ಉಡುಪಿ : ಮೇ 31:ದಲಿತ ಹಕ್ಕುಗಳ ಸಮಿತಿ (DHS) ಉಡುಪಿ ಸಂಚಾಲನ ಸಮಿತಿ ನೇತ್ರತ್ವದಲ್ಲಿ ರಾಜ್ಯ ಸಮಿತಿ ಕರೆಯ ಮೇರೆಗೆ ಕರ್ನಾಟಕ ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ, ದಲಿತರ ಹತ್ಯೆ,ದೇವಾಲಯ ಪ್ರವೇಶ ನಿರಾಕರಣೆ, ದಲಿತ ಮಹಿಳೆಯರ ಅತ್ಯಾಚಾರ, ದಲಿತರಿಗೆ ನೀಡುತ್ತಿರುವ ಕಿರುಕುಳ ಖಂಡಿಸಿ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮುಖಾಂತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯವರಿಗೆ ಮನವಿ ನೀಡಲಾಯಿತು
ಪ್ರತಿಭಟನಾ ಸಭೆ ಉದ್ದೇಶಿಸಿ ಮಾತಾನಾಡಿದ ಸಂಜೀವ ಬಳ್ಕೂರು ಮಂಡ್ಯದ ಕೆ.ಆರ್.ಪೇಟೆಯಲ್ಲಿ ದಲಿತ ಜಯಕುಮಾರ್ ಜಮೀನು ಅಕ್ರಮಣ ಮಾಡಲು ಮುಂದಾದ ರೌಡಿ ಶೀಟರ್ ಅನಿಲ್ ಕುಮಾರ್ ಜಯಕೂಮಾರ್ ನನ್ನು ಕೊಲೆ ಮಾಡಿದ್ದು ಪತ್ನಿ ಲಕ್ಷೀ ಪೋಲಿಸ್ ಠಾಣೆ ಮೆಟ್ಟಿಲು ಏರಿ ಕೇಸು ದಾಖಲಿಸಲು ಮುಂದಾದಗ ಪೋಲೀಸ್ ರು ಕೇಸ್ ಪಡೆಯದೆ ಸತಾಯಿಸಿ ವಾಪಾಸು ಕಳುಹಿಸಿದ್ದು ತಮೇಲ್ಲರ ಗಮನಕ್ಕೆ ಬಂದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬನವಾಸಿ ಗ್ರಾಮದ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಮತ್ತು ದೇವಸ್ಥಾನ ಪ್ರವೇಶ ನಿರಾಕಾರಿಸಿದ್ದು ಜನತೆ ನಾಚಿಕೆ ಪಡುವಂತಾಗಿದೆ.ಬಿಡದಿ ಹೋಬಳಿ,ಭದ್ದರಾಪುರ ಗ್ರಾಮದ ಬಡಾ ಕೂಲಿಕಾರ ಕುಟುಂಬದ ದಲಿತ ಬಾಲಕಿ ಯನ್ನು ಆತ್ಯಾಚಾರ ಮಾಡಿ ಕೊಲೆ ಗೈದಿರುತ್ತಾರೆ ಇದನ್ನು ಪೋಲಿಸ್ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಮುಚ್ಚಿ ಹಾಕಲು ಪ್ರಾಭಾವಿ ವ್ಯಕ್ತಿ ಗಳು ಪ್ರಯತ್ನಿಸಿದರು.ಅದೇ ರೀತಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕವಣಗಾಲಿ ದೇವಾಲಯ ದಲಿತರಿಗೆ ಪ್ರವೇಶ ನಿರಾಕರಣೆ, ಮತ್ತು ಕೊಲ್ಲೂರು ಪ್ರದೇಶದಲ್ಲಿ ದಲಿತ ಮಹಿಳೆಯಮನೆಯನ್ನುಇಲ್ಲದ ಯಾರು ಇಲ್ಲದ ಸಮಯದಲ್ಲಿ ಕೆಡವಿ ಜಾಗ ಆಕ್ರಮಣ ಮಾಡಲು ಮುಂದಾದ ಬಾಲಾಡ್ಯ ಶಕ್ತಿಗಳು ಬಂಧಿಸಿ ನ್ಯಾಯ ಒದಗಿಸಲು ಒತ್ತಾಯಿಸಿದರು ಪ್ರತಿಭಟನಾಸಭೆಯಲ್ಲಿ ದಲಿತ ಹಕುಗಳ ಸಮಿತಿಯ ಉಡುಪಿ ಜಿಲ್ಲಾ ಸಂಚಸಲಕ ಸಂಜೀವ ಬಳ್ಕೂರು, ಸಹಾಸಂಚಸಲಕ ರವಿ.ವಿ.ಎಮ್ ಸಮಿತಿ ಪದಾಧಿಕಾರಿಗಳಾದ ರಾಮಕಾರ್ಕಡ,ನಾಗರತ್ನ ನಾಡ, ಶಾರದ, ನಾಗರತ್ನ ಆರ್, ರಂಗನಾಥ ಸುವರ್ಣ,ಮನೋಜ್,ಸುಶೀಲ,ಪೂರ್ಣಿಮಾ ಬಳ್ಕೂರು,ಅಣಪ್ಪ
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ,ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಹಂಚು ಕಾರ್ಮಿಕ ಸಂಘದ ಕಾರ್ಯದರ್ಶಿ ಎಚ್.ನರಸಿಂಹ,ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕಾರದ ಚಂದ್ರಶೇಖರ, ಸಿಐಟಿಯು ಉಡುಪಿ ವಲಯ ಸಂಚಾಲಕಾರಾದ ಕವಿರಾಜ್. ಎಸ್.ಕಾಂಚನ್ ಉಪಸ್ಥಿತರಿದ್ದರು.