Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಣಿಪಾಲ್ ಎಂಐಟಿ ಬೆಂಗಳೂರು ಕ್ಯಾಂಪಸ್‌ನಲ್ಲಿ ‘ಕ್ವಾಂಟಮ್-ಹಬ್ @ ಮಾಹೆ’ ಆರಂಭ…!

Dhrishya News by Dhrishya News
06/03/2026
in ಕರಾವಳಿ, ರಾಜ್ಯ/ ರಾಷ್ಟ್ರೀಯ
0
ಮಣಿಪಾಲ್ ಎಂಐಟಿ ಬೆಂಗಳೂರು ಕ್ಯಾಂಪಸ್‌ನಲ್ಲಿ ‘ಕ್ವಾಂಟಮ್-ಹಬ್ @ ಮಾಹೆ’ ಆರಂಭ…!
0
SHARES
4
VIEWS
Share on FacebookShare on Twitter

ಬೆಂಗಳೂರು, ಮಾ. 06: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯು ತನ್ನ ಅಂಗಸಂಸ್ಥೆಯಾದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಬೆಂಗಳೂರು ಕ್ಯಾಂಪಸ್‌ನಲ್ಲಿ ಕ್ವಾಂಟಮ್-ಹಬ್ @ ಮಾಹೆಯನ್ನು (ಕ್ಯು-ಹಬ್@ಮಾಹೆ) ಮಾರ್ಚ್‌ 5ರ ಗುರುವಾರ ಅಧಿಕೃತವಾಗಿ ಆರಂಭಿಸಿತು. ಇದು ಭಾರತದ ರಾಷ್ಟ್ರೀಯ ಕ್ವಾಂಟಮ್ ಮಿಷನ್‌ಗೆ ಅನುಗುಣವಾಗಿರುವ, ಸ್ವದೇಶೀ ಕ್ವಾಂಟಮ್ ಹಾರ್ಡ್‌ವೇರ್ ಅಭಿವೃದ್ಧಿಗಾಗಿ ಮೀಸಲಾಗಿರುವ ಓಪನ್ ಆರ್ಕಿಟೆಕ್ಚರ್ ವ್ಯವಸ್ಥೆಯಾಗಿದೆ.

ವಿನ್ಯಾಸದಿಂದ ಅನುಷ್ಠಾನದ ತನಕ ಎಲ್ಲವನ್ನೂ ಒಳಗೊಂಡ ವೇದಿಕೆಯಾಗಿರುವ ಕ್ಯು-ಹಬ್@ಮಾಹೆ, ಕ್ವಾಂಟಮ್ ಹಾರ್ಡ್‌ವೇರ್ ಪ್ರಯೋಗಗಳು, ಡೀಪ್ ಟೆಕ್ ಸ್ಟಾರ್ಟಪ್ ಇಂಕ್ಯುಬೇಶನ್, ಮಾನವ ಸಂಪನ್ಮೂಲ ಅಭಿವೃದ್ಧಿ, ಪರೀಕ್ಷಾ ಮೂಲಸೌಕರ್ಯ, ಮತ್ತು ಏಕೀಕೃತ ಶೈಕ್ಷಣಿಕ ವ್ಯವಸ್ಥೆಯಡಿ ಸಂಶೋಧನೆಗಳನ್ನು ಒಳಗೊಂಡಿದೆ. ಈ ಕ್ರಮ ಭಾರತದ ಕ್ವಾಂಟಮ್ ತಂತ್ರಜ್ಞಾನ ಮೌಲ್ಯ ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯಾಗಿಸುವ ಗುರಿ ಹೊಂದಿದೆ.

ಬಹುಸಂಸ್ಥೀಯ ಡೀಪ್-ಟೆಕ್ ಕಾರ್ಯತಂತ್ರದ ಭಾಗವಾಗಿ, ಎಂಐಟಿ, ಬೆಂಗಳೂರು ಕ್ವಾಂಟಮ್ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಲಿದ್ದು, ಇಲ್ಲಿ ಉನ್ನತ ಮಟ್ಟದ ಕ್ವಾಂಟಮ್ ಹಾರ್ಡ್‌ವೇರ್ ಪ್ರಯೋಗಗಳು, ಕ್ರಯೋಜನಿಕ್ ಮತ್ತು ಆರ್‌ಎಫ್ ವ್ಯವಸ್ಥೆಗಳು, ಕ್ವಾಂಟಮ್ ಎಂಜಿನಿಯರಿಂಗ್ ಮತ್ತು ತರಬೇತಿಗಳನ್ನು ನೀಡಲಾಗುತ್ತದೆ.

ಆರಂಭಿಕ ಹಂತದಲ್ಲಿ, ಈ ಕೇಂದ್ರ 25 – ಕ್ಯುಬಿಟ್ ಡೈಲ್ಯೂಷನ್ ರೆಫ್ರಿಜಿರೇಶನ್ (ಡಿಆರ್) ಆಧಾರಿತ ಓಪನ್ ಆರ್ಕಿಟೆಕ್ಚರ್ ವ್ಯವಸ್ಥೆಯೊಡನೆ ಕಾರ್ಯಾರಂಭಿಸಲಿದೆ. ಇದು ಆಧುನಿಕ ತರಬೇತಿ ಮತ್ತು ಪ್ರಾಯೋಗಿಕತೆಗೆ ಪೂರಕವಾಗಿ ವಿನ್ಯಾಸಗೊಂಡಿದೆ. ಮುಂದಿನ ಹಂತದಲ್ಲಿ 50-150 ಕ್ಯುಬಿಟ್ ‘ಪ್ರೂಫ್ ಆಫ್ ಕಾನ್ಸೆಪ್ಟ್’ ವೇದಿಕೆಯಾಗಿ ಬೆಳೆದು, ಅಂತಿಮವಾಗಿ 150-1,000+ ಕ್ಯುಬಿಟ್ ಕೈಗಾರಿಕಾ ದರ್ಜೆಯ ಕ್ವಾಂಟಮ್ ಉತ್ಪನ್ನ ವ್ಯವಸ್ಥೆಯಾಗಿ ಮುಂದುವರಿಯಲಿದೆ.

ಕ್ಯು-ಹಬ್@ಮಾಹೆ ಅನ್ನು ಓಪನ್ ಆರ್ಕಿಟೆಕ್ಚರ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದರಿಂದ ಸ್ವದೇಶೀ ಘಟಕಗಳ ಅಭಿವೃದ್ಧಿ, ಕ್ಯಾಲಿಬರೇಶನ್ ವ್ಯವಸ್ಥೆಗಳು ಮತ್ತು ಹಾರ್ಡ್‌ವೇರ್ ಏಕೀಕರಣ, ಮತ್ತು ಸಾಧಿಸಬಹುದಾದ ಉತ್ಪಾದನಾ ಮಾರ್ಗೋಪಾಯಗಳು ಸಾಧಿತವಾಗಲಿವೆ.

ಪ್ರಸ್ತುತ ಕ್ಯು-ಹಬ್@ಮಾಹೆ ಸ್ಥಾಪನೆಗಾಗಿ ಕ್ವಾಂಟ್ರೋಲ್ಒಎಕ್ಸ್ (ಫಿನ್‌ಲ್ಯಾಂಡ್) ಜೊತೆ ಒಪ್ಪಂದ (ಮೆಮೊರೆಂಡಂ ಆಫ್ ಅಂಡರ್‌ಸ್ಟಾಂಡಿಂಗ್) ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಬ್ಲೂಫೋರ್ಸ್ (ಫಿನ್‌ಲ್ಯಾಂಡ್), ಕ್ಯೂಬ್ಲಾಕ್ಸ್ (ನೆದರ್ಲ್ಯಾಂಡ್ಸ್), ಕಾನ್‌ಸೈನ್ಸ್ (ಸ್ವೀಡನ್) ಮತ್ತು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಗ್ (ಸಿ-ಡಿಎಸಿ), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗದೊಂದಿಗೆ ಇದನ್ನು ರೂಪಿಸಲಾಗಿದೆ. 

ಈ ಸಹಭಾಗಿತ್ವಗಳು ಮೊದಲ ವರ್ಷದಲ್ಲಿ ರಾಷ್ಟ್ರೀಯ ಕ್ವಾಂಟಮ್ ಮಿಷನ್‌ಗೆ ಪೂರಕವಾಗಿ ನಡೆಸುವ ಮಾನವ ಸಂಪನ್ಮೂಲ ಅಭಿವೃದ್ಧಿ, ಹಾರ್ಡ್‌ವೇರ್ ಪ್ರಾಯೋಗಿಕತೆ, ಐಪಿ (ಬೌದ್ಧಿಕ ಸ್ವತ್ತು) ಸಹ ಅಭಿವೃದ್ಧಿ, ರಾಷ್ಟ್ರೀಯ ಪರೀಕ್ಷಾ ಮೂಲ ಸೌಕರ್ಯ ಅಭಿವೃದ್ಧಿಯಂತಹ ಕಾರ್ಯತಂತ್ರದ ಪ್ರಮುಖ ಕಾರ್ಯಗಳನ್ನು ಕೈಗೊಳ್ಳಲಿವೆ.

ಕ್ಯು-ಹಬ್@ಮಾಹೆ ಡಿಸೆಂಬರ್ 2026ರ ಒಳಗೆ 100 ಕ್ವಾಂಟಮ್ ಇಂಜಿನಿಯರ್‌ಗಳನ್ನು ತರಬೇತಿಗೊಳಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಆನ್‌ಲೈನ್ ಪಠ್ಯಕ್ರಮ, ಮೌಲ್ಯಮಾಪನ, ಮತ್ತು ಪ್ರಯೋಗಾಲಯ ತರಬೇತಿಗಳನ್ನು ಒಳಗೊಂಡ ವ್ಯವಸ್ಥಿತ ಸರ್ಟಿಫಿಕೇಟ್ ತರಬೇತಿಯನ್ನು ಒದಗಿಸಲಾಗುತ್ತದೆ. ಈ ಕೇಂದ್ರ, ರಾಷ್ಟ್ರೀಯ ಪರೀಕ್ಷಾ ಮತ್ತು ಮೌಲ್ಯಮಾಪನ ಸೌಲಭ್ಯಗಳನ್ನು ಒದಗಿಸುವ ಕೇಂದ್ರವಾಗಿಯೂ ಕಾರ್ಯಾಚರಿಸಲಿದ್ದು, ಸ್ಟಾರ್ಟಪ್‌ಗಳು ಮತ್ತು ಔದ್ಯಮಿಕ ಸಹಯೋಗಿಗಳಿಗೆ ಅತ್ಯಾಧುನಿಕ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಲಿದೆ. ಈ ಕೇಂದ್ರ ಸೆಪ್ಟೆಂಬರ್ 2026ರಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಸಂಸ್ಥೆಯ ಮುಖಂಡರ ಅಭಿಪ್ರಾಯಗಳು

ಲೆ. ಜನರಲ್ (ಡಾ.) ಎಂ. ಡಿ. ವೆಂಕಟೇಶ್, ಕುಲಪತಿ, ಮಾಹೆ:

“ರಾಷ್ಟ್ರೀಯ ಕ್ವಾಂಟಮ್ ಮಿಷನ್ನಿನ ದೂರದೃಷ್ಟಿಗೆ ಅನುಗುಣವಾಗಿ, ಸ್ವಾವಲಂಬಿ, ಸ್ವಾಯತ್ತ ವೈಜ್ಞಾನಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕು ಎನ್ನುವ ನಮ್ಮ ಬದ್ಧತೆಯನ್ನು ಕ್ಯು-ಹಬ್@ಮಾಹೆ ಪ್ರತಿನಿಧಿಸುತ್ತದೆ. ಸಂಶೋಧನೆ, ಹಾರ್ಡ್‌ವೇರ್ ಅಭಿವೃದ್ಧಿ, ಮತ್ತು ಮಾನವ ಸಂಪನ್ಮೂಲ ತರಬೇತಿಯನ್ನು ಒಂದೆಡೆ ಒದಗಿಸುವ ಮೂಲಕ, ಆಧುನಿಕ ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ನಾಯಕತ್ವಕ್ಕೆ ಮಹತ್ವಪೂರ್ಣ ಕೊಡುಗೆ ನೀಡುವುದು ನಮ್ಮ ಗುರಿಯಾಗಿದೆ.”

ಪ್ರೊ. (ಡಾ.) ಮಧು ವೀರರಾಘವ‌ನ್, ಪ್ರೊ ವೈಸ್ ಚಾನ್ಸೆಲರ್, ಮಾಹೆ ಬೆಂಗಳೂರು:

“ಎಂಐಟಿ ಬೆಂಗಳೂರನ್ನು ಕಾರ್ಯಾಚರಣಾ ಕೇಂದ್ರವಾಗಿ ಹೊಂದಿರುವ ಕ್ಯು-ಹಬ್@ಮಾಹೆ ಅಂತರಶಾಖಾ ಸಹಕಾರ, ಡೀಪ್ ಟೆಕ್ ಉದ್ಯಮಶೀಲತೆ, ಮತ್ತು ಸಂಶೋಧನಾ ವೇಗವನ್ನು ಹೆಚ್ಚಿಸಲಿದೆ. ಶೈಕ್ಷಣಿಕ ಅನ್ವೇಷಣೆಯಿಂದ, ನೈಜ ಜಗತ್ತಿನ ಮೇಲೆ ಪರಿಣಾಮ ಬೀರಬಲ್ಲ ಉತ್ಪಾದನಾಶೀಲ ಕ್ವಾಂಟಮ್ ವ್ಯವಸ್ಥೆಗಳನ್ನು ನಿರ್ಮಿಸುವುದರತ್ತ ನಾವು ಗಮನ ಹರಿಸಿದ್ದೇವೆ.”

ಪ್ರೊ. ಐವೆನ್ ಜೋಸ್, ನಿರ್ದೇಶಕರು, ಎಂಐಟಿ ಬೆಂಗಳೂರು:

“ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ನೈಜ ಕ್ವಾಂಟಮ್ ಹಾರ್ಡ್‌ವೇರ್, ಕ್ರಯೋಜನಿಕ್ ವ್ಯವಸ್ಥೆಗಳು ಮತ್ತು ಆರ್‌ಎಫ್ ಮೂಲಭೂತ ವ್ಯವಸ್ಥೆಗಳನ್ನು ಬಳಸು ಅವಕಾಶ ಲಭಿಸುವುದರಿಂದ, ಅವರು ಕೇವಲ ಬಳಕೆದಾರರಾಗಿ ಉಳಿಯದೆ, ನೈಜ ಉತ್ಪಾದಕರಾಗಲಿದ್ದಾರೆ. ಮಣಿಪಾಲ್ ಹೌಸ್ ಆಫ್ ಕ್ವಾಂಟಮ್ ಮೂಲಕ ಮುಂದಿನ ತಲೆಮಾರಿನ ಕ್ವಾಂಟಮ್ ಇಂಜಿನಿಯರ್‌ಗಳನ್ನು ತಯಾರಿಸಲು ಇದು ಅತ್ಯಂತ ಅವಶ್ಯಕವಾಗಿದೆ.”

ಕೋಟ್ಸ್‌ 

ವಿಶಾಲ್, ಕ್ರಾಂಟ್ರೊಲ್ಒಎಕ್ಸ್:

“ಕ್ಯಾಲಿಬರೇಶನ್ ಮತ್ತು ಸ್ವಯಂಚಾಲಿತ ಸಾಮರ್ಥ್ಯಗಳನ್ನು ಓಪನ್ ಆರ್ಕಿಟೆಕ್ಚರ್ ವಿನ್ಯಾಸದಡಿ ಅಭಿವೃದ್ಧಿ ಪಡಿಸಲು ಕ್ಯು-ಹಬ್@ಮಾಹೆ ಜೊತೆ ಸಹಭಾಗಿತ್ವ ಸಾಧಿಸುವುದು ನಮಗೆ ಸಂತೋಷದ ವಿಚಾರವಾಗಿದೆ.”

ಡಾ. ಸುದರ್ಶನ್, ಸಿ-ಡಿಎಸಿ:

“ಕ್ಯು-ಹಬ್@ಮಾಹೆಯ ಉದ್ದೇಶಗಳು ರಾಷ್ಟ್ರೀಯ ಕ್ವಾಂಟಮ್ ಮಿಷನ್ನಿನ ಆದ್ಯತೆಗಳಾದ ಪೂರೈಕೆ ಸರಪಳಿಗೆ ಬೆಂಬಲ, ಡೀಪ್-ಟೆಕ್ ಉದ್ಯಮಿಗಳ ಸೃಷ್ಟಿ, ಮತ್ತು ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಪೂರಕವಾಗಿವೆ.”

ಡಾ. ಡೇವಿಡ್ ಗುನ್ನಾರ್ಸನ್, ಸಿಟಿಒ, ಬ್ಲೂಫೋರ್ಸ್, ಫಿನ್‌ಲ್ಯಾಂಡ್

“ಕ್ವಾಂಟಮ್ ಹಾರ್ಡ್‌ವೇರ್ ಪ್ರಯೋಗಗಳು ಮತ್ತು ವಿಸ್ತರಿಸಬಹುದಾದ ಕ್ವಾಂಟಮ್ ವ್ಯವಸ್ಥೆಗಳ ಅಭಿವೃದ್ಧಿಗಾಗಿ ಅಗತ್ಯವಿರುವ ಉನ್ನತ ಮಟ್ಟದ ಕ್ರಯೋಜೆನಿಕ್ ಮೂಲಸೌಕರ್ಯವನ್ನು ಸ್ಥಾಪಿಸುವಲ್ಲಿ ಕ್ಯು-ಹಬ್@ಮಾಹೆ ಬೆಂಬಲ ನೀಡುತ್ತಿರುವುದಕ್ಕೆ ನಾವು ಸಂತೋಷಪಡುತ್ತೇವೆ.” 

ಡಾ. ನೀಲ್ಸ್ ಬುಲ್ಟಿಂಕ್, ಕ್ಯುಬ್ಲಾಕ್ಸ್:

“ಒಂದು ಶೈಕ್ಷಣಿಕ – ಉತ್ಪಾದನಾ ವ್ಯವಸ್ಥೆಯಡಿ ಪ್ರಮಾಣಿತ ಕ್ವಾಂಟಮ್ ನಿಯಂತ್ರಣ ವ್ಯವಸ್ಥೆಗಳ ಅಭಿವೃದ್ಧಿಗೆ ಈ ಸಹಭಾಗಿತ್ವ ನೆರವಾಗಲಿದೆ.”

ಡಾ. ಮಾರ್ಕಸ್ ರಾಮ್ಮೆಲ್, ಕಾನ್‌ಸೈನ್ಸ್:

“ಭಾರತದ ಕ್ವಾಂಟಮ್ ವ್ಯವಸ್ಥೆ ಅಭಿವೃದ್ಧಿ ಹೊಂದುತ್ತಿದ್ದು, ಕ್ಯು-ಹಬ್@ಮಾಹೆ ವಿವಿಧ ಕ್ವಾಂಟಮ್ ಪ್ರೊಸೆಸಿಂಗ್ ಯುನಿಟ್‌ಗಳ (ಕ್ಯುಪಿಯು) ಪರೀಕ್ಷೆ, ವಿಶ್ಲೇಷಣೆಗಳಿಗೆ ನೆರವಾಗಲಿದೆ.”

Previous Post

ಕುಕ್ಕೆ–ಕೊಲ್ಲೂರು ದೇವಾಲಯಗಳ ಅಭಿವೃದ್ಧಿಗೆ ಹೊಸ ಪ್ರಾಧಿಕಾರ ಘೋಷಣೆ…!

Next Post

ಸಂಚಾರ ನಿಯಮ ಪಾಲನೆಗೆ ಕಾರ್ಕಳದಲ್ಲಿ ಜಾಗೃತಿ ಕಾರ್ಯಕ್ರಮ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸಂಚಾರ ನಿಯಮ ಪಾಲನೆಗೆ ಕಾರ್ಕಳದಲ್ಲಿ ಜಾಗೃತಿ ಕಾರ್ಯಕ್ರಮ…!

ಸಂಚಾರ ನಿಯಮ ಪಾಲನೆಗೆ ಕಾರ್ಕಳದಲ್ಲಿ ಜಾಗೃತಿ ಕಾರ್ಯಕ್ರಮ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಜನಪರ ಬಜೆಟ್ – ಉದಯ್ ಶೆಟ್ಟಿ ಮುನಿಯಾಲು

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಜನಪರ ಬಜೆಟ್ – ಉದಯ್ ಶೆಟ್ಟಿ ಮುನಿಯಾಲು

06/03/2026
ಸಿದ್ದರಾಮಯ್ಯ ಸರಕಾರದ ‘ಸಾಲ ಗ್ಯಾರಂಟಿ’ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಸಿದ್ದರಾಮಯ್ಯ ಸರಕಾರದ ‘ಸಾಲ ಗ್ಯಾರಂಟಿ’ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

06/03/2026
“ರಾಜ್ಯ ಬಜೆಟ್ ‘ಬೃಹತ್ ಶೂನ್ಯ’: ವಿ. ಸುನಿಲ್ ಕುಮಾರ್ ಪ್ರತಿಕ್ರಿಯೆ ”

“ರಾಜ್ಯ ಬಜೆಟ್ ‘ಬೃಹತ್ ಶೂನ್ಯ’: ವಿ. ಸುನಿಲ್ ಕುಮಾರ್ ಪ್ರತಿಕ್ರಿಯೆ ”

06/03/2026
ಸೇವಾ ಲೋಪಗಳಿಂದ ಭಾರತೀಯರಿಗೆ ವರ್ಷಕ್ಕೆ 10.8 ಗಂಟೆಗಳ ನಷ್ಟ; ಶೇ. 44 ರಷ್ಟು ಗ್ರಾಹಕರು ಬ್ರ್ಯಾಂಡ್ ಬದಲಿಸಲು ಸಿದ್ಧ: ಸರ್ವೀಸ್‌ನೌ ಸಂಸ್ಥೆಯ 3ನೇ ‘ಸಿಎಕ್ಸ್’ ವರದಿಯಲ್ಲಿ ಬಹಿರಂಗ…!

ಸೇವಾ ಲೋಪಗಳಿಂದ ಭಾರತೀಯರಿಗೆ ವರ್ಷಕ್ಕೆ 10.8 ಗಂಟೆಗಳ ನಷ್ಟ; ಶೇ. 44 ರಷ್ಟು ಗ್ರಾಹಕರು ಬ್ರ್ಯಾಂಡ್ ಬದಲಿಸಲು ಸಿದ್ಧ: ಸರ್ವೀಸ್‌ನೌ ಸಂಸ್ಥೆಯ 3ನೇ ‘ಸಿಎಕ್ಸ್’ ವರದಿಯಲ್ಲಿ ಬಹಿರಂಗ…!

06/03/2026

Recent News

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಜನಪರ ಬಜೆಟ್ – ಉದಯ್ ಶೆಟ್ಟಿ ಮುನಿಯಾಲು

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಜನಪರ ಬಜೆಟ್ – ಉದಯ್ ಶೆಟ್ಟಿ ಮುನಿಯಾಲು

06/03/2026
ಸಿದ್ದರಾಮಯ್ಯ ಸರಕಾರದ ‘ಸಾಲ ಗ್ಯಾರಂಟಿ’ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಸಿದ್ದರಾಮಯ್ಯ ಸರಕಾರದ ‘ಸಾಲ ಗ್ಯಾರಂಟಿ’ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

06/03/2026
“ರಾಜ್ಯ ಬಜೆಟ್ ‘ಬೃಹತ್ ಶೂನ್ಯ’: ವಿ. ಸುನಿಲ್ ಕುಮಾರ್ ಪ್ರತಿಕ್ರಿಯೆ ”

“ರಾಜ್ಯ ಬಜೆಟ್ ‘ಬೃಹತ್ ಶೂನ್ಯ’: ವಿ. ಸುನಿಲ್ ಕುಮಾರ್ ಪ್ರತಿಕ್ರಿಯೆ ”

06/03/2026
ಸೇವಾ ಲೋಪಗಳಿಂದ ಭಾರತೀಯರಿಗೆ ವರ್ಷಕ್ಕೆ 10.8 ಗಂಟೆಗಳ ನಷ್ಟ; ಶೇ. 44 ರಷ್ಟು ಗ್ರಾಹಕರು ಬ್ರ್ಯಾಂಡ್ ಬದಲಿಸಲು ಸಿದ್ಧ: ಸರ್ವೀಸ್‌ನೌ ಸಂಸ್ಥೆಯ 3ನೇ ‘ಸಿಎಕ್ಸ್’ ವರದಿಯಲ್ಲಿ ಬಹಿರಂಗ…!

ಸೇವಾ ಲೋಪಗಳಿಂದ ಭಾರತೀಯರಿಗೆ ವರ್ಷಕ್ಕೆ 10.8 ಗಂಟೆಗಳ ನಷ್ಟ; ಶೇ. 44 ರಷ್ಟು ಗ್ರಾಹಕರು ಬ್ರ್ಯಾಂಡ್ ಬದಲಿಸಲು ಸಿದ್ಧ: ಸರ್ವೀಸ್‌ನೌ ಸಂಸ್ಥೆಯ 3ನೇ ‘ಸಿಎಕ್ಸ್’ ವರದಿಯಲ್ಲಿ ಬಹಿರಂಗ…!

06/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved