ಬೈಂದೂರು, ಮಾ.05: ಯಡ್ತರೆ ಗ್ರಾಮದ ಬಂಕೇಶ್ವರದಲ್ಲಿ ಇರುವ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಆಭರಣಗಳು ಹಾಗೂ ನಗದು ಕಳವಾಗಿರುವ ಘಟನೆ ಮಾ.4ರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಯಡ್ತರೆ ಗ್ರಾಮದ ಬಂಕೇಶ್ವರ ನಿವಾಸಿ ಕಾರ್ತಿಕ್ ರಮೇಶ್ ರಾಯ್ಕರ್ ಅವರಿಗೆ ಸೇರಿದ ಬಂಕೇಶ್ವರ ರಸ್ತೆಯಲ್ಲಿರುವ ರವಿಕಲಾ ಜ್ಯುವೆಲ್ಲರ್ಸ್ ಅಂಗಡಿಯ ಬೀಗವನ್ನು ಮುರಿದು ಕಳ್ಳರು ಒಳನುಗ್ಗಿದ್ದಾರೆ ಎಂದು ತಿಳಿದುಬಂದಿದೆ.
ಅಂಗಡಿಗೆ ರಿಪೇರಿಗಾಗಿ ನೀಡಲಾಗಿದ್ದ ಸುಮಾರು 12 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಹಾಗೂ ಸುಮಾರು 80 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಕಳವಾಗಿವೆ. ಇದರಲ್ಲಿ ಮೂರು ಬೆಳ್ಳಿಯ ಸರಗಳು, ಒಂದು ಬೆಳ್ಳಿಯ ಬ್ರಾಸ್ಲೆಟ್, ಬೆಳ್ಳಿಯ ಉಂಗುರ ಹಾಗೂ ಅಂಗಡಿಯಲ್ಲಿ ಇರಿಸಿದ್ದ 8,000 ರೂ. ನಗದು ಸೇರಿವೆ.
ಕಳವಾದ ವಸ್ತುಗಳ ಒಟ್ಟು ಮೌಲ್ಯವನ್ನು ಸುಮಾರು 1,23,000 ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





