ಉಡುಪಿ, ಮಾ.14: ಆಯಾತಪ್ಪಿ ಬಿದ್ದು ಗಾಯಗೊಂಡಿದ್ದ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಶುಕ್ರವಾರ ನಡೆದಿದೆ.
ಮಹಾತ್ಮ ಗಾಂಧೀಜಿಯವರ ತದ್ರೂಪಿಯಂತೆ ಕಾಣುತ್ತಿದ್ದ ಈ ವೃದ್ಧರು ವಿವಿಧ ಸಭೆ-ಸಮಾರಂಭಗಳು ಹಾಗೂ ಶೋಭಾಯಾತ್ರೆಗಳಲ್ಲಿ ಗಾಂಧೀಜಿಯವರ ವೇಷಧಾರಿಯಾಗಿ ಕಲಾಪ್ರದರ್ಶನ ನೀಡುತ್ತಿದ್ದ ಕಲಾವಿದರಾಗಿದ್ದಾರೆ.
ಗಾಯಗೊಂಡ ವೃದ್ಧರನ್ನು ತಕ್ಷಣವೇ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ವಾರಸುದಾರರು ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.






