ಕುಂದಾಪುರ, ಫೆ. 12: ಕುಂಭಾಸಿ ಗ್ರಾಮದಲ್ಲಿರುವ ಮೊಬೈಲ್ ಟವರ್ಗೆ ಅಳವಡಿಸಿದ್ದ 24 ಸೆಲ್ಗಳ ಎಕ್ಸೈಡ್ ಕಂಪೆನಿಯ ಬ್ಯಾಟರಿ ಬ್ಯಾಂಕ್ನಿಂದ 8 ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಟವರ್ನ ನಿರ್ವಹಣೆಯನ್ನು ಟೆಕ್ನೀಶಿಯನ್ ಅವಿನಾಶ್ ಶೆಟ್ಟಿ ನೋಡಿಕೊಳ್ಳುತ್ತಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಬ್ಯಾಟರಿಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ತೇಜ ಟೆಕ್ನಿಕಲ್ ಸರ್ವಿಸ್ ಸಂಸ್ಥೆಯ ಎಸ್ಟೇಟ್ ಮ್ಯಾನೇಜರ್ ನಾಗಕುಮಾರ್ ಸಿ.ಆರ್. ದೂರು ನೀಡಿದ್ದಾರೆ.







