Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಜನವರಿ 18 ಮತ್ತು 19ರಂದು ತಣ್ಣೀರುಬಾವಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ..!!

Dhrishya News by Dhrishya News
17/01/2025
in ಸುದ್ದಿಗಳು
0
0
SHARES
3
VIEWS
Share on FacebookShare on Twitter

ಮಂಗಳೂರು : ಜನವರಿ 18 ಮತ್ತು 19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ವನ್ನು ಟೀಮ್‌ ಮಂಗಳೂರು ವತಿಯಿಂದ ಜಿಲ್ಲಾಡಳಿತ ಸಹಕಾರದೊಂದಿಗೆ ಆಯೋಜಿಸಲಾಗಿದೆ.

ಗಾಳಿಪಟ ಉತ್ಸವ ದಲ್ಲಿ ಭಾಗವಹಿಸಲು ವಿದೇಶದ ಕೆಲವು ತಂಡಗಳು ಈಗಾಗಲೇ ಆಗಮಿಸಿದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜ.18ರಂದು ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉಪಸ್ಥಿತಿಯಲ್ಲಿ ಚಾಲನೆ ಸಿಗಲಿದೆ. ಮಂಗಳೂರಿನಲ್ಲಿ ನಡೆಯುವ 8ನೇ ವರ್ಷದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇದಾಗಿದ್ದು, ಇಂಗ್ಲೆಂಡ್‌, ಜರ್ಮನಿ, ನೆದರ್‌ಲ್ಯಾಂಡ್‌, ಸ್ಲೋವೆನಿಯಾ, ಇಟಲಿ, ಇನ್ಪೊನಿಯ, ಸ್ವೀಡನ್‌, ಇಂಡೋನೇಶಿಯಾ, ಪೋರ್ಚುಗಲ್‌ ಮುಂತಾದ ದೇಶಗಳ ತಂಡಗಳು, ಒಡಿಸ್ಸಾ, ರಾಜಸ್ಥಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್‌ ಮುಂತಾದ ರಾಜ್ಯ ಮಟ್ಟದ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಟೀಂ ಮಂಗಳೂರಿನ ಪ್ರಶಾಂತ್‌ ಉಪಾಧ್ಯಾಯ ಮಾತನಾಡಿ, “ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಉತ್ಸವ ಜರಗಲಿದ್ದು, ದೇಶ-ದೇಶಗಳ ನಡುವಿನ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶ ಹೊಂದಲಾಗಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್‌ ಗಾಳಿಪಟಗಳು, ಏರೋ ಫಾಯ್ಸ ಗಾಳಿಪಟಗಳು (ಗಾಳಿ ತುಂಬಿ ಬಲೂನ್‌ ರೀತಿಯಲ್ಲಿ ಹಾರಾಡುವ ಬೃಹತ್‌ ಗಾಳಿಪಟಗಳು) ಸೀರೀಸ್‌ ಕೈಟ್‌ (ಏಕದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಈ ಉತ್ಸವದಲ್ಲಿ ಜನರಿಗೆ ಮನರಂಜನೆ ನೀಡಲಿದೆ. ಜ.18 ಮತ್ತು 19ರಂದು ಸಂಜೆ ಗಂಟೆ 3ರಿಂದ ರಾತ್ರಿ 9ರ ವರೆಗೆ ಗಾಳಿಪಟ ಉತ್ಸವ ನಡೆಯಲಿದೆ ಎಂದರು.

ಮಹಾರಾಷ್ಟ್ರ ಗಾಳಿಪಟ ತಂಡದ ಪ್ರತಿನಿಧಿ ಅಶೋಕ್‌ ಶಾ ಮಾತನಾಡಿ, ನಾನು ಈವರೆಗೆ ಹಲವು ದೇಶ-ವಿದೇಶಗಳ ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿದ್ದು, ಮಂಗಳೂರಿಗೆ ಬರುವುದೆಂದರೆ ಖುಷಿ. ಇಲ್ಲಿ ಗಾಳಿಪಟ ಹಾರಾಡಿಸಲು ಉತ್ತಮ ವಾತಾವರಣ ಇದೆ ಎಂದರು.

ಟೀಂ ಮಂಗಳೂರಿನ ಸರ್ವೇಶ್‌ ರಾವ್‌, ಪ್ರಾಣ್‌ ಹೆಗ್ಡೆ, ಗಿರಿಧರ್‌, ಯತೀಶ್‌ ಬೈಕಂಪಾಡಿ, ನಿತೇಶ್‌ ಸಹಿತ ಗ್ರೀಸ್‌ ದೇಶದ ಪ್ರತಿನಿಧಿ ಕೋಸ್ತಾ, ಥಿಯೋ ಉಪಸ್ಥಿತರಿದ್ದರು.

Previous Post

ಮುಂಡ್ಕೂರು- ಜಾರಿಗೆಕಟ್ಟೆ ಚರ್ಚ್ ಬಳಿ ಕಾರು ಪಲ್ಟಿ; ಓರ್ವ ಗಂಭೀರ ಇಬ್ಬರಿಗೆ ಸಣ್ಣ ಪುಟ್ಟ ಗಾಯ..!!

Next Post

ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಮೃತ್ಯು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಮೃತ್ಯು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಕೊರತೆ: ಕೇಂದ್ರ ಸಚಿವರಿಗೆ ಉಡುಪಿ ಜನಪ್ರತಿನಿಧಿಗಳ ಮನವಿ…!

ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಕೊರತೆ: ಕೇಂದ್ರ ಸಚಿವರಿಗೆ ಉಡುಪಿ ಜನಪ್ರತಿನಿಧಿಗಳ ಮನವಿ…!

26/03/2026
ಕುಂದಾಪುರದಲ್ಲಿ ಬೈಕ್‌ ಅಪಘಾತ – ಗಾಯಾಳು ಚಿಕಿತ್ಸೆ ಫಲಿಸದೆ ಮೃತ್ಯು…!

ಕುಂದಾಪುರದಲ್ಲಿ ಬೈಕ್‌ ಅಪಘಾತ – ಗಾಯಾಳು ಚಿಕಿತ್ಸೆ ಫಲಿಸದೆ ಮೃತ್ಯು…!

26/03/2026
ಉಡುಪಿ: ಕಾರು ಡಿಕ್ಕಿ—2 ವರ್ಷದ ಮಗು ಗಂಭೀರ ಗಾಯ…!

ಉಡುಪಿ: ಕಾರು ಡಿಕ್ಕಿ—2 ವರ್ಷದ ಮಗು ಗಂಭೀರ ಗಾಯ…!

26/03/2026
ಗಾವಳಿ ಕ್ರಾಸ್‌ ಬಳಿ ಲಾರಿ ಪಲ್ಟಿ – ಚಾಲಕ ಗಂಭೀರ ಗಾಯ….!

ಗಾವಳಿ ಕ್ರಾಸ್‌ ಬಳಿ ಲಾರಿ ಪಲ್ಟಿ – ಚಾಲಕ ಗಂಭೀರ ಗಾಯ….!

26/03/2026

Recent News

ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಕೊರತೆ: ಕೇಂದ್ರ ಸಚಿವರಿಗೆ ಉಡುಪಿ ಜನಪ್ರತಿನಿಧಿಗಳ ಮನವಿ…!

ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಕೊರತೆ: ಕೇಂದ್ರ ಸಚಿವರಿಗೆ ಉಡುಪಿ ಜನಪ್ರತಿನಿಧಿಗಳ ಮನವಿ…!

26/03/2026
ಕುಂದಾಪುರದಲ್ಲಿ ಬೈಕ್‌ ಅಪಘಾತ – ಗಾಯಾಳು ಚಿಕಿತ್ಸೆ ಫಲಿಸದೆ ಮೃತ್ಯು…!

ಕುಂದಾಪುರದಲ್ಲಿ ಬೈಕ್‌ ಅಪಘಾತ – ಗಾಯಾಳು ಚಿಕಿತ್ಸೆ ಫಲಿಸದೆ ಮೃತ್ಯು…!

26/03/2026
ಉಡುಪಿ: ಕಾರು ಡಿಕ್ಕಿ—2 ವರ್ಷದ ಮಗು ಗಂಭೀರ ಗಾಯ…!

ಉಡುಪಿ: ಕಾರು ಡಿಕ್ಕಿ—2 ವರ್ಷದ ಮಗು ಗಂಭೀರ ಗಾಯ…!

26/03/2026
ಗಾವಳಿ ಕ್ರಾಸ್‌ ಬಳಿ ಲಾರಿ ಪಲ್ಟಿ – ಚಾಲಕ ಗಂಭೀರ ಗಾಯ….!

ಗಾವಳಿ ಕ್ರಾಸ್‌ ಬಳಿ ಲಾರಿ ಪಲ್ಟಿ – ಚಾಲಕ ಗಂಭೀರ ಗಾಯ….!

26/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved