ಕಾರ್ಕಳ, ಫೆ. 17: ಅತ್ತೂರು ನಿಟ್ಟೆ ಸಮೀಪದ ಮರಿಪರಪು ಪಾದೆಯಲ್ಲಿರುವ ಶ್ರೀ ವ್ಯಾಘ್ರ ಚಾಮುಂಡಿ ದೇವಸ್ಥಾನ ವ್ಯಾಪ್ತಿಯಲ್ಲಿ ನಿರ್ಮಿಸಲಾದ ವ್ಯಾಘ್ರ ಚಾಮುಂಡಿ ಮೈದಾನದ ಉದ್ಘಾಟನಾ ಸಮಾರಂಭವು ಜರುಗಿತು. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಮೈದಾನವನ್ನು ಉದ್ಘಾಟಿಸಿದರು.

ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯ ಆತ್ಮಾನಂದ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಈ ಮೈದಾನ ರೂಪುಗೊಂಡಿದೆ. ಈ ಸ್ಥಳವು ಹಿಂದೆ ಹೊಂಡ-ಗುಂಡಿಗಳಿಂದ ಹಾಗೂ ಕಲ್ಲುಬಂಡೆಗಳಿಂದ ಆವರಿಸಲ್ಪಟ್ಟ ಪ್ರದೇಶವಾಗಿದ್ದು, ಸ್ಥಳೀಯರ ಸಹಕಾರದಿಂದ ಮಣ್ಣು ತುಂಬಿಸಿ ಸಮತಟ್ಟುಗೊಳಿಸಿ ಸುಂದರ ಮೈದಾನವಾಗಿ ಅಭಿವೃದ್ಧಿಪಡಿಸಲಾಗಿದೆ.


ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಇಂತಹ ಮೈದಾನಗಳ ಅಗತ್ಯತೆ ಕುರಿತು ಪ್ರಸ್ತಾಪಿಸಿ, ಸ್ಥಳೀಯರ ಪರಿಶ್ರಮವನ್ನು ಪ್ರಶಂಸಿಸಿದರು.
ವರದಿ – ಅರುಣ್ ಭಟ್ ಕಾರ್ಕಳ







