ಉಡುಪಿ ಜೂ.3; ಕಳೆದ ಹತ್ತು ದಿನಗಳ ಹಿಂದೆ ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಹಗಲು ಅಡ್ಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸಂಬಂಧಿಕರ ಪತ್ತೆ ಆಗದ ಕಾರಣ ನಿಟ್ಟೂರಿನ ಮಹಿಳಾ ನಿಲಯಕ್ಕೆ ದಾಖಲಿಸಲಾಗಿದೆ.
ಅಪರಿಚಿತ ಮಹಿಳೆ ಸುಮಾರು 40 ವರ್ಷ ಮರಾಠಿ ಮಾತನಾಡುತ್ತಿದ್ದಾರೆ ಮಹಾರಾಷ್ಟ್ರ ಮೂಲದವರಾಗಿರಬಹುದು. ಮಹಿಳೆ ತೀವ್ರ ಮನೋರೋಗದಿಂದ ಉದ್ರಿಕ್ತರಾಗಿದ್ದರು. ಇದೀಗ ಚಿಕಿತ್ಸೆಗೆ ಸ್ಪಂದಿಸಿದ ಮಹಿಳೆ ಸಹಜಸ್ಥಿತಿಗೆ ಬಂದಿದ್ದು ವೈದ್ಯರ ಅನತಿಯಂತೆ ವಿಶು ಶೆಟ್ಟಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮಹಿಳಾ ನಿಲಯಕ್ಕೆ ದಾಖಲಿಸಿದ್ದಾರೆ.
ಚಿಕಿತ್ಸಾ ವೆಚ್ಚವನ್ನು ವಿಶು ಶೆಟ್ಟಿಯವರ ಹಿತೈಷಿ ಕರುಣಾಕರ್ ಕೋಟ ಹಾಗೂ ಅಂಬಲಪಾಡಿಯ ಮಹಿಳೆಯೊಬ್ಬರು ಭರಿಸಿದ್ದಾರೆ.
ಸಂಬಂಧಿಕರು ಅಥವಾ ಸಂಬಂಧಪಟ್ಟವರು ಮಹಿಳಾ ನಿಲಯ ಅಥವಾ ಉಡುಪಿ ನಗರ ಠಾಣೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
ಕಾನೂನು ಪ್ರಕ್ರಿಯೆಗೆ ಸಖಿ ಸೆಂಟರಿನ ಸಿಬ್ಬಂದಿಗಳು ಹಾಗೂ ನಗರ ಠಾಣೆ ಪೊಲೀಸರು ಸಹಕರಿಸಿದ್ದಾರೆ.