಾರ್ಕಳ ಕುಲಾಲ ಸಂಘದ ಮಾಜಿ ಅಧ್ಯಕ್ಷ ಭೋಜ ಕುಲಾಲ್, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕುಲಾಲ್, ಸುರೇಂದ್ರ ಕುಲಾಲ್, ದಿವಾಕರ್ ಬಂಗೇರ, ಕೃಷ್ಣ ಕುಲಾಲ್, ವಸಂತ್ ಕುಲಾಲ್, ವಿಜೇಶ್ ಕುಲಾಲ್, ದೇವಪ್ಪ ಕುಲಾಲ್, ವಿನಯ ಧವಳ ಕೀರ್ತಿ ಹಾಗೂ ಇತರ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದರು.







