ಉಡುಪಿ: ಏಪ್ರಿಲ್ 30:ಅಕ್ಷಯ ತೃತೀಯ ಪರ್ವ ದಿನವಾದ ಇಂದು ಶ್ರೀಕೃಷ್ಣನಿಗೆ ಸುವರ್ಣ ತುಲಾಭಾರ ಸಂದರ್ಭ ಕೃಷ್ಣನ ಮೂಲ ವಿಗ್ರಹಕ್ಕೆ ಪರ್ಯಾಯ ಶ್ರೀ ಪಾದರ ಉಪಸ್ಥಿತಿಯಲ್ಲಿ ಪುತ್ತಿಗೆ ಕಿರೀಯ ಶ್ರೀಪಾದರು ಸುವರ್ಣ ಕನಕಾಭಿಷೇಕ ವನ್ನು ನೆರವೇರಿಸಿದರು.
ಸಾಯಂ ಸುವರ್ಣತುಲಾಭಾರ ಸೇವೆ ನೀಡಿದವರಿಗೆ ಪ್ರಸಾದ ರೂಪದಲ್ಲಿ ಇದನ್ನು ವಿತರಿಸಲಾಗುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.