ನವದೆಹಲಿ :ಫೆಬ್ರವರಿ 01 :ಕೇಂದ್ರ ಬಜೆಟ್ ಮಂಡನೆಗೆ ಮುನ್ನ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಿಗ್ಗೆ ಸಂಸತ್ ಭವನಕ್ಕೆ ಆಗಮಿಸಿದರು. ಬಜೆಟ್ಗೆ ಅಧಿಕೃತ ಅನುಮೋದನೆ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ಈ ಮೂಲಕ ಅವರು ಸತತವಾಗಿ 9 ನೇ ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ.
ಈ ಹಿಂದೆ 1999ರಲ್ಲಿ ಭಾನುವಾರ ಬಜೆಟ್ ಮಂಡನೆ ಆಗಿತ್ತು. ಆಗ ದಿನಾಂಕ ಫೆ.28 ಆಗಿತ್ತು ಹಾಗೂ ಯಶವಂತ ಸಿನ್ಹಾ ಹಣಕಾಸು ಸಚಿವರಾಗಿ ದ್ದರು. ಆದರೆ ನಂತರ ಫೆ.1ಕ್ಕೆ ಬಜೆಟ್ ದಿನಾಂಕ ಬದಲಾಗಿತ್ತು. ಫೆ.1ಕ್ಕೆ ಬಜೆಟ್ ದಿನಾಂಕ ಬದ ಲಾದ ನಂತರ ಭಾನುವಾರ ಬಜೆಟ್ ಮಂಡನೆ ಇದೇ ಮೊದಲು ಹಾಗೂ ಒಟ್ಟಾರೆ 2ನೇ ಬಜೆಟ್.
ಕೇಂದ್ರ ಸರ್ಕಾರವು ಈ ಬಾರಿ ರಕ್ಷಣೆ, ಮೂಲಸೌಕರ್ಯ, ರಫ್ತು, ರೈಲ್ವೆ, ಇಂಧನ, ಅಗ್ಗದ ಮನೆಗಳಿಗೆ ನೆರವು, ಬಂಡವಾಳ ವೆಚ್ಚ ಏರಿಕೆಯತ್ತ ಸರ್ಕಾರ ಗಮನ ಹರಿಸುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶ್ವದ ಅತಿ ವೇಗದ ಆರ್ಥಿಕತೆಯ ಗತಿ ಕಾಪಾಡಲು ವಿವಿಧ ಕ್ರಮಗಳ ಜೊತೆಗೆ, ಸಾಮಾಜಿಕ ಕಲ್ಯಾಣ ಯೋಜನೆಗಳು ಈ ಬಾರಿಯು ಆದ್ಯತೆ ಪಡೆಯಲಿವೆ. ಇದರ ಜೊತೆಗೆ ಜೊತೆಗೆ ವಿತ್ತೀಯ ಶಿಸ್ತಿನ ಮೇಲೂ ಸರ್ಕಾರ ನಿಗಾ ಇರಿಸಲಿದೆ ಎನ್ನಲಾಗಿದೆ.






