Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಪರಶುರಾಮ ಮೂರ್ತಿ ವಿವಾದ : ಕಾರ್ಕಳದಲ್ಲಿಂದು ಕಾಂಗ್ರೆಸ್ ಪತ್ರಿಕಾ ಗೋಷ್ಠಿ..!!

Dhrishya News by Dhrishya News
06/08/2024
in ಸುದ್ದಿಗಳು
0
0
SHARES
32
VIEWS
Share on FacebookShare on Twitter

ಕಾರ್ಕಳ : ಆಗಸ್ಟ್ 06:ಪರಶುರಾಮ ಮೂರ್ತಿಯ ಗೊಂದಲ ಬಗ್ಗೆ ಇಂದು ಕಾಂಗ್ರೆಸ್ ಪತ್ರಿಕಾ ಗೋಷ್ಠಿ ನಡೆಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶುಭದ ರಾವ್ ಪರಶುರಾಮರ ಮೂರ್ತಿಯ ಎಲ್ಲಾ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ನಿನ್ನೆ ಬಿಜೆಪಿಯವರು ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಿದ್ದಾರೆ. ಆ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಉದಯ ಕುಮಾರ್ ಶೆಟ್ಟಿಯವರ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಹೇಳಿದರು.

ನಿನ್ನೆ ನವೀನ್ ನಾಯಕ್ ಹಾಗೂ ಮಹಾವೀರ್ ಹೆಗ್ಡೆಯವರು ಉದಯ ಶೆಟ್ಟಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಅಂದು ಸುನಿಲ್ ಕುಮಾರ್ ರವರು ಸಿಮೆಂಟ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಾಗ ಮಹಾವೀರ್ ಹೆಗ್ಡೆಯವರ ಫೋನ ನ್ನು ಬಿಜೆಪಿಯೇ ಟ್ಯಾಪ್ ಮಾಡಿತ್ತು. ನೀವೇ ಸಿಮೆಂಟ್ ಬಗ್ಗೆ ಮಾಹಿತಿಯನ್ನು ಹೊರಗಡೆ ಹೇಳಿದ್ದು ಎಂಬ ಆರೋಪ ಇತ್ತು. ಇದನ್ನು ನೆನಪಿನಲ್ಲಿಟ್ಟು ರಾಜಕಾರಣ ಮಾಡಿ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ರವರು ಪೊಲೀಸರನ್ನು ನಾಯಿ ಎಂದಿದ್ದಾರೆ. ನವೀನ್ ನಾಯಕ್ ಏನೆಲ್ಲ ಅವ್ಯವಹಾರಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ನಮ್ಮಲ್ಲೂ ಇದೆ. ಇವರ ಆರ್ಭಟ ಹೀಗೇ ಮುಂದುವರಿದರೆ ನಮಗೂ ಏನು ಮಾಡಬೇಕು ಎಂದು ಗೊತ್ತಿದೆ ಎಂದು ಹೇಳಿದರು.

ಸುನಿಲ್ ಕುಮಾರ್ ರವರು ಬೈಲೂರು ಮಾರಿಯಮ್ಮ ದೇವಸ್ಥಾನಕ್ಕೆ ಬಂದು ಈ ಮೂರ್ತಿ ನಕಲಿ ಅಲ್ಲ ಎಂದು ಹೇಳಲಿ ಎಂದು ಪಂಥಾಹ್ವಾನ ನೀಡಿದರು

ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮಾತನಾಡಿ ಸುನಿಲ್ ಕುಮಾರ್ ರಿಗೆ ಬಕೆಟ್ ಹಿಡಿಯುವವರು ನಮಗೆ ಬೈಯುವ ಪರಿಸ್ಥಿತಿ ಎದುರಾಗಿದೆ.

ಯಾರದೋ ಇನ್ಫ್ಲುಯೆನ್ಸ್ ನಲ್ಲಿ ಬದುಕುವವರು ನನ್ನ ತಂದೆಯವರ ಬಗ್ಗೆ ಹಾಗೂ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಇಲ್ಲ ಸಲ್ಲದ ಮಾತನ್ನು ಆಡಿದ್ದಾರೆ. ಅವರ ಕೊಳಕು ಮಾತಿಗೆ ನಾವು ಕೊಳಕು ಮಾತನಾಡೋಲ್ಲ ಎಂದರು.

ಸುನಿಲ್ ಕುಮಾರ್ ರಂತಹ ಭ್ರಷ್ಟ ರಾಜಕಾರಣಿ ಇನ್ನೊಮ್ಮೆ ಕರ್ನಾಟಕದಲ್ಲಿ ಹುಟ್ಟಬಾರದು. ಸತತವಾಗಿ ಭ್ರಷ್ಟಾಚಾರದಲ್ಲೇ ತುಂಬಿದ ಈ ವ್ಯಕ್ತಿ ಕಾರ್ಕಳದಲ್ಲಿ ಸುಚೇತ ಶೆಟ್ಟಿ ಬಗ್ಗೆ ರಾಜಕಾರಣ ಮಾಡಿ ಕಾರ್ಕಳದಲ್ಲಿ ದೊಡ್ಡ ಸುಳ್ಳು ಹೇಳುವ ಮೂಲಕ ರಾಜಕಾರಣ ಮಾಡುತ್ತಾರೆ.

ಕೃಷ್ಣ ನಾಯ್ಕ್ ಜಾತಿ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಜಾತಿ ಬಗ್ಗೆ ಮಾತನಾಡಲು ಪ್ರೇರಣೆ ಕೊಟ್ಟಿದ್ದು ಯಾರು. ಕಾರ್ಕಳದಲ್ಲಿ ಕೂಡ ಜಾತಿ ಜಾತಿ ಮಧ್ಯೆ ಗೊಂದಲ ಮೂಡಿಸಿದ್ದಾರೆ.

ನಾನು ಹಾಕುವ ಬಟ್ಟೆ ಬಗ್ಗೆ ಮಾತನಾಡುವ ಕೀಳು ಮಟ್ಟಕ್ಕೆ ನಿನ್ನೆ ಬಿಜೆಪಿ ಇಳಿದಿದೆ. ಇಂತಹ ಕೊಳಕು ರಾಜಕೀಯಕ್ಕೆ ನಾವು ಇಳಿಯೋದಿಲ್ಲ ಎಂದು ಹೇಳಿದರು.

ನವೀನ್ ನಾಯಕ್ ಪೊಲೀಸ್ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ ಇದು ಈ ವ್ಯವಸ್ಥೆಯ ದುರಂತ. ನವೀನ್ ನಾಯಕ್ ತನ್ನ ವ್ಯಕ್ತಿತ್ವ ಯಾವ ರೀತಿಯಲ್ಲಿ ಇದೆ ಎಂದು ಅವಲೋಕನ ಮಾಡಿ ಕೊಳ್ಳಲಿ ಎಂದು ಹೇಳಿದರು 

ಸುನಿಲ್ ಕುಮಾರ್ ಗೆ ರಾಜ್ಯದಲ್ಲಿ ಎಲ್ಲೂ ಸೀಟು ಕೊಡದಷ್ಟು ಭ್ರಷ್ಟಾಚಾರ ಮಾಡಿರುವುದು ಅವರ ಹೈ ಕಮಾಂಡ್ ಗು ಗೊತ್ತಿದೆ. ಇದು ಸುನಿಲ್ ಕುಮಾರ್ ಗು ಗೊತ್ತಿದೆ. ಹೀಗಾಗಿ ಅವರು ತನ್ನ ಸೀಟು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ.

ಪರಶುರಾಮರ ಮೂರ್ತಿ ಸರಿ ಇದೆ ಎಂದು ದೇವಸ್ಥಾನ ಅಥವಾ ದೈವಸ್ಥಾನಗಳಲ್ಲಿ ಸುನಿಲ್ ಕುಮಾರ್ ಬಂದು ಹೇಳಲಿ. ಅಥವಾ ಪ್ರಮಾಣ ಮಾಡಲಿ ಅದರ ಬಳಿಕ ಕಾಂಗ್ರೆಸ್ ಈ ಬಗ್ಗೆ  ಮಾತನಾಡುವುದೇ ಇಲ್ಲ ಎಂದು ಹೇಳಿದರು.

ಪರಶುರಾಮರ ಸೊಂಟದ ಮೇಲ್ಭಾಗ ಕಾಣೆ ಆಯಿತು. ಸೊಂಟದ ಕೆಳ ಭಾಗ ಕಂಚು ಎಂದು ಹೇಳಿದರು. ಆದರೆ ಪೊಲೀಸರು ಬೆಂಗಳೂರುನಲ್ಲಿ ದಾಳಿ ಮಾಡಿದಾಗ ಪುನಃ ಹೊಸ ಕಂಚಿನ ಕಾಲು ಪತ್ತೆ ಆಗಿದೆ. ಹಾಗಾದರೆ ಇವರು ಸೊಂಟದ ಕೆಳಗಿನ ಭಾಗವನ್ನು ಕಂಚು ಎಂದು ಯಾತಕ್ಕಾಗಿ ಹೇಳಿದರು ಎಂಬುದನ್ನು ಜನತೆ ಗಮನಿಸಬೇಕು ಎಂದು ಹೇಳಿದರು.

ನನ್ನ ಮನೆಗೆ ಯಾರೆಲ್ಲ ಹೊಕ್ಕಲು ಹೇಳಿದ್ದರೋ ಅವರೆಲ್ಲ ಬನ್ನಿ. ಆದರೆ ಜನ ಚಪ್ಪಾಳೆ ತಟ್ಟುತ್ತಾರೆ ಎಂದು ಏನೆಲ್ಲ ಹೇಳಬೇಡಿ ಎಂದು ಹೇಳಿದರು.

ವಿಪರೀತ ಸಂಪತ್ತಿನ ಆಸೆ ಇದ್ದವರಿಗೆ ಕೊನೆಗೆ ಅನಾಚಾರವೆ ಆಗೋದು ಎಂದರು,ನಿನ್ನೆ ವಿಕ್ರಂ ಹೆಗ್ಡೆ, ವಿಜಯ ಶೆಟ್ಟಿ ಗಿರೀಶ್ ಶೆಟ್ಟಿ ಮುಂತಾದವರ ಮೇಲೆ ನಾನು ದಾಳಿ ಮಾಡಿಸಿದ್ದೇನೆ ಎಂದಿದ್ದಾರೆ. ಅದನ್ನು ಬಿಜೆಪಿಯವರೇ ಮಾಡಿಸಿದ್ದು ಬೇಕಾದರೆ ಈ ಬಗ್ಗೆ ತನಿಖೆ ಮಾಡಿಸಿ ಸತ್ಯ ತಿಳಿದು ಕೊಳ್ಳಿ ಎಂದು ಹೇಳಿದರು

ಪತ್ರಿಕೆ ಗೋಷ್ಠಿಯಲ್ಲಿ ಬಿಪಿನ್ ಚಂದ್ರ ಪಾಲ್, ಅಜಿತ್ ಹೆಗ್ಡೆ, ತಾರಾನಾಥ್ ಕೋಟ್ಯಾನ್ ವಿವೇಕ್, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು

Previous Post

ಜಿಲ್ಲೆಯ ಹಿರಿಯ ಪತ್ರಕರ್ತ ಜಯಕರ ವಿ.ಸುವರ್ಣ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಸಂತಾಪ..!!

Next Post

ಕಾರ್ಕಳ :ಆಗಸ್ಟ್ 11ರಂದು ಭಜನಾ ಮಂಡಳಿಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಭಜನಾ ಕಮ್ಮಟ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕಾರ್ಕಳ :ಆಗಸ್ಟ್ 11ರಂದು ಭಜನಾ ಮಂಡಳಿಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಭಜನಾ ಕಮ್ಮಟ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

30/01/2026
ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

30/01/2026
ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

30/01/2026
ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

30/01/2026

Recent News

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

30/01/2026
ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

30/01/2026
ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

30/01/2026
ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

30/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved