Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ದೋಣಿ ದುರಂತದ ಬಳಿಕ ಎಚ್ಚರಿಕೆ: ಅಕ್ರಮ ಪ್ರವಾಸೋದ್ಯಮಕ್ಕೆ ಬ್ರೇಕ್‌, 45 ದಿನಗಳಲ್ಲಿ ನೋಂದಣಿ ಕಡ್ಡಾಯ…!!

Dhrishya News by Dhrishya News
29/01/2026
in ಕರಾವಳಿ
0
ದೋಣಿ ದುರಂತದ ಬಳಿಕ ಎಚ್ಚರಿಕೆ: ಅಕ್ರಮ ಪ್ರವಾಸೋದ್ಯಮಕ್ಕೆ ಬ್ರೇಕ್‌, 45 ದಿನಗಳಲ್ಲಿ ನೋಂದಣಿ ಕಡ್ಡಾಯ…!!
0
SHARES
9
VIEWS
Share on FacebookShare on Twitter

ಉಡುಪಿ ಜ. 29 : ಹಂಗಾರಕಟ್ಟೆ ಸಮೀಪದ ಬೆಂಗ್ರೆಯಲ್ಲಿ ನಡೆದ ದೋಣಿ ದುರಂತದಲ್ಲಿ ಮೂವರು ಪ್ರಾಣ ಕಳೆದುಕೊಂಡ ಘಟನೆ ಬಳಿಕ ಜಿಲ್ಲಾಡಳಿತ ಸೇರಿದಂತೆ ಪ್ರವಾಸೋದ್ಯಮ, ಬಂದರು ಹಾಗೂ ಪೊಲೀಸ್‌ ಇಲಾಖೆ ಚಟುವಟಿಕೆಗೆ ಮುಂದಾಗಿವೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳ ಮೇಲೆ ಅಧಿಕಾರಿಗಳ ಗಮನ ಹರಿದಿದ್ದು, ಇಂತಹ ಚಟುವಟಿಕೆ ನಡೆಸುತ್ತಿರುವವರು 45 ದಿನಗಳೊಳಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿವೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಅನಧಿಕೃತವಾಗಿ ಪ್ರವಾಸೋದ್ಯಮ ಚಟುವಟಿಕೆಗಳ ಬಗ್ಗೆ ಗಮನದಲ್ಲಿದ್ದರೂ ಈವರೆಗೂ ಪರಿಣಾಮಕಾರಿಯಾದ ಕ್ರಮಗಳನ್ನು ವಿವಿಧ ಇಲಾಖೆಗಳು ಕೈಗೊಂಡಿರಲಿಲ್ಲ. ಇದೂ ಸಹ ದೋಣಿ ದುರಂತಕ್ಕೆ ಕಾರಣ ಎಂಬ ಅಭಿಪ್ರಾಯವೂ ಸಾರ್ವಜನಿಕರದ್ದು. ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಅಗತ್ಯ ಎಂಬುದು ಸ್ಥಳೀಯರ ಆಗ್ರಹ.

 

ಅಕ್ರಮ ಹೋಂ ಸ್ಟೇಗಳು

ಕರಾವಳಿ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅಕ್ರಮ ಹೋಂ ಸ್ಟೇಗಳೂ ಸಾಕಷ್ಟಿವೆ. ಇವುಗಳಿಂದ ಪರಿಸರಕ್ಕೂ ಹಾನಿ ಹಾಗೂ ಅನಧಿಕೃತವಾಗಿ ಕೆಲವು ಸಾಹಸ ಚಟುವಟಿಕೆಗಳನ್ನೂ ನಡೆಸುತ್ತಿವೆ. ಇವುಗಳ ವಿರುದ್ಧವೂ ಜಿಲ್ಲಾಡಳಿತ ಹಾಗೂ ಇಲಾಖೆಗಳು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂದಿದೆ.

 

ವೀಡಿಯೋ ವೈರಲ್‌

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಹಾಗೂ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸಹಿತ ಕೆಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಜ.26ರಂದು ಸೈಂಟ್‌ ಮೇರಿಸ್‌ ದ್ವೀಪಕ್ಕೆ ಹೋಗುವ ಸಂದರ್ಭದಲ್ಲಿ ಲೈಪ್‌ ಜಾಕೆಟ್‌ ಧರಿಸದೇ ಕೈಯಲ್ಲಿ ಹಿಡಿದುಕೊಂಡು ದೋಣಿಯಲ್ಲಿ ಸಾಗುತ್ತಿರುವ ವೀಡಿಯೋ ಈಗ ಎಲ್ಲೆಡೆ ಹರಡಿದೆ. ಸಚಿವರು, ಅಧಿಕಾರಿಗಳೇ ನಿಯಮ ಪಾಲಿಸದೇ ಸಾರ್ವಜನಿಕರಿಗೆ ನಿಯಮ ಪಾಲಿಸಿ ಎಂದು ಹೇಗೆ ಹೇಳುತ್ತಾರೆ ಎಂಬುದು ಹಲವರ ಪ್ರಶ್ನೆ. ನೋಂದಣಿ ಕಡ್ಡಾಯ

ನಿಯಮಗಳ ಪ್ರಕಾರ, ಪ್ರತಿಯೊಂದು ದೋಣಿಯಲ್ಲೂ ಎಲ್ಲ ಪ್ರಯಾಣಿಕರಿಗೆ ಲೈಫ್‌ ಜಾಕೆಟ್‌ಗಳನ್ನು ಒದಗಿಸಬೇಕಿದ್ದು, ತುರ್ತು ಪರಿಸ್ಥಿತಿಯಲ್ಲಿ ಅವುಗಳನ್ನು ಧರಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜ. 27ರಂದು ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಜಿಲ್ಲಾಡಳಿ ತವು ಇನ್ನಷ್ಟು ಕಠಿಣ ಕ್ರಮಗಳಿಗೆ ಮುಂದಾಗಿದೆ. ದೋಣಿ ಪ್ರಯಾಣದ ಸಂಪೂರ್ಣ ಅವಧಿಯಲ್ಲಿ ಲೈಫ್‌ ಜಾಕೆಟ್‌ ಕಡ್ಡಾಯವಾಗಿ ಧರಿಸುವ ನಿಯಮ ಜಾರಿ ಹಾಗೂ ಧರಿಸದವರ ವಿರುದ್ಧ ದಂಡ ವಿಧಿಸಲು ಚಿಂತನೆ ನಡೆದಿದೆ. ಈ ಸಂಬಂಧ ಎಲ್ಲ ದೋಣಿ ಮಾಲಕರಿಗೆ, ಸಾರ್ವಜನಿಕರಿಗೆ ಮಾಹಿತಿ, ಎಚ್ಚರಿಕೆ ಸಂದೇಶ ನೀಡಲಿದ್ದೇವೆ ಎಂದು ಎಸ್‌ ಪಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ.

 

ಠಾಣೆಯಲ್ಲಿ ಸಭೆ

ವಾಟರ್‌ ಸೋರ್ಟ್ಸ್ ಹಾಗೂ ಟೂರಿಸ್ಟ್‌ ಬೋಟ್‌, ಕಯಾಕಿಂಗ್‌ ಮಾಲಕರ ಸಭೆಯೂ‌ ಮಲ್ಪೆಯ ಕರಾವಳಿ ಕಾವಲು ಪಡೆಯ ಪೊಲೀಸ್‌ ಠಾಣೆಯಲ್ಲಿ ಡಿವೈಎಸ್‌ಪಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗಿದೆ. 40 ಬೋಟ್‌ ಮಾಲಕರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಸರಿಯಾದ ದಾಖಲೆಗಳನ್ನು ಕಡಾªಯವಾಗಿ ಸಿದ್ಧಪಡಿಸಿಕೊಂಡು ಬೋಟ್‌/ ಕಯಾಕಿಂಗ್‌ ಹಾಗೂ ಇನ್ನಿತರ ವಾಟರ್‌ನ್ಪೋರ್ಟ್ಸ್ ಚಟುವಟಿಕೆಗಳನ್ನು ನಡೆಸುವಂತೆ ಸಭೆಯಲ್ಲಿ ಸೂಚಿಸಲಾಗಿದೆ.

ಭ್ರಷ್ಟಾಚಾರಕ್ಕೂ ಬೀಳಲಿ ಕಡಿವಾಣ: 

ಅನೇಕ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಹೊಸ ನೋಂದಣಿ, ನೋಂದಣಿ ನವೀಕರಣದ ಸಂದರ್ಭದಲ್ಲಿ ನಿಯಮ ಮೀರಿ ನಡೆದುಕೊಳ್ಳುವವರ ಬಗ್ಗೆ ಮಾಹಿತಿಯಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಕಾರಣ ಅಧಿಕಾರಿಗಳು ಪ್ರವಾಸೋದ್ಯಮ ಚಟುವಟಿಕೆ ನಡೆಸುವವರಿಂದ ಯಾವುದೋ ರೀತಿಯಲ್ಲಿ ಅನುಕೂಲತೆ ಪಡೆದಿರುತ್ತಾರೆ. ಹೀಗಾಗಿ ಅಧಿಕಾರಗಳ ಹಂತದಲ್ಲಿ ನಡೆಯುವ ಎಲ್ಲ ರೀತಿಯ ಭ್ರಷ್ಟಾಚಾರ ಮೊದಲು ನಿಲ್ಲಬೇಕು ಎಂಬ ದೂರುಗಳು ಕೇಳಿ ಬರುತ್ತಿವೆ.  

 

Previous Post

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ನಟ ಮಯೂರ್ ಪಟೇಲ್ – ನಾಲ್ಕು ವಾಹನಗಳಿಗೆ ಹಾನಿ..!!

Next Post

ಕೇರಳದ ಕೊಟ್ಟಾಯಂನಲ್ಲಿ ಕಾರು ಅಪಘಾತ: ಮೂಲ್ಕಿಯ ಯುವಕ ಶಮೀಮ್ ಸಾವು, ನಾಲ್ವರು ಗಾಯ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕೇರಳದ ಕೊಟ್ಟಾಯಂನಲ್ಲಿ ಕಾರು ಅಪಘಾತ: ಮೂಲ್ಕಿಯ ಯುವಕ ಶಮೀಮ್ ಸಾವು, ನಾಲ್ವರು ಗಾಯ…!

ಕೇರಳದ ಕೊಟ್ಟಾಯಂನಲ್ಲಿ ಕಾರು ಅಪಘಾತ: ಮೂಲ್ಕಿಯ ಯುವಕ ಶಮೀಮ್ ಸಾವು, ನಾಲ್ವರು ಗಾಯ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ ನವ ನರಸಿಂಹ ವಜ್ರ ಕವಚದ ಭಕ್ತಾರ್ಪಣೆ…!

ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ ನವ ನರಸಿಂಹ ವಜ್ರ ಕವಚದ ಭಕ್ತಾರ್ಪಣೆ…!

29/01/2026
ಕೈಲಾಜೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ; ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಭೇಟಿ…!!

ಕೈಲಾಜೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ; ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಭೇಟಿ…!!

29/01/2026
ಕೇರಳದ ಕೊಟ್ಟಾಯಂನಲ್ಲಿ ಕಾರು ಅಪಘಾತ: ಮೂಲ್ಕಿಯ ಯುವಕ ಶಮೀಮ್ ಸಾವು, ನಾಲ್ವರು ಗಾಯ…!

ಕೇರಳದ ಕೊಟ್ಟಾಯಂನಲ್ಲಿ ಕಾರು ಅಪಘಾತ: ಮೂಲ್ಕಿಯ ಯುವಕ ಶಮೀಮ್ ಸಾವು, ನಾಲ್ವರು ಗಾಯ…!

29/01/2026
ದೋಣಿ ದುರಂತದ ಬಳಿಕ ಎಚ್ಚರಿಕೆ: ಅಕ್ರಮ ಪ್ರವಾಸೋದ್ಯಮಕ್ಕೆ ಬ್ರೇಕ್‌, 45 ದಿನಗಳಲ್ಲಿ ನೋಂದಣಿ ಕಡ್ಡಾಯ…!!

ದೋಣಿ ದುರಂತದ ಬಳಿಕ ಎಚ್ಚರಿಕೆ: ಅಕ್ರಮ ಪ್ರವಾಸೋದ್ಯಮಕ್ಕೆ ಬ್ರೇಕ್‌, 45 ದಿನಗಳಲ್ಲಿ ನೋಂದಣಿ ಕಡ್ಡಾಯ…!!

29/01/2026

Recent News

ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ ನವ ನರಸಿಂಹ ವಜ್ರ ಕವಚದ ಭಕ್ತಾರ್ಪಣೆ…!

ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ ನವ ನರಸಿಂಹ ವಜ್ರ ಕವಚದ ಭಕ್ತಾರ್ಪಣೆ…!

29/01/2026
ಕೈಲಾಜೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ; ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಭೇಟಿ…!!

ಕೈಲಾಜೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ; ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಭೇಟಿ…!!

29/01/2026
ಕೇರಳದ ಕೊಟ್ಟಾಯಂನಲ್ಲಿ ಕಾರು ಅಪಘಾತ: ಮೂಲ್ಕಿಯ ಯುವಕ ಶಮೀಮ್ ಸಾವು, ನಾಲ್ವರು ಗಾಯ…!

ಕೇರಳದ ಕೊಟ್ಟಾಯಂನಲ್ಲಿ ಕಾರು ಅಪಘಾತ: ಮೂಲ್ಕಿಯ ಯುವಕ ಶಮೀಮ್ ಸಾವು, ನಾಲ್ವರು ಗಾಯ…!

29/01/2026
ದೋಣಿ ದುರಂತದ ಬಳಿಕ ಎಚ್ಚರಿಕೆ: ಅಕ್ರಮ ಪ್ರವಾಸೋದ್ಯಮಕ್ಕೆ ಬ್ರೇಕ್‌, 45 ದಿನಗಳಲ್ಲಿ ನೋಂದಣಿ ಕಡ್ಡಾಯ…!!

ದೋಣಿ ದುರಂತದ ಬಳಿಕ ಎಚ್ಚರಿಕೆ: ಅಕ್ರಮ ಪ್ರವಾಸೋದ್ಯಮಕ್ಕೆ ಬ್ರೇಕ್‌, 45 ದಿನಗಳಲ್ಲಿ ನೋಂದಣಿ ಕಡ್ಡಾಯ…!!

29/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved