ಕಾರ್ಕಳ:ಏಪ್ರಿಲ್ 30:ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನದ ವರ್ಷಾವಧಿ ನೇಮೋತ್ಸವ ನೇಮೋತ್ಸವ ದಿನಾಂಕ ಏಪ್ರಿಲ್ 26 ರಿಂದ ಮೊದಲ್ಗೊಂಡು 28 ಏಪ್ರಿಲ್ ಸೋಮವಾರ ತನಕ ವಿಜೃಂಭಣೆಯಿಂದ ನಡೆಯಿತು.
ದಿನಾಂಕ 26 ರಂದು ಸಾಯಂಕಾಲ ಘಂಟೆ 5 ಕೆ ಸರಿಯಾಗಿ ಅತ್ತೂರು ಮಹಾಬಲ ಬೆಟ್ಟು ಬರ್ಕೆ ಮನೆಯಿಂದ ಭಂಡಾರ ಆಗಮನ, ನಂತರ ಸ್ವಸ್ತಿ ಪುಣ್ಯಾಹ ಪರಸರ ತೋರಣ ಮುಹೂರ್ತ ನಂತರ ರಾತ್ರಿ ದೈವಗಳ ಆಗೆಲ್ ತಂಬಿಲ,ನಂತರ ಧರ್ಮರಸು ನೇಮ, 27 ರಂದು ರವಿವಾರ ಎಡ್ಮೂರ ಮಾಯಗಾರ ,ಬ್ರಹ್ಮ ಮುಗ್ಗೆರ್ಕಳ ತನ್ನಿಮಾನಿಗ ದೈವಗಳ ನೇಮ, ದಿನಾಂಕ 28, ಸೋಮವಾರ ದಂಡು ಬೆಳಿಗ್ಗೆ ಕೋರಗಜ್ಜ ನೇಮ ,ಮದ್ಯಾಹ್ನ ಹಲೇರ ಪಂಜುರ್ಲಿ ನೇಮ. ವಿಜೃಂಭಣೆಯಿಂದ ನಡೆಯಿತು
ಮನ್ಮಥ ಕುಮಾರ್ ಶೆಟ್ಟಿ, ಬಿರಂದೋಟ್ಟು ಗುತ್ತು, ಪ್ರವೀಣ್ ಚೌಟ ಗುಂಡ್ಯಡ್ಕ ಗುತ್ತು,ಶಶಿಧರ್ ಸುವರ್ಣ ಮಹಾಬಲ ಬೆಟ್ಟು ಬರ್ಕೆ , ಅಧ್ಯಕ್ಷರು,ಸರ್ವ ಸಮಿತಿಯ ಸದಸ್ಯರು ಮಹಿಳಾ ಸಂಘ ಬ್ರಹ್ಮಶ್ರೀ ಮುಗ್ಗೆರ್ಕಳ ದೈವಸ್ಥಾನ ಅತ್ತೂರು, ಹೇನೊಟ್ಟು ಮುಂತಾದವರು ವರ್ಷಾವಧಿ ನೇಮೋತ್ಸವ ಜರಗುವ ಸಂದರ್ಭದಲ್ಲಿ ಭಾಗವಹಿಸಿ ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.