ಮಂಗಳೂರು,ಫೆ. 14: ಮಸ್ಕತ್–ಮಂಗಳೂರು ನಡುವಿನ ಸ್ಥಗಿತಗೊಂಡಿದ್ದ ನೇರ ವಿಮಾನ ಸೇವೆಯನ್ನು ಮರುಪ್ರಾರಂಭಿಸಲಾಗುವುದಾಗಿ ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಘೋಷಿಸಿದ್ದಾರೆ. ಈ ಮಾರ್ಗವನ್ನು ಪುನರಾರಂಭಿಸುವಂತೆ ಮಸ್ಕತ್ ಹಾಗೂ ಕರಾವಳಿ ಭಾಗದ ಅನಿವಾಸಿ ಭಾರತೀಯರು ಆಗ್ರಹ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಸ್ಕತ್ -ಮಂಗಳೂರು ವಿಮಾನ ಸೇವೆ ಪುನಾರಂಬಿಸುವಂತೆ ಮನವಿ ಮಾಡಿದ್ದರು.
ಸಂಸದರ ಮನವಿಗೆ ಸಚಿವರು ಸ್ಪಂದಿಸಿದ್ದು, ಏರ್ ಇಂಡಿಯಾ ಜೊತೆಗೆ ಸಮಾಲೋಚನೆ ನಡೆಸಲಾಗಿದೆ. 2026ರ ಮಾರ್ಚ್ ನಿಂದ ಜಾರಿಗೆ ಬರುವಂತೆ ಮಸ್ಕತರ್ ನಿಂದ ಮಂಗಳೂರಿಗೆ ನೇರ ವಿಮಾನ ಸೇವೆಯ ಕಾರ್ಯಾಚರಣೆ ಪುನರಾರಂಭಿಸಲು ಏರ್ ಇಂಡಿಯಾ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತಾಗಿ ಏರ್ ಇಂಡಿಯಾ ಮಾಹಿತಿ ನೀಡಿದ್ದು ಟಿಕೆಟ್ ಬುಕಿಂಗ್ ಸೌಲಭ್ಯ ಪ್ರಸ್ತುತ ಲಭ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.







