Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ವಿ-ಗಾರ್ಡ್‌ನ ಸ್ವದೇಶಿ ತಯಾರಿಕೆಯ ಇಂಡಕ್ಷನ್ ಕುಕ್‌ಟಾಪ್‌ಗೆ ಭಾರತದ ಮೊಟ್ಟಮೊದಲ 5-ಸ್ಟಾರ್ ಬಿಇಇ ರೇಟಿಂಗ್ ಗೌರವ

~ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ನೀಡಿದ ಈ 5- ಸ್ಟಾರ್ ರೇಟಿಂಗ್ ಗೌರವವು ವಿ-ಗಾರ್ಡ್‌ ಸಂಸ್ಥೆಯು ಸ್ವದೇಶಿ ವಿನ್ಯಾಸ, ಉತ್ಪಾದನಾ ಶ್ರೇಷ್ಠತೆ ಮತ್ತು ಇಂಧನ ದಕ್ಷತೆಯ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿ ಇರುವುದನ್ನು ತೋರಿಸುತ್ತದೆ. ~

Dhrishya News by Dhrishya News
13/01/2026
in मौसम
0
ವಿ-ಗಾರ್ಡ್‌ನ ಸ್ವದೇಶಿ ತಯಾರಿಕೆಯ ಇಂಡಕ್ಷನ್ ಕುಕ್‌ಟಾಪ್‌ಗೆ ಭಾರತದ ಮೊಟ್ಟಮೊದಲ 5-ಸ್ಟಾರ್ ಬಿಇಇ ರೇಟಿಂಗ್ ಗೌರವ
0
SHARES
5
VIEWS
Share on FacebookShare on Twitter

ಭಾರತ, 13 ಜನವರಿ 2026: ಭಾರತದ ಪ್ರಮುಖ ಗ್ರಾಹಕ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆದ ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ತನ್ನ ಇಂಡಕ್ಷನ್ ಕುಕ್‌ಟಾಪ್ ಮಾದರಿ ವಿಐಸಿ06ವಿ1 ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, ಈ ಮಾಡೆಲ್ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಯಿಂದ 5- ಸ್ಟಾರ್ (★★★★★) ಇಂಧನ ದಕ್ಷತೆಯ ರೇಟಿಂಗ್ ಪಡೆದ ಭಾರತದ ಮೊದಲ ಇಂಡಕ್ಷನ್ ಕುಕ್‌ಟಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ಈ ಮನ್ನಣೆಯು ಇಂಧನ-ದಕ್ಷತೆ ಆವಿಷ್ಕಾರ, ಆಂತರಿಕ ಉತ್ಪಾದನಾ ಶ್ರೇಷ್ಠತೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ವಿ-ಗಾರ್ಡ್ ನ ಬದ್ಧತೆಯನ್ನು ಸಾರುತ್ತದೆ. ವಿಐಸಿ06ವಿ1 ಇಂಡಕ್ಷನ್ ಕುಕ್‌ಟಾಪ್ ಅನ್ನು ವಿ- ಗಾರ್ಡ್‌ನ ಪೆರುಂದುರೈನಲ್ಲಿರುವ ಅತ್ಯಾಧುನಿಕ ಘಟಕದಲ್ಲಿ ವಿನ್ಯಾಸಗೊಳಿಸಿ ತಯಾರಿಸಲಾಗಿದ್ದು, ಇದು ಬ್ರಾಂಡ್‌ ನ ಸ್ವದೇಶಿ ವಿನ್ಯಾಸದ ಮೇಲಿನ ಗಮನವನ್ನು ತೋರಿಸುತ್ತದೆ. ಇದಲ್ಲದೆ, ಈ ಮಾದರಿಯು ಗ್ರಾಹಕರಿಗೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವೇಗವಾದ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ಅಡುಗೆ ಮಾಡಲು ಅನುವುಮಾಡಿಕೊಡುತ್ತದೆ. ಕಾರ್ಯಕ್ಷಮತೆ ಅಥವಾ ಅನುಕೂಲತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುದಿಲ್ಲ.

 

ವಿಐಸಿ06ವಿ1 (5- ಸ್ಟಾರ್ ಬಿಇಇ ರೇಟಿಂಗ್ ಹೊಂದಿರುವ) ಇಂಡಕ್ಷನ್ ಕುಕ್‌ಟಾಪ್ ಗರಿಷ್ಠ 1600 ವ್ಯಾಟ್ ಪವರ್ ಔಟ್‌ ಪುಟ್ ನೀಡುತ್ತದೆ. ಇದು ಎಂಟು ವಿವಿಧ ಪವರ್ ಮತ್ತು ತಾಪಮಾನ ಹಂತಗಳನ್ನು ಹಾಗೂ ಎಂಟು ಪ್ರೀಸೆಟ್ ಅಡುಗೆ ಮೋಡ್‌ ಗಳನ್ನು ಹೊಂದಿದ್ದು, ದೈನಂದಿನ ಅಡುಗೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರ ಸಾಫ್ಟ್- ಟಚ್ ಸ್ವಿಚ್ ಕಂಟ್ರೋಲ್‌ ಗಳು, ಡಿಜಿಟಲ್ ಡಿಸ್‌ಪ್ಲೇ, 4-ಗಂಟೆಗಳ ಟೈಮರ್, 24-ಗಂಟೆಗಳ ಪ್ರೀಸೆಟ್ ಫಂಕ್ಷನ್ ಮತ್ತು ವೋಲ್ಟೇಜ್ ಇಂಡಿಕೇಟರ್‌ ಗಳು ಕಾರ್ಯನಿರ್ವಹಣೆಯನ್ನು ಅತ್ಯಂತ ಸರಳಗೊಳಿಸುತ್ತವೆ.

 

ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಗಮನದಲ್ಲಿಟ್ಟುಕೊಂಡು, ಈ ಕುಕ್‌ಟಾಪ್ ಅನ್ನು 3 ಕೆವಿ ಸರ್ಜ್ ಪ್ರೊಟೆಕ್ಷನ್, ಹೈ- ಲೋ ವೋಲ್ಟೇಜ್ ಕಟ್-ಆಫ್ ಮತ್ತು ಬಿಐಎಸ್ ಪ್ರಮಾಣೀಕರಣದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಗ್ರೇಡ್-ಎ ಕ್ರಿಸ್ಟಲಿನ್ ಗ್ಲಾಸ್ ಪ್ಯಾನಲ್ ದೀರ್ಘ ಬಾಳಿಕೆ ಒದಗಿಸುತ್ತದೆ ಮತ್ತು ಪ್ರೀಮಿಯಂ ಫಿನಿಶ್ ಹೊಂದಿದೆ. ಈ ಉತ್ಪನ್ನಕ್ಕೆ 1 ವರ್ಷದ ವಾರಂಟಿ ಮತ್ತು ಇಂಡಕ್ಷನ್ ಕಾಯಿಲ್ ಮೇಲೆ 3 ವರ್ಷಗಳ ವಾರಂಟಿ ಲಭ್ಯವಿದೆ.

 

*ಈ ಕುರಿತು ಮಾತನಾಡಿದ ವಿ- ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಿಥುನ್ ಚಿಟ್ಟಿಲಪ್ಪಿಳ್ಳಿ* ಅವರು, “ಈ ಮನ್ನಣೆಯು ಸ್ವದೇಶಿ ವಿನ್ಯಾಸ, ಉತ್ಪಾದನಾ ಶ್ರೇಷ್ಠತೆ ಮತ್ತು ಗುಣಮಟ್ಟದ ಮಾನದಂಡಗಳ ಮೇಲೆ ನಾವು ಹೊಂದಿರುವ ಗಮನವನ್ನು ತೋರಿಸುತ್ತದೆ. ಈ ಮೈಲಿಗಲ್ಲು ಸಾಧನೆಯು ಉದ್ಯಮದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ ಮತ್ತು ಇಂಧನ- ದಕ್ಷತೆಯ ಗೃಹೋಪಯೋಗಿ ಉಪಕರಣಗಳಲ್ಲಿ ವಿ- ಗಾರ್ಡ್‌ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದೆ” ಎಂದು ಹೇಳಿದರು.

 

ಈ ಮಹತ್ವದ ಸಾಧನೆಯೊಂದಿಗೆ, ವಿ- ಗಾರ್ಡ್‌ನ ವಿಐಸಿ06ವಿ1 ಭಾರತದ ಇಂಡಕ್ಷನ್ ಕುಕಿಂಗ್ ವಿಭಾಗದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಆಧುನಿಕ ಭಾರತೀಯ ಕುಟುಂಬಗಳಿಗೆ ಸುಸ್ಥಿರ ಮತ್ತು ಉನ್ನತ-ಕಾರ್ಯಕ್ಷಮತೆಯ ಅಡುಗೆ ಉಪಕರಣಗಳನ್ನು ಒದಗಿಸುವಲ್ಲಿ ಕಂಪನಿಯ ಮಹತ್ವದ ಪಾತ್ರವನ್ನು ಸಾರಿದೆ.

Previous Post

ಶಬರಿಮಲೆ ಯಾತ್ರೆಗೆ ತೆರಳಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ..!!

Next Post

HERO MOTOCORP MARKS NATIONAL ROAD SAFETY MONTH WITH THREE-MONTH ‘RIDE SAFE INDIA’ CAMPAIGN

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
HERO MOTOCORP MARKS NATIONAL ROAD SAFETY MONTH WITH THREE-MONTH ‘RIDE SAFE INDIA’ CAMPAIGN

HERO MOTOCORP MARKS NATIONAL ROAD SAFETY MONTH WITH THREE-MONTH ‘RIDE SAFE INDIA’ CAMPAIGN

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

28/01/2026

Recent News

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

28/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved