Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home Corporate

ದಾಖಲೆ ಬರೆದ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’: 20,000ಕ್ಕೂ ಹೆಚ್ಚು ಓಟಗಾರರ ಭಾಗಿ

Dhrishya News by Dhrishya News
08/02/2026
in Corporate, Health, News
0
ದಾಖಲೆ ಬರೆದ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’: 20,000ಕ್ಕೂ ಹೆಚ್ಚು ಓಟಗಾರರ ಭಾಗಿ
0
SHARES
8
VIEWS
Share on FacebookShare on Twitter

• 8ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು.

• 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 20,000ಕ್ಕೂ ಅಧಿಕ ಓಟಗಾರರು ಬಾಗಿ

• ವಿವಿಧ ವಿಭಾಗಗಳ ವಿಜೇತರಿಗೆ ಒಟ್ಟು ₹25 ಲಕ್ಷಕ್ಕೂ ಹೆಚ್ಚಿನ ನಗದು ಬಹುಮಾನಗಳನ್ನು ನೀಡಲಾಯಿತು

ಮಣಿಪಾಲ್‌, ಫೆಬ್ರುವರಿ 08, 2026: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ ಆಯೋಜಿಸಿದ್ದ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’, ಫೆಬ್ರವರಿ 8, 2026ರಂದು ಕೆ.ಎಂ.ಸಿ ಗ್ರೀನ್ಸ್‌ನಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿತು. ಭಾರತದ ಅತಿದೊಡ್ಡ ವಿದ್ಯಾರ್ಥಿ ಆಯೋಜಿತ ಫಿಟ್ನೆಸ್ ಕಾರ್ಯಕ್ರಮಗಳಲ್ಲಿ ಒಂದಾದ ಈ ಮ್ಯಾರಥಾನ್‌ನಲ್ಲಿ 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 20,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು ₹25 ಲಕ್ಷಕ್ಕೂ ಅಧಿಕ ಮೊತ್ತದ ನಗದು ಬಹುಮಾನಗಳನ್ನು ನೀಡಲಾಯಿತು.

ಪರಿಸರ ಸಂರಕ್ಷಣೆಯ ಬಗ್ಗೆ ಮಾಹೆ ಹೊಂದಿರುವ ಬದ್ಧತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಈ ವರ್ಷದ ಮ್ಯಾರಥಾನ್ ಅನ್ನು ‘ಹಸಿರು ಭವಿಷ್ಯಕ್ಕಾಗಿ ಹೆಜ್ಜೆಗಳು – ಸುಸ್ಥಿರ ಭವಿಷ್ಯಕ್ಕಾಗಿ ಓಟ’ ಎಂಬ ಆಶಯದೊಂದಿಗೆ ಆಯೋಜಿಸಲಾಗಿತ್ತು. ಮರ ನೆಡುವಿಕೆ, ಜೀವವೈವಿಧ್ಯದ ಸಂರಕ್ಷಣೆ, ಸೌರಶಕ್ತಿಯ ಬಳಕೆ, ತ್ಯಾಜ್ಯ ನಿರ್ವಹಣೆ, ಮಳೆನೀರು ಸಂಗ್ರಹಣೆ ಹಾಗೂ ಸುಸ್ಥಿರ ಸಂಚಾರ ವ್ಯವಸ್ಥೆಯಂತಹ ಮಾಹೆಯ ನಿರಂತರ ಪರಿಸರ ಸ್ನೇಹಿ ಕಾರ್ಯಕ್ರಮಗಳಿಗೆ ಈ ಮ್ಯಾರಥಾನ್ನ ಆಶಯ ಪೂರಕವಾಗಿತ್ತು. ಈ ಅಭಿಯಾನದ ಪ್ರಭಾವವು ಕೇವಲ ಕ್ಯಾಂಪಸ್‌ಗೆ ಸೀಮಿತವಾಗದೆ, ಇಡೀ ಸಮುದಾಯಕ್ಕೆ ವಿಸ್ತರಿಸುವಲ್ಲಿ ಮ್ಯಾರಥಾನ್‌ ಯಶಸ್ವಿಯಾಯಿತು.

ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮಾಹೆಯ ಸಹ-ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ‘ಮಣಿಪಾಲ ಮ್ಯಾರಥಾನ್‌ನ 8ನೇ ಆವೃತ್ತಿಗೆ ವ್ಯಕ್ತವಾಗಿರುವ ಅಭೂತಪೂರ್ವ ಸ್ಪಂದನೆ, ಶಿಕ್ಷಣದ ಜೊತೆಗೆ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಮಾಹೆಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. 20,000ಕ್ಕೂ ಹೆಚ್ಚು ಓಟಗಾರರನ್ನು ಒಂದುಗೂಡಿಸುವ ಮೂಲಕ ನಾವು ಕೇವಲ ಫಿಟ್‌ನೆಸ್ ಮತ್ತು ಆರೋಗ್ಯವನ್ನು ಉತ್ತೇಜಿಸುತ್ತಿಲ್ಲ, ಬದಲಿಗೆ ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಒಳಿತಿಗಾಗಿ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದೇವೆ. ಕೇವಲ ವಿದ್ಯಾರ್ಥಿಗಳ ಕಾರ್ಯಕ್ರಮವಾಗಿ ಪ್ರಾರಂಭವಾದ ಇದು ಭಾರತದ ಅತಿದೊಡ್ಡ ಸಮುದಾಯ ಫಿಟ್‌ನೆಸ್ ಕಾರ್ಯಕ್ರಮಗಳಲ್ಲಿ ಒಂದಾಗಿ ಇಂದು ಬೆಳೆದಿದೆ. 10ಕ್ಕೂ ಹೆಚ್ಚು ದೇಶಗಳ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯʼ ಎಂದು ಹೇಳಿದರು.

ದುಬೈ, ಇಂಗ್ಲೆಂಡ್, ಇಥಿಯೋಪಿಯ, ಜರ್ಮನಿ, ಕೀನ್ಯಾ, ಜಪಾನ್, ಮಲೇಷ್ಯಾ, ನೇಪಾಳ, ಶ್ರೀಲಂಕಾ ಮತ್ತು ಅಮೆರಿಕ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳ 100ಕ್ಕೂ ಅಧಿಕ ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸುವ ಮೂಲಕ ಈ ಕ್ರೀಡಾಕೂಟಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದಾರೆ. ಮಣಿಪಾಲ್‌ ಮ್ಯಾರಥಾನ್‌ನ ವಿಶೇಷ ಆಕರ್ಷಣೆ, 42 ಕಿ.ಮೀ. ಪೂರ್ಣ ಮ್ಯಾರಥಾನ್ನ ಕಡಲತೀರದ ಮಾರ್ಗವಾಗಿದ್ದು. ಇದು ಓಟಗಾರರಿಗೆ ಮರೆಯಲಾಗದ ಸುಂದರ ಅನುಭವ ನೀಡಿತು. ಇದರೊಂದಿಗೆ, ಈ ವರ್ಷ ಹೊಸದಾಗಿ ಪರಿಚಯಿಸಲಾದ ‘ಮಣಿಪಾಲ ಹಾಸ್ಪಿಸ್ ರೆಸ್ಪೈಟ್ ಸೆಂಟರ್’ ಅನ್ನು ಒಳಗೊಂಡ 10 ಕಿ.ಮೀ. ಓಟದ ಮಾರ್ಗವು, ಸಾಮಾಜಿಕ ಕಳಕಳಿ ಮತ್ತು ಸಮುದಾಯದ ಒಳಿತಿಗಾಗಿ ಮ್ಯಾರಥಾನ್‌ ಹೊಂದಿರುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿತು.

ಈ ವೇಳೆ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ (ನಿವೃತ್ತ), ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ಶರತ್ ರಾವ್, ಮಂಗಳೂರು ಕ್ಯಾಂಪಸ್ಸಿನ ಸಹ ಕುಲಪತಿ ಡಾ| ದಿಲೀಪ್ ನಾಯ್ಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್, ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದ ಕುಲಪತಿ ಡಾ. ಗೋಪಾಲಕೃಷ್ಣ ಪ್ರಭು, ಸೇರಿ ಮಾಹೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು.

ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಮಾಹೆ ಬದ್ಧತೆಗೆ ಅನುಗುಣವಾಗಿ, ಮಣಿಪಾಲ ಮ್ಯಾರಥಾನ್‌ನಲ್ಲಿ ಅಂಗವಿಕಲರು ಹಾಗೂ ಅಂಧರಿಗಾಗಿ ಪ್ರತ್ಯೇಕ ವಿಭಾಗಗಳನ್ನು ಮೀಸಲಿಡಲಾಗಿತ್ತು. ಇದರಲ್ಲಿ xxx ಅಂಗವಿಕಲರು ಮತ್ತು ಅಂಧ ಕ್ರೀಡಾಪಟುಗಳು ಅತ್ಯಂತ ಸಕ್ರಿಯವಾಗಿ ಭಾಗವಹಿಸಿದ್ದರು. ಅಲ್ಲದೆ, ವಯೋಮಾನದ ಆಧಾರದ ಮೇಲೂ ವಿವಿಧ ವಿಭಾಗಗಳನ್ನು ವರ್ಗೀಕರಿಸಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿತ್ತು.

ʼಮಣಿಪಾಲ ಮ್ಯಾರಥಾನ್ 2026ʼ ಅನ್ನು ಬೃಹತ್ ಯಶಸ್ಸಿನತ್ತ ಮುನ್ನಡೆಸಲು ನಿರಂತರ ಬೆಂಬಲ ನೀಡಿದ ಶೀರ್ಷಿಕೆ ಪ್ರಾಯೋಜಕರಾದ ಐಸಿಐಸಿಐ ಬ್ಯಾಂಕ್, ಯುನೆಕ್ಟ್ , ಡೆಲಾಯ್ಟ್ , ಬಿಓಬಿಕಾರ್ಡ್ ಮತ್ತು ಇತರ ಎಲ್ಲಾ ಪ್ರಾಯೋಜಕರಿಗೆ ಮಾಹೆ ಕಡೆಯಿಂದ ಹೃತ್ಪೂರ್ವಕ ಕೃತಜ್ಞತೆಗಳು.

ವಿವಿಧ ವಿಭಾಗಗಳಲ್ಲಿ ವಿಜೇತರಾದವರ ಹೆಸರುಗಳು ಹೀಗಿವೆ: (ವಿಜೇತರ ಹೆಸರು).

ಓಟದ ನಂತರ ನಡೆದ ಸಂಭ್ರಮದ ಕಾರ್ನಿವಲ್‌ನೊಂದಿಗೆ ಮ್ಯಾರಥಾನ್‌ ಪೂರ್ಣಗೊಂಡಿತು. ಇದರಲ್ಲಿ ಫಿಟ್‌ನೆಸ್ ಆಸಕ್ತರು ಮತ್ತು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಸಂಗೀತ, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಸಂವಾದಾತ್ಮಕ ಫಿಟ್‌ನೆಸ್ ಮತ್ತು ಜುಂಬಾ ಸೆಷನ್‌ಗಳು ಮ್ಯಾರಥಾನ್‌ನ ಸಡಗರಕ್ಕೆ ಮತ್ತಷ್ಟು ಮೆರುಗು ನೀಡಿದವು.

The names of winners across various categories are:

42K Fastest Male

1 Sathish Kumar

2 Sachin Poojari

3 Desye Endalew

42 Fastest Female

1 Senait Kefelegn Lesharge

2 Yenealem Ayano Buli

3 Neeti Kriplani

21K Fastest Male

1 Rijwan Ali

2 Shashwath Rajesh Poojary

3 Nalinakshan Kizhakkedath

21K Fastest Female

1 Bhawana Negi

2 Nandini G

3 Rutuja Patil

10K Fastest Male

1 Shivanand Chigari

2 Shreedhara SN

3 Mubarak R Dantali

10K Fastest Female

1 Shahin S Dharwad

2 Shreya Moodekallu

3 Chaithra TP

5K Fastest Male

1 Nagaraj Divate

2 Ranga

3 Manjunath Belurappanavar

5K Fastest Female

1 Nagini Nagini

2 HV Deeksha

3 Rekha B.P. Basappa Piroji

Previous Post

ಸೃಷ್ಟಿ ಮಣಿಪಾಲ್ ಸಂಸ್ಥೆಯು ನ್ಯೂಯಾರ್ಕ್‌ನ ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದೊಂದಿಗೆ “ಬೀಯಿಂಗ್ ಹೈಪರ್ ಹ್ಯೂಮನ್” – ಛಾಯಾಗ್ರಹಣ ಪ್ರದರ್ಶನ ಪ್ರಾರಂಭ

Next Post

ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಅಂಧ ಮಹಿಳಾ ತಂಡಕ್ಕೆ ‘ಮಾಹೆ’ಯಿಂದ ಸನ್ಮಾನ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಅಂಧ ಮಹಿಳಾ ತಂಡಕ್ಕೆ ‘ಮಾಹೆ’ಯಿಂದ ಸನ್ಮಾನ

ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಅಂಧ ಮಹಿಳಾ ತಂಡಕ್ಕೆ 'ಮಾಹೆ'ಯಿಂದ ಸನ್ಮಾನ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಅಂಧ ಮಹಿಳಾ ತಂಡಕ್ಕೆ ‘ಮಾಹೆ’ಯಿಂದ ಸನ್ಮಾನ

ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಅಂಧ ಮಹಿಳಾ ತಂಡಕ್ಕೆ ‘ಮಾಹೆ’ಯಿಂದ ಸನ್ಮಾನ

08/02/2026
ದಾಖಲೆ ಬರೆದ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’: 20,000ಕ್ಕೂ ಹೆಚ್ಚು ಓಟಗಾರರ ಭಾಗಿ

ದಾಖಲೆ ಬರೆದ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’: 20,000ಕ್ಕೂ ಹೆಚ್ಚು ಓಟಗಾರರ ಭಾಗಿ

08/02/2026
ಸೃಷ್ಟಿ ಮಣಿಪಾಲ್ ಸಂಸ್ಥೆಯು ನ್ಯೂಯಾರ್ಕ್‌ನ ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದೊಂದಿಗೆ “ಬೀಯಿಂಗ್ ಹೈಪರ್ ಹ್ಯೂಮನ್” – ಛಾಯಾಗ್ರಹಣ ಪ್ರದರ್ಶನ ಪ್ರಾರಂಭ

ಸೃಷ್ಟಿ ಮಣಿಪಾಲ್ ಸಂಸ್ಥೆಯು ನ್ಯೂಯಾರ್ಕ್‌ನ ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದೊಂದಿಗೆ “ಬೀಯಿಂಗ್ ಹೈಪರ್ ಹ್ಯೂಮನ್” – ಛಾಯಾಗ್ರಹಣ ಪ್ರದರ್ಶನ ಪ್ರಾರಂಭ

08/02/2026
ಉಡುಪಿ :ಗಾಯಕಿ ಮಾಧುರಿ ಕೌಶಿಕ್ ಹಾಗೂ ತಂಡದಿಂದ  ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಉಡುಪಿ :ಗಾಯಕಿ ಮಾಧುರಿ ಕೌಶಿಕ್ ಹಾಗೂ ತಂಡದಿಂದ  ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

08/02/2026

Recent News

ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಅಂಧ ಮಹಿಳಾ ತಂಡಕ್ಕೆ ‘ಮಾಹೆ’ಯಿಂದ ಸನ್ಮಾನ

ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಅಂಧ ಮಹಿಳಾ ತಂಡಕ್ಕೆ ‘ಮಾಹೆ’ಯಿಂದ ಸನ್ಮಾನ

08/02/2026
ದಾಖಲೆ ಬರೆದ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’: 20,000ಕ್ಕೂ ಹೆಚ್ಚು ಓಟಗಾರರ ಭಾಗಿ

ದಾಖಲೆ ಬರೆದ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’: 20,000ಕ್ಕೂ ಹೆಚ್ಚು ಓಟಗಾರರ ಭಾಗಿ

08/02/2026
ಸೃಷ್ಟಿ ಮಣಿಪಾಲ್ ಸಂಸ್ಥೆಯು ನ್ಯೂಯಾರ್ಕ್‌ನ ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದೊಂದಿಗೆ “ಬೀಯಿಂಗ್ ಹೈಪರ್ ಹ್ಯೂಮನ್” – ಛಾಯಾಗ್ರಹಣ ಪ್ರದರ್ಶನ ಪ್ರಾರಂಭ

ಸೃಷ್ಟಿ ಮಣಿಪಾಲ್ ಸಂಸ್ಥೆಯು ನ್ಯೂಯಾರ್ಕ್‌ನ ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದೊಂದಿಗೆ “ಬೀಯಿಂಗ್ ಹೈಪರ್ ಹ್ಯೂಮನ್” – ಛಾಯಾಗ್ರಹಣ ಪ್ರದರ್ಶನ ಪ್ರಾರಂಭ

08/02/2026
ಉಡುಪಿ :ಗಾಯಕಿ ಮಾಧುರಿ ಕೌಶಿಕ್ ಹಾಗೂ ತಂಡದಿಂದ  ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಉಡುಪಿ :ಗಾಯಕಿ ಮಾಧುರಿ ಕೌಶಿಕ್ ಹಾಗೂ ತಂಡದಿಂದ  ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

08/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved