ಉಡುಪಿ : ಸೆಪ್ಟೆಂಬರ್ 18:1990ರ ದಶಕದಲ್ಲಿ ರಂಗಭೂಮಿ ಸಂಸ್ಥೆಯ ಸದಸ್ಯರಾಗಿ 1995 ರಿಂದ 2010ರ ತನಕ ಆಡಳಿತ ಮಂಡಳಿ ಸದಸ್ಯರಾಗಿ ತದನಂತರ ಇಂದಿನವರೆಗೂ ಆಡಳಿತ ಮಂಡಳಿಯ ಗೌರವ ಸಲಹಾ ಸಮಿತಿ ಸದಸ್ಯರಾಗಿ ನಿರಂತರವಾಗಿ ರಂಗಭೂಮಿಯನ್ನು ಬೆಳೆಸುವಲ್ಲಿ ನಿ:ಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದ ಗೋಪಾಲಣ್ಣ ವಯೋಸಹಜ ಅಸೌಖ್ಯದಿಂದ ತಮ್ಮ ಮನೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಯಾಗಿದ್ದ ಇವರು, ಉಡುಪಿಯ ರಂಗಭೂಮಿ ಅಲ್ಲದೆ ತುಳುಕುಟ, ಯಕ್ಷಗಾನ ಕಲಾರಂಗ ಹಾಗೂ ಇನ್ನಿತರ ಸಾಂಸ್ಕೃತಿಕ ಸಂಸ್ಥೆಯ ಅವಿಭಾಜ್ಯ ಅಂಗವಾಗಿದ್ದರು.
ರಂಗಭೂಮಿಯ ಸಂಸ್ಥೆಯ ಯಾವುದೇ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಎಲ್ಲಾ ಸದಸ್ಯರಿಗೆ ಮುಖತ: ತಲುಪಿಸುವಲ್ಲಿ ಇವರ ಸೇವೆ ಅನನ್ಯವಾದುದು ಅಲ್ಲದೆ ಸಂಸ್ಥೆಯ ಕಾರ್ಯಕ್ರಮಗಳಿದ್ದಾಗ ಸಭಾಂಗಣದ ತಯಾರಿ ಹಾಗೂ ವೇದಿಕೆ ತಯಾರಿಯಲ್ಲಿ ಇವರ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
ಗೋಪಾಲಣ್ಣ ಓರ್ವ ಮಗ ಹಾಗೂ ಮಗಳು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಉಡುಪಿಯ ಸಾಂಸ್ಕೃತಿಕ ಸಂಸ್ಥೆಗಳು, ರಂಗಭೂಮಿ ಸಂಸ್ಥೆ ಯಾವತ್ತೂ ಗೋಪಾಲಣ್ಣನ ಸೇವೆಯನ್ನು ಮರೆಯದು.
ಮೃತರ ಅಂತಿಮ ವಿಧಿ ವಿಧಾನಗಳು ಇಂದು 12:30ಕ್ಕೆ ಸರಿಯಾಗಿ ಬ್ರಹ್ಮಗಿರಿಯ ಬಾಲ ಭವನದ ಬಳಿಯಲ್ಲಿರುವ ರಾಮಣ್ಣ ಶೆಟ್ಟಿ ಕಾಂಪೌಂಡ್ ನಲ್ಲಿರುವ ಅವರ ಅವರ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.








