Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಭದ್ರ ಹಾಗೂ ವಿಶ್ವಾಸಾರ್ಹ ಡಿಜಿಟಲ್ ಮೂಲಸೌಕರ್ಯಗಳ ಮೂಲಕ ಉದ್ಯಮಗಳಿಗೆ ಬಲ ತುಂಬಿ ವೇಗದ ಬೆಳವಣಿಗೆ ಸಾಧಿಸಿದ ಮ್ಯಾನೇಜ್‌ಇಂಜಿನ್….!

Dhrishya News by Dhrishya News
20/02/2026
in ಸುದ್ದಿಗಳು
0
ಭದ್ರ ಹಾಗೂ ವಿಶ್ವಾಸಾರ್ಹ ಡಿಜಿಟಲ್ ಮೂಲಸೌಕರ್ಯಗಳ ಮೂಲಕ ಉದ್ಯಮಗಳಿಗೆ ಬಲ ತುಂಬಿ ವೇಗದ ಬೆಳವಣಿಗೆ ಸಾಧಿಸಿದ ಮ್ಯಾನೇಜ್‌ಇಂಜಿನ್….!
0
SHARES
1
VIEWS
Share on FacebookShare on Twitter

ಫೆ. 20:ಝೋಹೋ ಕಾರ್ಪೊರೇಶನ್‌ ನ ಎಂಟರ್‌ ಪ್ರೈಸ್ ಐಟಿ ನಿರ್ವಹಣಾ ವಿಭಾಗವಾದ ಮ್ಯಾನೇಜ್‌ಇಂಜಿನ್, ವೇಗವಾಗಿ ಡಿಜಿಟಲ್ ಗೆ ರೂಪಾಂತರಗೊಳ್ಳುತ್ತಿರುವ ಸಂಸ್ಥೆಗಳಿಗೆ ವಿಶ್ವಾಸಾರ್ಹ ಐಟಿ ನಿರ್ವಹಣೆ ಮತ್ತು ಸೈಬರ್ ಸೆಕ್ಯೂರಿಟಿ ಪಾಲುದಾರನಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ. 

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗಾಗಿ ಸರಳ ಹಾಗೂ ಸುಲಭವಾಗಿ ಅಳವಡಿಸಬಹುದಾದ ಟೂಲ್ (ಪರಿಕರ) ಗಳನ್ನು ನಿರ್ಮಿಸುವ ದೃಷ್ಟಿಯೊಂದಿಗೆ 2002ರಲ್ಲಿ ಸ್ಥಾಪನೆಯಾದ ಮ್ಯಾನೇಜ್‌ಇಂಜಿನ್ ಸಂಸ್ಥೆಯು, ಇಂದು ಭಾರತದಲ್ಲಿ 10,000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಸಮಗ್ರ ‘ಎಂಡ್-ಟು-ಎಂಡ್’ ಐಟಿ ನಿರ್ವಹಣಾ ವೇದಿಕೆಯಾಗಿ ಬೆಳವಣಿಗೆ ಹೊಂದಿದೆ.

ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮ್ಯಾನೇಜ್‌ಇಂಜಿನ್‌ ಸಂಸ್ಥೆಯು ನಿಜವಾಗಿ ಆರಂಭವಾಗಿದ್ದು 1996ರಲ್ಲಿ. ಆಗ ಕಂಪನಿ ಹೆಸರು ಅಡ್ವೆಂಟ್‌ನೆಟ್ ಎಂಬುದಾಗಿತ್ತು. 2002ರಲ್ಲಿ, ಐಟಿ ನಿರ್ವಹಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಪರಿಪೂರ್ಣಗೊಳಿಸುವ ಉದ್ದೇಶದೊಂದಿಗೆ ಕಂಪನಿಯನ್ನು ‘ಮ್ಯಾನೇಜ್‌ಇಂಜಿನ್’ ಎಂದು ಮರುನಾಮಕರಣ ಮಾಡಲಾಯಿತು. ಇಂದು, ಈ ಸಂಸ್ಥೆ ಭಾರತದಾದ್ಯಂತ 38ಕ್ಕೂ ಹೆಚ್ಚು ಮತ್ತು ಜಾಗತಿಕವಾಗಿ 35ಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿದ್ದು, 180ಕ್ಕೂ ಹೆಚ್ಚು ದೇಶಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಮ್ಯಾನೇಜ್‌ಇಂಜಿನ್ ವಿಶ್ವಾದ್ಯಂತ 6,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಭಾರತದ ಚೆನ್ನೈ ಮತ್ತು ಮುಂಬೈನಲ್ಲಿರುವ ಎರಡು ಡೇಟಾ ಸೆಂಟರ್‌ ಗಳು ಸೇರಿದಂತೆ ಜಾಗತಿಕವಾಗಿ ಸುಮಾರು 20 ಡೇಟಾ ಸೆಂಟರ್‌ ಗಳ ಬೆಂಬಲದೊಂದಿಗೆ ಆನ್- ಪ್ರಿಮೈಸ್ ಮತ್ತು ಕ್ಲೌಡ್ ಉತ್ಪನ್ನಗಳನ್ನು ಒದಗಿಸುತ್ತಿದೆ. ಬೆಂಗಳೂರಿನಲ್ಲಿಯೇ ಈ ಕಂಪನಿಯು ಸ್ಥಳೀಯ ಕಾರ್ಯಾಚರಣೆ ಮತ್ತು ಬೆಂಬಲ ತಂಡದ ಮೂಲಕ 1,000ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುತ್ತಿದೆ.

*ಈ ಕುರಿತು ಮ್ಯಾನೇಜ್‌ಇಂಜಿನ್‌ ನ ರೆವೆನ್ಯೂ ಮತ್ತು ಗ್ರೋತ್ ವಿಭಾಗದ ಪ್ರಾದೇಶಿಕ ಉಪಾಧ್ಯಕ್ಷರಾದ ಅರುಣ್ ಕುಮಾರ್ ಅವರು ಮಾತನಾಡಿ,* “ಎಐ ತಂತ್ರಜ್ಞಾನವು ಉದ್ಯಮಗಳಿಗೆ ವೇಗವಾಗಿ ಹೊಸತನ ಒದಗಿಸುತ್ತಿದೆ. ಆದರೆ, ಜೊತೆಗೆ ಸೈಬರ್ ಅಪಾಯಗಳನ್ನೂ ಹೆಚ್ಚಿಸುತ್ತಿದೆ. ಸಂಸ್ಥೆಗಳು ಇತರರಿಗಿಂತ ಮುಂದಿರಲು ಬಲವಾದ, ವಿಶ್ವಾಸಾರ್ಹ ಮತ್ತು ದೃಢವಾದ ಮೂಲಸೌಕರ್ಯ ವ್ಯವಸ್ಥೆ ಹೊಂದುವುದು ಅಗತ್ಯವಿದೆ. ಉದ್ಯಮಗಳು ತಮ್ಮ ಬೆಳವಣಿಗೆಗೆ ಪೂರಕವಾದ ಸುರಕ್ಷಿತ ಐಟಿ ಅಡಿಪಾಯದೊಂದಿಗೆ ಆತ್ಮವಿಶ್ವಾಸದಿಂದ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ” ಎಂದು ತಿಳಿಸಿದರು.

ಕಳೆದ ಕೆಲವು ವರ್ಷಗಳಲ್ಲಿ, ಮ್ಯಾನೇಜ್‌ಇಂಜಿನ್ ಎಐ ಟೂಲ್ ಗಳಿಂದ ಸಮಗ್ರ ಉತ್ಪನ್ನಗಳ ಶ್ರೇಣಿಯಾಗಿ ಬೆಳೆದು ನಿಂತಿದೆ. ಐಟಿ ಸೇವಾ ನಿರ್ವಹಣೆ (ಐಟಿಎಸ್ಎಂ), ಮೂಲಸೌಕರ್ಯ ಮತ್ತು ನೆಟ್‌ ವರ್ಕ್ ಮಾನಿಟರಿಂಗ್, ಯೂನಿಫೈಡ್ ಎಂಡ್‌ ಪಾಯಿಂಟ್ ಮ್ಯಾನೇಜ್‌ ಮೆಂಟ್, ಸೈಬರ್ ಸೆಕ್ಯೂರಿಟಿ, ಆಕ್ಟಿವ್ ಡೈರೆಕ್ಟರಿ ಮ್ಯಾನೇಜ್‌ಮೆಂಟ್, ಐಟಿ ಅನಾಲಿಟಿಕ್ಸ್ ಮತ್ತು ಕಂಪ್ಲೈಯನ್ಸ್ ರಿಪೋರ್ಟಿಂಗ್ ಸೇರಿದಂತೆ 60ಕ್ಕೂ ಹೆಚ್ಚು ಉತ್ಪನ್ನಗಳನ್ನು ಒಳಗೊಂಡಿದೆ. ಇದರ ಏಕೀಕೃತ ವೇದಿಕೆಯು ಎಂಟರ್‌ ಪ್ರೈಸ್ ಐಟಿಯ ಐದು ನಿರ್ಣಾಯಕ ಸ್ತಂಭಗಳಾದ: ಜನರು, ಎಂಡ್‌ ಪಾಯಿಂಟ್‌ ಗಳು, ಅಪ್ಲಿಕೇಶನ್‌ ಗಳು, ಮೂಲಸೌಕರ್ಯ ಮತ್ತು ಡೇಟಾದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಒದಗಿಸುತ್ತದೆ. ಇದು ಸಂಸ್ಥೆಗಳಿಗೆ ಹಾರ್ಡ್‌ ವೇರ್ ಮತ್ತು ಸಾಫ್ಟ್‌ ವೇರ್ ಗಳನ್ನು ಟ್ರ್ಯಾಕ್ ಮಾಡಲು, ಪರವಾನಗಿ ಪಡೆದ ಮತ್ತು ನವೀಕರಿಸಿದ ಸಿಸ್ಟಮ್‌ ಗಳನ್ನು ಹೊಂದಲು, ಪಾಸ್‌ ವರ್ಡ್ ನೀತಿಗಳನ್ನು ಜಾರಿಗೊಳಿಸಲು, ಪ್ಯಾಚ್‌ ಗಳನ್ನು ನಿರ್ವಹಿಸಲು, ಸೆಷನ್ ರೆಕಾರ್ಡಿಂಗ್‌ ನೊಂದಿಗೆ ಸುರಕ್ಷಿತ ರಿಮೋಟ್ ಪ್ರವೇಶವನ್ನು ಒದಗಿಸಲು ಮತ್ತು ಒಂದೇ ವ್ಯವಸ್ಥೆಯಡಿ ಬದಲಾವಣೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ತನ್ನ ಎಐ- ಚಾಲಿತ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ಮ್ಯಾನೇಜ್‌ಇಂಜಿನ್ ಇತ್ತೀಚೆಗೆ ತನ್ನ ‘ಫುಲ್-ಸ್ಟ್ಯಾಕ್ ಅಬ್ಸರ್ವೇಬಿಲಿಟಿ’ ವೇದಿಕೆಯಾದ ಸೈಟ್24×7 ನಲ್ಲಿ ‘ಕಾಸಲ್ ಇಂಟೆಲಿಜೆನ್ಸ್’ ಮತ್ತು ಸ್ವಾಯತ್ತ ಎಐ ಅನ್ನು ಪರಿಚಯಿಸಿದೆ. ಈ ಸುಧಾರಣೆಗಳು ಅಸಹಜತೆಗಳನ್ನು ಮೊದಲೇ ಪತ್ತೆಹಚ್ಚುವ (ಪ್ರಿಡಿಕ್ಟಿವ್ ಅನಾಮಲಿ ಡಿಟೆಕ್ಷನ್) ಮತ್ತು ಡೊಮೇನ್- ಅವೇರ್ ಈವೆಂಟ್ ಕೋರಿಲೇಶನ್ ಅನ್ನು ಒಳಗೊಂಡಿವೆ. ಈ ವ್ಯವಸ್ಥೆಗಳು ಐಟಿ ತಂಡಗಳಿಗೆ ಅನಗತ್ಯ ಅಲರ್ಟ್‌ ಗಳ ಗದ್ದಲವನ್ನು ಕಡಿಮೆ ಮಾಡಲು, ಮೂಲ ಕಾರಣಗಳನ್ನು ವೇಗವಾಗಿ ಪತ್ತೆಹಚ್ಚಲು ಮತ್ತು ಸಿಸ್ಟಮ್ ಚೇತರಿಸಿಕೊಳ್ಳುವ ಸಮಯವನ್ನು (ಎಂಟಿಟಿಆರ್) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಝೋಹೋದ ಆರ್ಕೆಸ್ಟ್ರೇಶನ್ ಪ್ಲಾಟ್‌ ಫಾರ್ಮ್ ಆದ Qntrl ಮೂಲಕ ನಿಯಂತ್ರಿತ ಪರಿಹಾರ ಕಾರ್ಯಗಳನ್ನು ಸಂಯೋಜಿಸುವ ಮೂಲಕ, ಕಂಪನಿಯು ಉದ್ಯಮ-ದರ್ಜೆಯ ಆಡಳಿತ ಮತ್ತು ಆಡಿಟಿಂಗ್ ಸಾಮರ್ಥ್ಯವನ್ನು ಕಾಯ್ದುಕೊಳ್ಳುವುದರ ಜೊತೆಗೆ, ಹೆಚ್ಚು ಸ್ವಾಯತ್ತ ಮತ್ತು ಸ್ವಯಂ-ಗುಣಪಡಿಸುವ ಐಟಿ ಕಾರ್ಯಾಚರಣೆ ನಡೆಯುವಂತೆ ಅನುವು ಮಾಡಿಕೊಡುತ್ತದೆ.

*ಈ ಕುರಿತು ಮ್ಯಾನೇಜ್‌ಇಂಜಿನ್‌ನ ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ರೋಮಾನಸ್ ಪ್ರಭು ರೇಮಂಡ್ ಅವರು ಮಾತನಾಡಿ,* “ಐಟಿ ಪರಿಸರಗಳು ಹೆಚ್ಚು ಹೈಬ್ರಿಡ್ ಮತ್ತು ಪರಸ್ಪರ ಇಂಟರ್ ಕನೆಕ್ಟ್ ಆಗುತ್ತಿರುವಂತೆ, ಸ್ಪಷ್ಟತೆ ಮತ್ತು ಸಂದರ್ಭೋಚಿತ ಮಾಹಿತಿ ಅತ್ಯಂತ ನಿರ್ಣಾಯಕವಾಗುತ್ತವೆ. ಅದು ಡಿಪಿಡಿಪಿ ಅಡಿಯಲ್ಲಿನ ಅನುಸರಣೆಯಾಗಿರಲಿ ಅಥವಾ ‘ಕಾಸಲ್ ಇಂಟೆಲಿಜೆನ್ಸ್’ ಮೂಲಕ ವೇಗವಾಗಿ ಘಟನೆಗಳಿಗೆ ಪ್ರತಿಕ್ರಿಯಿಸುವುದಾಗಿರಲಿ, ಎಂಡ್‌ ಪಾಯಿಂಟ್‌ ಗಳು, ಅಪ್ಲಿಕೇಶನ್‌ ಗಳು ಮತ್ತು ಮೂಲಸೌಕರ್ಯಗಳಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದಾಗಲಿ ಹೀಗೆ ಎಲ್ಲದರ ಕುರಿತು ಸಂಸ್ಥೆಗಳಿಗೆ ಸ್ಪಷ್ಟತೆ ಬೇಕು. ನಮ್ಮ ವೇದಿಕೆಯು ಉದ್ಯಮಗಳಿಗೆ ಕೇವಲ ಸಮಸ್ಯೆಗಳನ್ನು ಪತ್ತೆಹಚ್ಚಲು ಮಾತ್ರವಲ್ಲದೆ, ಅವುಗಳ ಪ್ರಭಾವವನ್ನು ಅರ್ಥಮಾಡಿಕೊಂಡು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.

ಭಾರತದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ (ಡಿಪಿಡಿಪಿ) ಕಾಯ್ದೆ ಜಾರಿಗೆ ಬರುತ್ತಿರುವುದರಿಂದ, ಉದ್ಯಮಗಳು ಗ್ರಾಹಕರ ಸ್ಪಷ್ಟ ಸಮ್ಮತಿ, ಉದ್ದೇಶದ ಮಿತಿ, 72 ಗಂಟೆಗಳೊಳಗೆ ಡೇಟಾ ಸೋರಿಕೆಯ ವರದಿ ಮತ್ತು ಡೇಟಾ ನಿರ್ವಹಣೆಯಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಮ್ಯಾನೇಜ್‌ಇಂಜಿನ್ ಈಗಾಗಲೇ ಜಾಗತಿಕ ಚೌಕಟ್ಟುಗಳಾದ ಜಿಡಿಪಿಆರ್ (ಯುರೋಪ್), ಸೈಬರ್ ಎಸೆನ್ಷಿಯಲ್ಸ್ (ಯುಕೆ) ಮತ್ತು ಎಸೆನ್ಷಿಯಲ್ ಏಯ್ಟ್ (ಆಸ್ಟ್ರೇಲಿಯಾ) ನಂತಹ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ತನ್ನ ಆಂತರಿಕ ಪ್ರಕ್ರಿಯೆಗಳು ಮತ್ತು ಉತ್ಪನ್ನದ ಸಾಮರ್ಥ್ಯಗಳನ್ನು ಭಾರತದ ಹೊಸ ಕಾಯ್ದೆಗೆ ಅನುಗುಣವಾಗಿ ರೂಪಿಸುತ್ತಿದೆ. ಇದರ ಉತ್ಪನ್ನಗಳು ವಿವರವಾದ ವರದಿಗಳು, ಟೆಲಿಮೆಟ್ರಿ ವಿಶ್ಲೇಷಣೆ ಮತ್ತು ಪಾಲಿಸಿ ಜಾರಿಗೊಳಿಸುವಿಕೆಯ ಮೂಲಕ ನಿಯಮಾನುಸರಣೆಯನ್ನು ಪಾಲಿಸಲು ಬೆಂಬಲ ನೀಡುತ್ತವೆ.

*ಈ ಕುರಿತು ಮ್ಯಾನೇಜ್‌ಇಂಜಿನ್‌ ನ ಪ್ರಾಡಕ್ಟ್ ಹೆಡ್ ರಾಕೇಶ್ ಜಯಪ್ರಕಾಶ್ ಮಾತನಾಡಿ,* “ಡಿಜಿಟಲ್ ಗೆ ರೂಪಾಂತರಗೊಂಡ ಸಂಸ್ಥೆಗಳು ತಾವು ಯಾವಾಗಲೂ ಸೈಬರ್ ದಾಳಿಯ ಅಪಾಯದಲ್ಲಿದ್ದೇವೆ ಎಂಬ ಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಬೇಕು. ನಮ್ಮ ವಿಧಾನವು ಉದ್ಯಮಗಳನ್ನು ಚದುರಿದ ರಕ್ಷಣಾ ವ್ಯವಸ್ಥೆಗಳಿಂದ ಏಕೀಕೃತ ದೃಢ ವ್ಯವಸ್ಥೆಯತ್ತ ಕೊಂಡೊಯ್ಯುತ್ತದೆ. ಈ ವ್ಯವಸ್ಥೆಯು ಸ್ಪಷ್ಟತೆ, ಎಂಡ್‌ ಪಾಯಿಂಟ್ ಮ್ಯಾನೇಜ್‌ಮೆಂಟ್, ಅನಾಲಿಟಿಕ್ಸ್, ಜೀರೋ-ಟ್ರಸ್ಟ್ ಆಕ್ಸೆಸ್ ಮತ್ತು ಸ್ವಯಂಚಾಲಿತ ವರ್ಕ್‌ ಫ್ಲೋಗಳನ್ನು ಒಂದು ಸುಸಂಘಟಿತ ಮತ್ತು ಸುರಕ್ಷಿತ ವೇದಿಕೆಯಾಗಿ ಸಂಯೋಜಿಸುತ್ತದೆ” ಎಂದರು.

ಇಂದಿನ ದಿನಗಳಲ್ಲಿ ಉದ್ಯಮಗಳು ಗುತ್ತಿಗೆದಾರರು, ಪೂರೈಕೆದಾರರು ಮತ್ತು ಗಿಗ್ ವರ್ಕರ್‌ಗಳೊಂದಿಗೆ ಹೆಚ್ಚಾಗಿ ಸಹಯೋಗ ಮಾಡಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಹಳೆಯ ವಿಪಿಎನ್ (ವಿಪಿಎನ್) ಮಾದರಿಗಳು ಇಡೀ ನೆಟ್‌ ವರ್ಕ್ ಅನ್ನು ಅಪಾಯಕ್ಕೆ ಒಡ್ಡುತ್ತವೆ. ಮ್ಯಾನೇಜ್‌ಇಂಜಿನ್ ‘ಜೀರೋ-ಟ್ರಸ್ಟ್ ಆಕ್ಸೆಸ್’ ಮಾದರಿಗಳನ್ನು ಸಕ್ರಿಯಗೊಳಿಸಲಿದ್ದು, ಇದು ಇಡೀ ನೆಟ್‌ ವರ್ಕ್ ಪ್ರವೇಶದ ಬದಲಿಗೆ ಕೇವಲ ಅಪ್ಲಿಕೇಶನ್ ಮಟ್ಟದ ಪ್ರವೇಶವನ್ನು ಮಾತ್ರ ಒದಗಿಸುತ್ತದೆ. ಇದರಿಂದ ಮೇಲ್ವಿಚಾರಣೆ ಸುಲಭವಾಗುತ್ತದೆ ಮತ್ತು ಅಪಾಯಗಳು ಕಡಿಮೆಯಾಗುತ್ತವೆ. ಈ ವೇದಿಕೆಯು ಆರ್‌ಬಿಐ ನಿಯಮಾವಳಿಗಳನ್ನು ಮತ್ತು ಬಿಎಫ್‌ಎಸ್‌ಐ, ಐಟಿ ಮತ್ತು ಐಟಿಇಎಸ್, ಉತ್ಪಾದನೆ, ಆರೋಗ್ಯ, ಶಿಕ್ಷಣ ಮತ್ತು ಸರ್ಕಾರಿ ವಲಯಗಳ ಇತರ ಅಗತ್ಯತೆಗಳನ್ನು ಬೆಂಬಲಿಸುತ್ತದೆ.

ಸಂಸ್ಥೆಗಳು ಆನ್-ಪ್ರಿಮೈಸ್ ವ್ಯವಸ್ಥೆಗಳಿಂದ ಕ್ಲೌಡ್, ಹೈಬ್ರಿಡ್ ಮತ್ತು ಎಐ- ಚಾಲಿತ ಪರಿಸರಕ್ಕೆ ಬದಲಾಗುತ್ತಿರುವಂತೆ, ಮ್ಯಾನೇಜ್‌ಇಂಜಿನ್ ಏಕೀಕೃತ, ಸುರಕ್ಷಿತ ಮತ್ತು ಬುದ್ಧಿವಂತ ಐಟಿ ನಿರ್ವಹಣಾ ವ್ಯವಸ್ಥೆ ಒದಗಿಸುವ ಮೂಲಕ ಉದ್ಯಮಗಳನ್ನು ಸಬಲೀಕರಣಗೊಳಿಸುತ್ತಿದೆ. ಇದು ಅವರ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು, ಉದ್ಯೋಗಿಗಳ ಅನುಭವವನ್ನು ಸುಧಾರಿಸಲು ಮತ್ತು ಭವಿಷ್ಯಕ್ಕಾಗಿ ಸದೃಢ ಡಿಜಿಟಲ್ ಉದ್ಯಮಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ.

Previous Post

ತೆರೆದ ಕೊಳವೆಬಾವಿ; ತಕ್ಷಣ ಕ್ರಮಕ್ಕೆ ಆಗ್ರಹ….!

Next Post

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ವೈಭವೋತ್ಸವಕ್ಕೆ ಭವ್ಯ ಚಾಲನೆ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ವೈಭವೋತ್ಸವಕ್ಕೆ ಭವ್ಯ ಚಾಲನೆ….!

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ವೈಭವೋತ್ಸವಕ್ಕೆ ಭವ್ಯ ಚಾಲನೆ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

20/02/2026
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

20/02/2026
ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

20/02/2026
ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

20/02/2026

Recent News

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

20/02/2026
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

20/02/2026
ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

20/02/2026
ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

20/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved