Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ವಾರಂಬಳ್ಳಿ ; 150 ಕೋ. ರೂ.ವೆಚ್ಚದಲ್ಲಿ ಇಎಸಐ ಆಸ್ಪತ್ರೆ ನಿರ್ಮಾಣ…!!

Dhrishya News by Dhrishya News
14/02/2026
in ಸುದ್ದಿಗಳು
0
ವಾರಂಬಳ್ಳಿ ; 150 ಕೋ. ರೂ.ವೆಚ್ಚದಲ್ಲಿ  ಇಎಸಐ ಆಸ್ಪತ್ರೆ ನಿರ್ಮಾಣ…!!
0
SHARES
5
VIEWS
Share on FacebookShare on Twitter

ಉಡುಪಿ, ಫೆ. 14: .ಜಿಲ್ಲೆಯ ಕಾರ್ಮಿಕ ವರ್ಗದ ದೀರ್ಘಕಾಲದ ಕನಸಾಗಿದ್ದ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪ್ರಸ್ತುತ ಮುಂದುವರಿದಿದೆ. ಈ ಹಿಂದೆ ಟೆಂಡರ್ ಆಹ್ವಾನಿಸಲ್ಪಟ್ಟಿದ್ದರೂ ಯಾವುದೇ ಗುತ್ತಿಗೆದಾರರು ಆಸಕ್ತಿ ತೋರದ ಹಿನ್ನೆಲೆ ಮರು ಟೆಂಡರ್ ಕರೆದಿದ್ದು, ಇದೀಗ ಅಗತ್ಯ ಕ್ರಮಗಳು ಪೂರ್ಣಗೊಂಡಿವೆ.

ಸದ್ಯದಲ್ಲಿಯೇ ಮುಂದಿನ ಪ್ರಕ್ರಿಯೆಗಳು ನೆರವೇರಲಿವೆ.

ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಕಾರ್ಮಿಕ ಸಚಿವಾಲಯದ ಮೂಲಕ ಮಂಜೂರಾಗಿರುವ 100 ಹಾಸಿಗೆಗಳ ಸಾಮರ್ಥಯದ ಬೃಹತ್ ಇಎಸ್‌ಐ ಆಸ್ಪತ್ರೆ ಹಾಗೂ ವೈದ್ಯಾಧಿಕಾರಿಗಳು ಸೇರಿದಂತೆ ಒಟ್ಟು 32 ಸಿಬಂದಿಗೆ ಪ್ರತ್ಯೇಕ ವಸತಿ ಸಂಕೀರ್ಣ ಇದರಲ್ಲಿರಲಿದೆ. ಸುಮಾರು 150 ಕೋ.ರೂ.ವೆಚ್ಚದ ಈ ಯೋಜನೆ 5.21 ಎಕರೆ ಸ್ಥಳದಲ್ಲಿ ನಿರ್ಮಾಣಗೊಳ್ಳಲಿದೆ.

ಹಲವರಿಗೆ ಅನುಕೂಲ

ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಇಎಸ್‌ಐ ಸೌಲಭ್ಯ ಹೊಂದಿದ್ದರೂ, ಉನ್ನತ ಚಿಕಿತ್ಸೆಗಾಗಿ ಮಂಗಳೂರು ಅಥವಾ ದೂರದ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು. ಬ್ರಹ್ಮಾವರದಲ್ಲಿ ಆಸ್ಪತ್ರೆ ನಿರ್ಮಾಣ ವಾಗುತ್ತಿರುವುದರಿಂದ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಭಾಗದ ಸಾವಿರಾರು ಕೈಗಾರಿಕಾ ಕಾರ್ಮಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಗುಣಮಟ್ಟದ ಚಿಕಿತ್ಸೆ ಹತ್ತಿರದಲ್ಲಿಯೇ ಸಿಗಲಿದೆ. ವಿಶೇಷವಾಗಿ ಹೆರಿಗೆ ಸೌಲಭ್ಯ, ಶಸ್ತ್ರಚಿಕಿತ್ಸೆ ಹಾಗೂ ತುರ್ತು ನಿಗಾ ಘಟಕಗಳು ಇಲ್ಲಿ ಲಭ್ಯವಿರಲಿವೆ.

ಶೀಘ್ರದಲ್ಲಿಯೇ ಶಂಕುಸ್ಥಾಪನೆ

ಪ್ರಸ್ತುತ ಟೆಂಡರ್‌ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ತಾಂತ್ರಿಕ ಪ್ರಕ್ರಿಯೆಗಳು ಮುಗಿದ ತತ್‌ಕ್ಷಣವೇ ಕಾಮಗಾರಿ ಆರಂಭವಾಗಲಿದೆ. ಜನಪ್ರತಿನಿಧಿಗಳ ನಿರಂತರ ಶ್ರಮ ಹಾಗೂ ಜಿಲ್ಲೆಯ ಕಾರ್ಮಿಕ ಸಂಘಟನೆಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ. ಈ ಆಸ್ಪತ್ರೆಯು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು. ವಾರಂಬಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಈ ಬೃಹತ್ ಯೋಜನೆ ಸಾಕಾರ ಗೊಳ್ಳುತ್ತಿರುವುದು ಸ್ಥಳೀಯವಾಗಿಯೂ ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗಲಿದೆ. ಕಾಮಗಾರಿ ಅವಧಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಲಿದೆ. ಆಸ್ಪತ್ರೆ ಆರಂಭವಾದ ಅನಂತರವೂ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬಂದಿಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿದೆ.

ಹಲವು ವರ್ಷಗಳ ಬೇಡಿಕೆಯಾಗಿದ್ದ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿ ಮತ್ತೂಮೆ~¾ ಟೆಂಡ‌ರ್ ಆಹ್ವಾನಿಸಿ ಎಲ್ಲ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಮೂಲಕ ಜನರ ಆರೋಗ್ಯ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ಉದ್ದೇಶ ಹೊಂದಲಾಗಿದೆ.

-ಕೋಟ ಶ್ರೀನಿವಾಸ ಪೂಜಾರಿ, ಸಂಸದರು

 

Previous Post

ಕಾರ್ಕಳದ ಅನಂತಪದ್ಮನಾಭ ದೇವರ ದರ್ಶನ ಪಡೆದ ಸದ್ಯೋಜಾತ ಶಂಕರಾಶ್ರಮ ಗುರುಗಳು – ಭಕ್ತರಿಗೆ ಧರ್ಮಮಾರ್ಗದ ಸಂದೇಶ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ವಾರಂಬಳ್ಳಿ ; 150 ಕೋ. ರೂ.ವೆಚ್ಚದಲ್ಲಿ  ಇಎಸಐ ಆಸ್ಪತ್ರೆ ನಿರ್ಮಾಣ…!!

ವಾರಂಬಳ್ಳಿ ; 150 ಕೋ. ರೂ.ವೆಚ್ಚದಲ್ಲಿ ಇಎಸಐ ಆಸ್ಪತ್ರೆ ನಿರ್ಮಾಣ…!!

14/02/2026
ಕಾರ್ಕಳದ ಅನಂತಪದ್ಮನಾಭ ದೇವರ ದರ್ಶನ ಪಡೆದ ಸದ್ಯೋಜಾತ ಶಂಕರಾಶ್ರಮ ಗುರುಗಳು – ಭಕ್ತರಿಗೆ ಧರ್ಮಮಾರ್ಗದ ಸಂದೇಶ

ಕಾರ್ಕಳದ ಅನಂತಪದ್ಮನಾಭ ದೇವರ ದರ್ಶನ ಪಡೆದ ಸದ್ಯೋಜಾತ ಶಂಕರಾಶ್ರಮ ಗುರುಗಳು – ಭಕ್ತರಿಗೆ ಧರ್ಮಮಾರ್ಗದ ಸಂದೇಶ

14/02/2026
ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿ : 25,000ಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಪ್ರಕ್ರಿಯೆ ಆರಂಭ..!

ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿ : 25,000ಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಪ್ರಕ್ರಿಯೆ ಆರಂಭ..!

14/02/2026
ಮಸ್ಕತ್–ಮಂಗಳೂರು ನೇರ ವಿಮಾನ ಸೇವೆ ಮಾರ್ಚ್ ನಿಂದ ಪುನರಾರಂಭ…!!

ಮಸ್ಕತ್–ಮಂಗಳೂರು ನೇರ ವಿಮಾನ ಸೇವೆ ಮಾರ್ಚ್ ನಿಂದ ಪುನರಾರಂಭ…!!

14/02/2026

Recent News

ವಾರಂಬಳ್ಳಿ ; 150 ಕೋ. ರೂ.ವೆಚ್ಚದಲ್ಲಿ  ಇಎಸಐ ಆಸ್ಪತ್ರೆ ನಿರ್ಮಾಣ…!!

ವಾರಂಬಳ್ಳಿ ; 150 ಕೋ. ರೂ.ವೆಚ್ಚದಲ್ಲಿ ಇಎಸಐ ಆಸ್ಪತ್ರೆ ನಿರ್ಮಾಣ…!!

14/02/2026
ಕಾರ್ಕಳದ ಅನಂತಪದ್ಮನಾಭ ದೇವರ ದರ್ಶನ ಪಡೆದ ಸದ್ಯೋಜಾತ ಶಂಕರಾಶ್ರಮ ಗುರುಗಳು – ಭಕ್ತರಿಗೆ ಧರ್ಮಮಾರ್ಗದ ಸಂದೇಶ

ಕಾರ್ಕಳದ ಅನಂತಪದ್ಮನಾಭ ದೇವರ ದರ್ಶನ ಪಡೆದ ಸದ್ಯೋಜಾತ ಶಂಕರಾಶ್ರಮ ಗುರುಗಳು – ಭಕ್ತರಿಗೆ ಧರ್ಮಮಾರ್ಗದ ಸಂದೇಶ

14/02/2026
ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿ : 25,000ಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಪ್ರಕ್ರಿಯೆ ಆರಂಭ..!

ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿ : 25,000ಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಪ್ರಕ್ರಿಯೆ ಆರಂಭ..!

14/02/2026
ಮಸ್ಕತ್–ಮಂಗಳೂರು ನೇರ ವಿಮಾನ ಸೇವೆ ಮಾರ್ಚ್ ನಿಂದ ಪುನರಾರಂಭ…!!

ಮಸ್ಕತ್–ಮಂಗಳೂರು ನೇರ ವಿಮಾನ ಸೇವೆ ಮಾರ್ಚ್ ನಿಂದ ಪುನರಾರಂಭ…!!

14/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved