ಮಂಗಳೂರು, ಮಾ. 11: ತಿರುವನಂತಪುರಂ ರೈಲು ವಿಭಾಗದಲ್ಲಿ ಹಳಿ ನಿರ್ವಹಣಾ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ರೈಲ್ವೆ ಇಲಾಖೆ ಘೋಷಿಸಿದೆ.
ನಂ. 16605 ಮಂಗಳೂರು ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ಎರ್ನಾಡ್ ಎಕ್ಸ್ಪ್ರೆಸ್ ಮಾ.12ರಂದು ಮಂಗಳೂರಿನಿಂದ ಹೊರಟು ಕೊಲ್ಲಂ ಜಂಕ್ಷನ್ವರೆಗೆ ಮಾತ್ರ ಸಂಚರಿಸಲಿದೆ. ಆ ದಿನ ಕೊಲ್ಲಂ ಜಂಕ್ಷನ್ ಮತ್ತು ತಿರುವನಂತಪುರಂ ನಡುವಿನ ಮಾರ್ಗದಲ್ಲಿ ಈ ರೈಲು ಓಡಾಡುವುದಿಲ್ಲ.
ನಂ. 12695 ಎಂಜಿಆರ್ ಚೆನ್ನೈ ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮಾ.13ರಂದು ಕೊಟ್ಟಾಯಂವರೆಗೆ ಮಾತ್ರ ಸಂಚರಿಸಲಿದ್ದು, ಕೊಟ್ಟಾಯಂ–ತಿರುವನಂತಪುರಂ ನಡುವೆ ಸೇವೆ ಇರದು.
ನಂ. 12626 ದಿಲ್ಲಿ–ತಿರುವನಂತಪುರಂ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮಾ.10ರಂದು ದಿಲ್ಲಿಯಿಂದ ಹೊರಟಿರುವ ರೈಲು ತಿರುವನಂತಪುರಂ ಸೆಂಟ್ರಲ್ ಬದಲಾಗಿ ತಿರುವನಂತಪುರಂ ನಾರ್ತ್ ನಿಲ್ದಾಣದಲ್ಲೇ ಸಂಚಾರವನ್ನು ಅಂತ್ಯಗೊಳಿಸಲಿದೆ.
ನಂ. 16606 ತಿರುವನಂತಪುರಂ ಸೆಂಟ್ರಲ್–ಮಂಗಳೂರು ಸೆಂಟ್ರಲ್ ಎರ್ನಾಡ್ ಎಕ್ಸ್ಪ್ರೆಸ್ ಮಾ.13ರಂದು ಬೆಳಿಗ್ಗೆ 4.38ಕ್ಕೆ ತಿರುವನಂತಪುರಂ ಬದಲಿಗೆ ಕೊಲ್ಲಂ ಜಂಕ್ಷನ್ನಿಂದ ಪ್ರಯಾಣ ಆರಂಭಿಸಲಿದೆ.
ಅದೇ ರೀತಿ, ನಂ.12696 ತಿರುವನಂತಪುರಂ ಸೆಂಟ್ರಲ್–ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್ಫಾಸ್ಟ್ ರೈಲು ಮಾ.14ರಂದು ತಿರುವನಂತಪುರಂ ಬದಲಿಗೆ ಕೊಟ್ಟಾಯಂ ನಿಲ್ದಾಣದಿಂದ ರಾತ್ರಿ 8.05ಕ್ಕೆ ಹೊರಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.







