Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ವಿಜ್ಞಾನ ಮತ್ತು ತಂತ್ರಜ್ಞಾನ

ಮೂವ್‌ವರ್ಕ್ಸ್ ಅನ್ನು ಸ್ವಾಧೀನ ಪಡಿಸಿಕೊಂಡ ಸರ್ವೀಸ್‌ನೌ..!!

Dhrishya News by Dhrishya News
18/12/2025
in ವಿಜ್ಞಾನ ಮತ್ತು ತಂತ್ರಜ್ಞಾನ
0
ಮೂವ್‌ವರ್ಕ್ಸ್ ಅನ್ನು ಸ್ವಾಧೀನ ಪಡಿಸಿಕೊಂಡ ಸರ್ವೀಸ್‌ನೌ..!!
0
SHARES
2
VIEWS
Share on FacebookShare on Twitter

ಈ ಮೂಲಕ ಏಜೆಂಟಿಕ್ ಎಐ, ಬುದ್ಧಿವಂತ ಕಾರ್ಯನಿರ್ವಹಣೆ ಮತ್ತು ಎಂಟರ್‌ಪ್ರೈಸ್ ಸರ್ಚ್‌ ಸಾಮರ್ಥ್ಯವನ್ನು ಸಂಯೋಜಿಸಿ ಉದ್ಯಮಗಳ ಉದ್ಯೋಗಿಗಳ ಕೆಲಸವನ್ನು ಸುಗಮಗೊಳಿಸುವ ವಿಶ್ವದ ಅತ್ಯಂತ ಸುಧಾರಿತ ಎಐ ಪ್ಲಾಟ್‌ಫಾರ್ಮ್ ಅನ್ನು ಒದಗಿಸಲಾಗುತ್ತದೆ.

ಬೆಂಗಳೂರು : ಉದ್ಯಮವನ್ನು ಮರುರೂಪಿಸಿಕೊಳ್ಳಲು ನೆರವಾಗುವ ಎಐ ಕಂಟ್ರೋಲ್ ಟವರ್ ಆಗಿರುವ ಸರ್ವೀಸ್‌ನೌ (NYSE: NOW) ಸಂಸ್ಥೆಯು ಇಂದು ಮೂವ್‌ವರ್ಕ್ಸ್‌ ನ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಿದೆ. ಈ ಸ್ವಾಧೀನ ಪ್ರಕ್ರಿಯೆಯು ಜನರಿಗಾಗಿ ಎಐಯನ್ನು ದುಡಿಸಿಕೊಳ್ಳುವ ಸರ್ವೀಸ್‌ನೌನ ದೂರದೃಷ್ಟಿಗೆ ಪೂರಕವಾಗಿ ಕೆಲಸ ಮಾಡಲಿದೆ. ಈ ಮೂಲಕ ಸರ್ವೀಸ್‌ನೌನ ವಿಶ್ವಾಸಾರ್ಹ ಏಜೆಂಟಿಕ್ ಎಐ ಮತ್ತು ಬುದ್ಧಿವಂತ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಮೂವ್‌ವರ್ಕ್ಸ್‌ ನ ಮುಂಚೂಣಿಯ ಎಐ ಅಸಿಸ್ಟೆಂಟ್, ಎಂಟರ್‌ಪ್ರೈಸ್ ಸರ್ಚ್ ಮತ್ತು ಏಜೆಂಟಿಕ್ ರೀಸನಿಂಗ್ ಎಂಜಿನ್‌ ಸೌಲಭ್ಯದ ಜೊತೆಗೆ ಸಂಯೋಜಿಸಲಾಗುತ್ತಿದ್ದು, ಜೊತೆಯಾಗಿ ಈ ಕಂಪನಿಗಳು ಸರ್ವೀಸ್‌ನೌ ಎಐ ಪ್ಲಾಟ್‌ಫಾರ್ಮ್‌ನ ಸಾಮರ್ಥ್ಯಗಳನ್ನು ಹೆಚ್ಚಿಸಿ, ಉದ್ಯೋಗಿಗಳು ಕೆಲಸವನ್ನು ನಿರ್ವಹಿಸುವ ರೀತಿಯನ್ನು ಸುಗಮಗೊಳಿಸಲಿದೆ ಮತ್ತು ಮರುರೂಪಿಸಲಿದೆ. ಈ ಮೂಲಕ ವೇಗವಾದ ಫಲಿತಾಂಶಗಳು ದೊರೆಯಲಿದೆ, ಎಐ ಅಳವಡಿಕೆ ಹೆಚ್ಚಲಿದೆ ಮತ್ತು ಜನರು ಬಳಸಲು ಇಷ್ಟಪಡುವ ಎಐ ಅನುಭವಗಳನ್ನು ಸೃಷ್ಟಿಸಲಾಗುತ್ತದೆ.

 

*ಈ ಸಂದರ್ಭದಲ್ಲಿ ಮಾತನಾಡಿರುವ ಸರ್ವೀಸ್‌ನೌನ ಅಧ್ಯಕ್ಷ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಮತ್ತು ಮುಖ್ಯ ಉತ್ಪನ್ನ ಅಧಿಕಾರಿ ಅಮಿತ್ ಜವೇರಿ* ಅವರು, “ಉದ್ಯಮದಲ್ಲಿರುವ ಎಲ್ಲಾ ವಿಭಾಗಗಳ ಜನರ ಕೆಲಸವನ್ನು ಸುಲಭಗೊಳಿಸಲು ಎಐಯನ್ನು ದುಡಿಸಿಕೊಳ್ಳುವ ಸರ್ವೀಸ್‌ನೌನ ದೂರದೃಷ್ಟಿಯನ್ನು ಮೂವ್‌ವರ್ಕ್ಸ್ ಸಂಸ್ಥೆಯು ವೇಗಗೊಳಿಸಲಿದೆ. ಒಂದೇ ಆರ್ಕಿಟೆಕ್ಚರ್ ಅಥವಾ ವಾಸ್ತುಶಿಲ್ಪದಲ್ಲಿ ನಿರ್ಮಿತವಾದ ಬುದ್ಧಿಮತ್ತೆಯನ್ನು ಎರಡು ದಶಕಗಳ ಕಾಲ ಕಾರ್ಯನಿರ್ವಹಣೆಗೆ ಬಳಸಿಕೊಂಡಿರುವ ಪರಿಣತಿಯ ಆಧಾರದಲ್ಲಿ ನಾವು ಉದ್ಯಮಗಳಿಗಾಗಿ ಶಕ್ತಿಯುತ ಏಜೆಂಟಿಕ್ ಎಐ ಆಪರೇಟಿಂಗ್ ಸಿಸ್ಟಂ ಅನ್ನು ಒದಗಿಸುತ್ತಿದ್ದೇವೆ. ಮೂವ್‌ವರ್ಕ್ಸ್‌ ನ ಎಐ ಅಸಿಸ್ಟೆಂಟ್ ಮತ್ತು ಸರ್ವೀಸ್‌ನೌನ ಏಜೆಂಟಿಕ್ ಪ್ಲಾಟ್‌ಫಾರ್ಮ್ ಒಟ್ಟಿಗೆ ಸುರಕ್ಷಿತವಾಗಿ, ಜವಾಬ್ದಾರಿಯುತವಾಗಿ ಮತ್ತು ವಿಸ್ತಾರವಾಗಿ ಮಾತುಕತೆಗಳನ್ನು ಸಂಪೂರ್ಣ ಕೆಲಸವಾಗಿ ಪರಿವರ್ತಿಸುವ, ಗ್ರಾಹಕರು ಸಮಸ್ಯೆಗಳನ್ನು ಅಟೋಮ್ಯಾಟಿಕ್ ಆಗಿ ಪರಿಹರಿಸಲು ಅನುವು ಮಾಡಿಕೊಡುವ, ಬುದ್ಧಿವಂತ ಕಾರ್ಯನಿರ್ವಹಣೆಗೆ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ಅನುವು ಮಾಡಿಕೊಡುವ ಎಐ ಆಧರಿತ ಜಗತ್ತಿನ ಬಾಗಿಲನ್ನು ತೆರೆಯಲಿದೆ” ಎಂದು ಹೇಳಿದರು.

 

*ಮೂವ್‌ವರ್ಕ್ಸ್‌ ನ ಸಿಇಓ ಭವಿನ್ ಶಾ* ಅವರು ಮಾತನಾಡಿ, “ಕೆಲಸವನ್ನು ಸುಲಭಗೊಳಿಸಲು, ಅದಕ್ಕೆ ಪೂರಕವಾಗಿ ಕೆಲಸವನ್ನು ಮಾಡಿ ಮುಗಿಸುವ ಶಕ್ತಿಶಾಲಿ ಎಐ ಸಹಾಯಕ ಪ್ಲಾಟ್‌ಫಾರ್ಮ್ ನಿರ್ಮಿಸಲು ಮೂವ್‌ವರ್ಕ್ಸ್ ಅನ್ನು ಸ್ಥಾಪಿಸಲಾಯಿತು. ಇದೀಗ ಸರ್ವೀಸ್‌ನೌ ಸಂಸ್ಥೆ ಜೊತೆಗೆ ಸೇರ್ಪಡೆಯಾಗುವ ಮೂಲಕ, ನಮ್ಮ ರೀಸನಿಂಗ್ ಎಂಜಿನ್‌ ಆಧರಿತವಾದ ನಮ್ಮ ಎಐ ಅಸಿಸ್ಟೆಂಟ್ ಮತ್ತು ಎಂಟರ್‌ಪ್ರೈಸ್ ಸರ್ಚ್ ಅನ್ನು ಹಾಗೂ ಸರ್ವೀಸ್‌ನೌ ನ ವಿಶ್ವಾಸಾರ್ಹ ವರ್ಕ್ ಫ್ಲೋ ಆಟೋಮೇಷನ್ ಮತ್ತು ಎಐ ಆಡಳಿತ ಸೌಲಭ್ಯದ ಜೊತೆ ಸೇರಿಸಿಕೊಂಡು ಯಾವುದೇ ಉದ್ಯಮಮಕ್ಕೆ ಈ ಏಜೆಂಟಿಕ್ ಸೌಲಭ್ಯವನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸಬಹುದು. ಜೊತೆಯಾಗಿ, ನಾವು ಎಲ್ಲೆಡೆ ಇರುವ ಉದ್ಯೋಗಿಗಳಿಗೆ ಸುರಕ್ಷಿತ, ವೇಗದ, ಎಂಡ್-ಟು-ಎಂಡ್ ಪರಿಹಾರವನ್ನು ನೀಡುತ್ತೇವೆ” ಎಂದು ಹೇಳಿದರು.

 

*ಉದ್ಯೋಗಿಗಳಿಗೆ ಬುದ್ಧಿವಂತ ಅನುಭವ ಒದಗಿಸುವ ಬುದ್ಧಿವಂತ ಪ್ಲಾಟ್ ಫಾರ್ಮ್*

ಸರ್ವೀಸ್‌ನೌ ಎಐ ಪ್ಲಾಟ್‌ಫಾರ್ಮ್ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯೊಂದಿಗೆ ದೊಡ್ಡ ಪ್ರಮಾಣದಲ್ಲಿ ಕೆಲಸವನ್ನು ಆಟೋಮೇಟ್ ಮಾಡುವ ನೇಟಿವ್ ಇಂಟಿಗ್ರೇಟೆಡ್ ಎಐ ಸೌಲಭ್ಯವನ್ನು ನೀಡುತ್ತದೆ. ಸರ್ವೀಸ್‌ನೌ ಗೆ ಜೊತೆಗೆ ಉತ್ತಮ ರೀತಿಯಲ್ಲಿ ಸಂಯೋಜನೆ ಹೊಂದಿರುವ ಮೂವ್‌ವರ್ಕ್ಸ್ ಸಂಸ್ಥೆಯು ಉದ್ಯೋಗಿಗಳು ಎಲ್ಲಿಯೇ ಕೆಲಸ ಮಾಡುತ್ತಿದ್ದರೂ ಸಹಜವಾಗಿ ಕೇಳಲು, ಹುಡುಕಲು ಮತ್ತು ಕ್ರಮ ತೆಗೆದುಕೊಳ್ಳಲು ಅನುವು ಮಾಡಿಕೊಡಲು ನೆರವು ಒದಗಿಸುತ್ತದೆ. ಸರ್ವೀಸ್‌ನೌ ಮತ್ತು ಮೂವ್‌ವರ್ಕ್ಸ್ ಜೊತೆಯಾಗಿ ಉದ್ಯೋಗಿಗಳು, ಗ್ರಾಹಕರು, ಡೆವಲಪರ್‌ಗಳು, ಐಟಿ ತಂಡಗಳು ಮತ್ತು ಅಡ್ಮಿನ್‌ ಗಳಿಗಾಗಿ ಪ್ರತೀ ಕೋರಿಕೆಯನ್ನು ಅಟೋಮ್ಯಾಟಿಕ್ ಆಗಿ ಪೂರೈಸಿ ಪರಸ್ಪರ ಕನೆಕ್ಟ್ ಮಾಡುವ ಮೂಲಕ ಬುದ್ಧಿವಂತ ಅನುಭವಗಳನ್ನು ಉಂಟು ಮಾಡುತ್ತದೆ. ಈ ಮೂಲಕ ಪುನರಾವರ್ತನೆ ತಡೆಯುತ್ತದೆ, ಸಮಯವನ್ನು ಮೌಲ್ಯವಾಗಿ ಪರಿವರ್ತಿಸುತ್ತದೆ ಮತ್ತು ಎಂಟರ್‌ಪ್ರೈಸ್‌ನಾದ್ಯಂತ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

 

ಏಜೆಂಟಿಕ್ ಎಐ ಈಗಾಗಲೇ ಸಾವಿರಾರು ಸರ್ವೀಸ್‌ನೌ ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ಕೆಲಸದ ರೀತಿಯನ್ನು ಬದಲಾಯಿಸುತ್ತಿದೆ, ಪ್ರತಿಕ್ರಿಯೆ ಸಮಯವನ್ನು ವೇಗಗೊಳಿಸುತ್ತಿದೆ ಮತ್ತು ಹೆಚ್ಚು ಪ್ರಮಾಣದ ಉತ್ಪಾದಕತೆ ಲಾಭಗಳನ್ನು ಒದಗಿಸುತ್ತಿದೆ. ಸರ್ವೀಸ್‌ನೌನ ಒಳಗೆ, ಎಐ ಏಜೆಂಟ್‌ಗಳು ಈಗ ಐಟಿ ಮನವಿಗಳಲ್ಲಿ 90% ನಷ್ಟು ಮತ್ತು ಗ್ರಾಹಕ ಬೆಂಬಲ ಮನವಿಗಳಲ್ಲಿ 89% ರಷ್ಟನ್ನು ಅಟೋಮ್ಯಾಟಿಕ್ ಆಗಿ ಪರಿಹರಿಸುತ್ತವೆ, ಈ ಮೂಲಕ ಪರಿಹಾರ ಒದಗಿಸುವ ಸಮಯವನ್ನು ಏಳು ಪಟ್ಟು ಕಡಿಮೆ ಮಾಡುತ್ತವೆ.

 

ಮೂವ್‌ವರ್ಕ್ಸ್ ಈ ಅಡಿಪಾಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದು, ಸರ್ವೀಸ್‌ನೌ ಈಗಾಗಲೇ ಮೂವ್‌ವರ್ಕ್ಸ್‌ ನ 100ಕ್ಕೂ ಹೆಚ್ಚು ತಾಂತ್ರಿಕ ಸೌಲಭ್ಯಗಳನ್ನು ಸಂಯೋಜಿಸಿಕೊಂಡಿದ್ದು, ಅದರ ಪ್ರಮುಖ ಎಐ ಅಸಿಸ್ಟೆಂಟ್, ಎಂಟರ್‌ಪ್ರೈಸ್ ಸರ್ಚ್ ಮತ್ತು ಏಜೆಂಟಿಕ್ ರೀಸನಿಂಗ್ ಎಂಜಿನ್ ಮೇಲೆ ಸೀಮೆನ್ಸ್, ಟೊಯೋಟಾ, ಯೂನಿಲಿವರ್ ಮುಂತಾದ ಪ್ರಮುಖ ಜಾಗತಿಕ ಎಂಟರ್‌ಪ್ರೈಸ್‌ ಗಳು ವಿಶ್ವಾಸ ಇಟ್ಟಿವೆ. 5.5 ಮಿಲಿಯನ್ ಉದ್ಯೋಗಿ ಬಳಕೆದಾರರು ಮತ್ತು ಸುಮಾರು 250 ಎರಡೂ ಕಂಪನಿಗಳ ಗ್ರಾಹಕರು ಈಗಾಗಲೇ ಎರಡೂ ತಂತ್ರಜ್ಞಾನಗಳನ್ನು ಬಳಸುತ್ತಿದ್ದು, ಸರ್ವೀಸ್‌ನೌ ಮತ್ತು ಮೂವ್‌ವರ್ಕ್ಸ್ ಸಂಸ್ಥೆಗಳು ಪ್ರತೀ ಉದ್ಯಮದ ಪ್ರತೀ ವಿಭಾಗದ ಉದ್ಯೋಗಿಗಳ ಕಾರ್ಯ ನಿರ್ವಹಣೆಯನ್ನು ಸುಲಭ ಮಾಡುವ ಏಜೆಂಟಿಕ್ ಎಐ ಅನ್ನು ತರುತ್ತಿವೆ. ಮೂವ್‌ವರ್ಕ್ಸ್ ಗ್ರಾಹಕರಲ್ಲಿ ಶೇಕಡಾ 90ರಷ್ಟು ಗ್ರಾಹಕರು ಸಂಸ್ಥೆಯ ತಂತ್ರಜ್ಞಾನವನ್ನು ತಮ್ಮ 100% ಉದ್ಯೋಗಿಗಳಿಗೆ ಅಳವಡಿಸಿದ್ದು, ಇದು ಎಂಟರ್‌ಪ್ರೈಸ್ ಗಳಲ್ಲಿನ ನಿಜವಾದ ಅಳವಡಿಕೆ ಪ್ರಮಾಣ ಮತ್ತು ಬಳಕೆಯನ್ನು ತೋರಿಸುತ್ತದೆ.

 

ಹೆಚ್ಚುವರಿಯಾಗಿ, ನೂರಾರು ಎಐ ತಜ್ಞರು ಸರ್ವೀಸ್‌ನೌಗೆ ಸೇರ್ಪಡೆಯಾಗುತ್ತಿರುವುದರಿಂದ, ಮೂವ್‌ವರ್ಕ್ಸ್ ಗಾಢವಾದ ತಜ್ಞತೆಯನ್ನು ತರುತ್ತದೆ. ಇದು ಹೊಸತನವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಸರ್ವೀಸ್‌ನೌನ ಎಐ ರೋಡ್‌ಮ್ಯಾಪ್ ಅನ್ನು ವಿಸ್ತರಿಸುವ ಸಾಮರ್ಥ್ಯವನ್ನು ತೀವ್ರಗೊಳಿಸುತ್ತದೆ. ಒಟ್ಟಾರೆಯಾಗಿ, ಈ ಸ್ವಾಧೀನವು ಒಂದೇ ಹೊಂದಿಕೊಳ್ಳುವ, ವಿಸ್ತಾರ ಮಾಡಬಹುದಾದ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಾಂಪ್ಟ್‌ ಗಳ ಮೂಲಕ ಪ್ರತೀ ಉದ್ಯೋಗಿ ಮನವಿಯನ್ನು ಅರ್ಥಮಾಡಿಕೊಳ್ಳುವ, ಸರಿಯಾದ ಎಂಟರ್‌ಪ್ರೈಸ್ ಡೇಟಾ, ಎಐ ಏಜೆಂಟ್ ಅಥವಾ ಕಾರ್ಯನಿರ್ವಹಣಾ ವಿಭಾಗಕ್ಕೆ ಕನೆಕ್ಟ್ ಮಾಡುವ ಮತ್ತು ಐಟಿ, ಎಚ್‌ಆರ್ ಮುಂತಾದವುಗಳಾದ್ಯಂತ ಎಂಡ್-ಟು-ಎಂಡ್ ಡಿಜಿಟಲ್ ಕಾರ್ಯನಿರ್ವಹಣೆಗಳನ್ನು ಇನ್ನಷ್ಟು ವೇಗಗೊಳಿಸುವ ಮೂಕ ಅದ್ಭುತ ಅನುಭವಗಳನ್ನು ಒದಗಿಸುವ ಸಾಮರ್ಥ್ಯದ ಮೂಲಕ ಸರ್ವೀಸ್‌ನೌ ಎಐ ಪ್ಲಾಟ್‌ಫಾರ್ಮ್ ಅನ್ನು ಮತ್ತಷ್ಟು ಬಲಪಡಿಸುತ್ತದೆ.

Previous Post

2025ರಲ್ಲಿ ಬಿಸಿನೆಸ್ ಮತ್ತು ವಿರಾಮ ಪ್ರವಾಸಿ ಸ್ಥಳಗಳಲ್ಲಿ ಅಗ್ರ ಸ್ಥಾನ ಪಡೆದ ಬೆಂಗಳೂರು..!!

Next Post

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಯಶಸ್ವಿ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ : ಮೆದುಳಿಗೆ ಪೇಸ್‌ಮೇಕರ್ ಅಳವಡಿಕೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಯಶಸ್ವಿ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ : ಮೆದುಳಿಗೆ ಪೇಸ್‌ಮೇಕರ್ ಅಳವಡಿಕೆ..!!

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಯಶಸ್ವಿ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ : ಮೆದುಳಿಗೆ ಪೇಸ್‌ಮೇಕರ್ ಅಳವಡಿಕೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

28/01/2026

Recent News

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ‌ ಸಾಧನೆ: ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ…!

28/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved