ಫೆ. 09: ಮುರುಡೇಶ್ವರದಲ್ಲಿ ಭಕ್ತಿಭಾವದೊಂದಿಗೆ ಹಿಂದೂ ಸಮಾಜೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು. ವೈಭವಯುತ ಮೆರವಣಿಗೆಯಲ್ಲಿ ಪೂಜ್ಯ ಶ್ರೀಪಾದರು ಪಾಲ್ಗೊಂಡು ಸಮಾರಂಭಕ್ಕೆ ಮಹತ್ವ ಹೆಚ್ಚಿಸಿದರು. ನಂತರ ನಡೆದ ಹಿಂದೂ ಸಮಾಜೋತ್ಸವ ಸಭೆಯನ್ನು ಉದ್ದೇಶಿಸಿ ಪೂಜ್ಯ ಶ್ರೀಪಾದರು ಆಶೀರ್ವಚನ ನೀಡಿ, ಧಾರ್ಮಿಕ ಹಾಗೂ ಸಾಮಾಜಿಕ ಏಕತೆಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮುರುಡೇಶ್ವರ ದೇವರ ದರ್ಶನ ಪಡೆದರು. ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಪೂಜ್ಯ ಶ್ರೀಪಾದರಿಗೆ ದೇವರ ಪ್ರಸಾದ ಸಮರ್ಪಿಸಿ, ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು







