Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಕರಾವಳಿ ರೈತರಿಂದ ಪೇರಳೆ ಕೃಷಿಯಲ್ಲಿ ಹೊಸ ಪ್ರಯತ್ನ – ಹವಾಮಾನದ ಸವಾಲುಗಳನ್ನು ಮೀರಿಸಿ ಯಶಸ್ಸು..!

Dhrishya News by Dhrishya News
28/01/2026
in ಕರಾವಳಿ
0
ಕರಾವಳಿ ರೈತರಿಂದ ಪೇರಳೆ ಕೃಷಿಯಲ್ಲಿ ಹೊಸ ಪ್ರಯತ್ನ – ಹವಾಮಾನದ ಸವಾಲುಗಳನ್ನು ಮೀರಿಸಿ ಯಶಸ್ಸು..!
0
SHARES
8
VIEWS
Share on FacebookShare on Twitter

ಕಾರ್ಕಳ ಜ. 28:ಕರಾವಳಿಯಲ್ಲಿ ಪೇರಳೆಗಳನ್ನು ವ್ಯಾಪಕವಾಗಿ ವಾಣಿಜ್ಯ ರೀತಿಯಲ್ಲಿ ಬೆಳೆಯುವುದು ಅಪರೂಪ. ಆದರೆ ಕಾರ್ಕಳ ತಾಲ್ಲೂಕಿನ ಇನ್ನಾ ಗ್ರಾಮದಲ್ಲಿನ ಕೆಲ ರೈತರು ಈ ಅಪರೂಪದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಪೇರಳೆಗಳಿಗೆ ಈ ಪ್ರದೇಶದ ಹೆಚ್ಚು ಮಳೆಯ ಹವಾಮಾನ ಸರಿಹೊಂದುವುದಿಲ್ಲ. ಆದರೂ ಹವಾಮಾನದ ಸವಾಲುಗಳನ್ನು ಎದುರಿಸುತ್ತಾ ಈ ರೈತರು ಯಶಸ್ವಿಯಾಗಿ ಕೃಷಿ ನಡೆಸುತ್ತಿದ್ದಾರೆ.

ಸುಮಾರು ಐದು ವರ್ಷಗಳ ಹಿಂದೆ ಇನ್ನಾ ಭಾಗದಲ್ಲಿ ರೈತರ ಗುಂಪು ಪ್ರಾಯೋಗಿಕವಾಗಿ ಪೇರಳೆ ಬೆಳೆಯನ್ನು ಆರಂಭಿಸಿತ್ತು. ಈಗ ಸುಮಾರು 8–10 ರೈತರು ಸುಮಾರು 5 ಎಕರೆ ಪ್ರದೇಶದಲ್ಲಿ ಪೇರಳೆ ಬೆಳೆಸುತ್ತಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಅಭಿವೃದ್ಧಿಪಡಿಸಿದ ‘ಅರ್ಕ ಕಿರಣ’ ತಳಿಯನ್ನು ಇಲ್ಲಿ ಹತ್ತಿರದಿಂದ ಬೆಳೆಸಲಾಗಿದೆ.

ತೋಟಗಾರಿಕಾ ಇಲಾಖೆಯ ಸಬ್ಸಿಡಿ ಸೌಲಭ್ಯ ಹಾಗೂ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕೃಷಿ ಮಾಡಲಾಗುತ್ತಿದೆ. ಆದರೆ, ನಿರೀಕ್ಷಿತವಾದ ಬೆಳೆ ಮತ್ತು ಲಾಭ ಬರುತ್ತಿಲ್ಲ. ಮಾರುಕಟ್ಟೆಯಲ್ಲಿಯೂ ಬೇಡಿಕೆ ಇದ್ದರೂ ಬೆಳೆಗಾರರ ಶ್ರಮಕ್ಕೆ ತಕ್ಕ ಬೆಲೆ ಸಿಗಲೂ ಕಷ್ಟವಾಗುತ್ತಿದೆ ಎನ್ನುವುದು ರೈತರ ಅಸಮಾಧಾನ.

ಪೇರಳೆ ಕೃಷಿಯನ್ನು ಒಬ್ಬರೇ ಮಾಡುವುದು ಕಷ್ಟಕರ. ಎಂಟತ್ತು ಮಂದಿ ರೈತರು ಸೇರಿ ಗುಂಪು ಕೃಷಿ ಮಾಡುವುದರಿಂದ ಸರಕಾರಿ ಸಬ್ಸಿಡಿ ಪಡೆಯಲು ಸುಲಭವಾಗುತ್ತದೆ ಮತ್ತು ಮಾರುಕಟ್ಟೆ ವ್ಯವಸ್ಥೆಗೂ ಅನುಕೂಲವಾಗುತ್ತದೆ. ಈ ಭಾಗದ ಹವಾಮಾನಕ್ಕೆ ಪೇರಳೆ ಅಷ್ಟಾಗಿ ಹೊಂದುವುದಿಲ್ಲವಾದರೂ, ರೈತರ ಆಸಕ್ತಿ ಮತ್ತು ಸೂಕ್ತ ನಿರ್ವಹಣೆಯಿಂದ ಕೆಲವರಿಂದ ಉತ್ತಮ ಬೆಳೆ ತೆಗೆಯಲು ಸಾಧ್ಯವಾಗಿದೆ ಎಂದು ಕೃಷಿಕ, ಕಂಜಾರಕಟ್ಟೆಯ ದೀಪಕ್‌ ಕಾಮತ್‌ ತಿಳಿಸಿದ್ದಾರೆ.

ಪೇರಳೆ ಪೌಷ್ಟಿಕಾಂಶದ ಗಣಿ

ಪೇರಳೆಯ ಅರ್ಕ ಕಿರಣ ತಳಿಯು ಹೇರಳವಾದ ಪೌಷ್ಟಿಕಾಂಶ ಹೊಂದಿದೆ. ಅತ್ಯಂತ ರುಚಿಕರವಾಗಿದೆ. ಇದರ ಹೊರಪದರ ಅತ್ಯಂತ ಮೃದುವಾಗಿದೆ. ಈ ಪೇರಳೆಯನ್ನು ಗ್ರಾಹಕರಿಗೆ ನೇರವಾಗಿ ಇನ್ನಾ ಭಾಗದ ರೈತರಿಂದಲೇ ಖರೀದಿಸಲು ಅವಕಾಶವಿದೆ. ಇದನ್ನು ಹಿಂದೆ ಸಂಯೋಜಿತ ಬೆಳೆಯಾಗಿ ಬೆಳೆಸಲಾಗುತ್ತಿತ್ತು, ಆದರೆ ಈಗ ಪ್ರತ್ಯೇಕವಾಗಿಯೂ ಬೆಳೆಯಲಾಗುತ್ತಿದೆ. ತಿನ್ನಲೂ ಮಾತ್ರವಲ್ಲ ಐಸ್‌ಕ್ರೀಂ, ಜ್ಯೂಸ್‌, ಜಾಮ್‌ಗೆ ಬಳಕೆ ಮಾಡಲಾಗುತ್ತದೆ ಎಂದು ಕೃಷಿಕರು ತಿಳಿಸಿದ್ದಾರೆ.

ವರ್ಷಕ್ಕೆ ಎರಡು ಬೆಳೆ ಮಾತ್ರ

ಬೆಂಗಳೂರು ಮತ್ತು ಘಟ್ಟ ಪ್ರದೇಶದಲ್ಲಿ ಪೇರಳೆಯಲ್ಲಿ ವರ್ಷಕ್ಕೆ ಮೂರು ಬೆಳೆ ತೆಗೆಯಲಾಗುತ್ತದೆ. ಕರಾವಳಿಯ ಮಳೆಯ ಸವಾಲಿನ ನಡುವೆಯೂ ಇಲ್ಲಿನ ರೈತರು ವರ್ಷಕ್ಕೆ ಎರಡು ಬೆಳೆ (ಮಳೆಗೆ ಮೊದಲು ಮತ್ತು ಮಳೆಯ ನಂತರ) ಪಡೆಯುತ್ತಿದ್ದಾರೆ. ಇಳುವರಿ ಒಮ್ಮೊಮ್ಮೆ ಕೈ ಕೊಡುತ್ತದೆ, ಒಮ್ಮೆ ಉತ್ತಮವಾಗಿರುತ್ತದೆ. ಆರಂಭದಲ್ಲಿ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ನೆರವು ನೀಡಲಾಗಿತ್ತು.

– ಶ್ರೀನಿವಾಸ್‌, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕಾರ್ಕ

Previous Post

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಹೊಸ ಸೌಭಾಗ್ಯ – ನೋಟ್‌ಬುಕ್‌ಗಳು ಇನ್ಮುಂದೆ ಸಂಪೂರ್ಣ ಉಚಿತ: ಮಧು ಬಂಗಾರಪ್ಪ…!

Next Post

ಲಂಡನ್‌ ನಿಂದ ಪುಣೆಯ ರಿಟೇಲ್ ಮಳಿಗೆಗಳವರೆಗೆ: ಜಾಗತಿಕವಾಗಿ ಶಿಕ್ಷಣ ಪಡೆದ ಯುವಜನತೆ ರಿಟೇಲ್ ತರಬೇತಿಯನ್ನು ಆರಿಸಿಕೊಳ್ಳುತ್ತಿರುವುದು ಏಕೆ..?

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಲಂಡನ್‌ ನಿಂದ ಪುಣೆಯ ರಿಟೇಲ್ ಮಳಿಗೆಗಳವರೆಗೆ: ಜಾಗತಿಕವಾಗಿ ಶಿಕ್ಷಣ ಪಡೆದ ಯುವಜನತೆ ರಿಟೇಲ್ ತರಬೇತಿಯನ್ನು ಆರಿಸಿಕೊಳ್ಳುತ್ತಿರುವುದು ಏಕೆ..?

ಲಂಡನ್‌ ನಿಂದ ಪುಣೆಯ ರಿಟೇಲ್ ಮಳಿಗೆಗಳವರೆಗೆ: ಜಾಗತಿಕವಾಗಿ ಶಿಕ್ಷಣ ಪಡೆದ ಯುವಜನತೆ ರಿಟೇಲ್ ತರಬೇತಿಯನ್ನು ಆರಿಸಿಕೊಳ್ಳುತ್ತಿರುವುದು ಏಕೆ..?

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

28/01/2026

Recent News

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

28/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved