Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆಯ ವಾಣಿಜ್ಯ ವಿಭಾಗದಲ್ಲಿ ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ಓರಿಯೆಂಟೇಶನ್‌ ಕಾರ್ಯಕ್ರಮ..!!

Dhrishya News by Dhrishya News
27/07/2024
in ಸುದ್ದಿಗಳು
0
0
SHARES
9
VIEWS
Share on FacebookShare on Twitter

ಮಣಿಪಾಲ, ಜುಲೈ 28: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ]ನ ವಾಣಿಜ್ಯ ವಿಭಾಗ [ಡಿಓಸಿ]ದ ವತಿಯಿಂದ ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ಓರಿಯೆಂಟೇಶನ್‌ ಕಾರ್ಯಕ್ರಮವು ಇತ್ತೀಚೆಗೆ ಆಯೋಜನೆಗೊಂಡಿದ್ದು ಬೆಂಗಳೂರಿನ ಅರ್ಬನ್‌ ಪೈಪರ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ [ಸಿಎಚ್‌ಆರ್‌ಓ] ಡಾ. ನಾಗ ಸಿದ್ಧಾರ್ಥ ಮತ್ತು ಬಿಗ್‌4ಎಸ್‌ ನ ಹಿರಿಯ ಮಾನವಸಂಪನ್ಮೂಲ ಅಧಿಕಾರಿ ಜೆಸ್ವಿನ್‌ ಬೋಸ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಡಾ. ನಾಗ ಸಿದ್ಧಾರ್ಥ ಅವರು ಮಾತನಾಡಿ, ‘ಉದ್ಯಮದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮತ್ತು ಸಮಾಜದ ಅಭ್ಯುದಯಕ್ಕೆ ನೆರವಾಗುವಲ್ಲಿ ಬಿಬಿಎ ಪ್ರಶಿಕ್ಷಣ [ಬಿಬಿಎ ಪ್ರೋಗ್ರಾಮ್‌]ವು ಮಹತ್ತ್ದದ್ದಾಗಿದೆ. ಇದು ಕೇವಲ ವ್ಯಾವಹಾರಿಕ ಪದವಿಯಾಗದೇ ಸಾಮೂಹಿಕ ಮನೋಭಾವವನ್ನು ಉತ್ತೇಜಿಸಿ ಉತ್ತಮ ಸಾಮಾಜಿಕನಾಗಿಯೂ ರೂಪಿಸುತ್ತದೆ’ ಎಂದರು ಹಾಗೆಯೇ DOC ಒಂದು ಪ್ರಧಾನ ಸಂಸ್ಥೆಯಾಗಿದೆ ಎಂದು ಹೇಳಿದರು.

ಬಿ. ಕಾಂ. ಪ್ರಶಿಕ್ಷಣ [ಬಿ.ಕಾಂ. ಪ್ರೋಗ್ರಾಮ್‌]ನ ಮಹತ್ತ್ವವನ್ನು ವಿವರಿಸಿದ ಜೆಸ್ವಿನ್‌ ಜೋಸ್‌ ಅವರು, ‘ವೃತ್ತಿಪರರಾಗಿ ಔನ್ನತ್ಯಕ್ಕೆ ಏರಲು ಬಿ.ಕಾಂ. ಪದವಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಸಮುದಾಯದೊಳಗೆ ಬದುಕುವ ಕಲೆಯನ್ನು ಕಲಿಸುವುದರ ಜೊತೆಗೆ ಸಮಸ್ಯೆಗಳನ್ನು ಬಗೆಹರಿಸುವ ಪಾಠವನ್ನು ಕೂಡ ಇದು ನೀಡುತ್ತದೆ’ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಮಾಹೆಯ ಆಡಳಿತಾತ್ಮಕ, ಮಾನವಿಕ, ಸಮಾಜವಿಜ್ಞಾನ ಮತ್ತು ಕಾನೂನು ವಿಭಾಗ ಸಹ-ಉಪಕುಲಪತಿಯಾಗಿರುವ ಡಾ. ಮಧು ವೀರರಾಘವನ್‌ ಅವರು ಮಾತನಾಡಿ, ‘ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶೈಕ್ಷಣಿಕ ಪದವಿಗಳ ಪಾತ್ರ ಮಹತ್ತ್ವದ್ದಾಗಿದೆ. ಸವಾಲುಗಳನ್ನು ಎದುರಿಸುವುದು, ಸಂವಹನ ನಡೆಸುವುದು. ಸಾಮೂಹಿಕವಾಗಿ ಕರ್ತವ್ಯ ನಿರ್ವಹಿಸುವುದು, ನಾಯಕತ್ವ ವಹಿಸುವುದು, ಪರಿಸ್ಥಿತಿಗೆ ಹೊಂದಿಕೊಳ್ಳುವುದು ಮುಂತಾದ ಕೌಶಲಗಳನ್ನು ಸಾಧಿಸುವುದು ಪದವಿಶಿಕ್ಷಣದಿಂದ ಸಾಧ್ಯವಿದೆ’ ಎಂದರು.

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಸಂದೀಪ್‌ ಎಸ್‌. ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕಳೆದ 17 ವರ್ಷಗಳಿಂದ ವಿಭಾಗವು ಬೆಳೆದು ಬಂದ ಬಗೆಯನ್ನು ವಿವರಿಸಿದರು. ಸಹಮುಖ್ಯಸ್ಥರಾಗಿರುವ ಡಾ. ರಶ್ಮೀ ಯೋಗೇಶ್‌ ಪೈ ಸ್ವಾಗತಿಸಿದರು. ಬಿಬಿಎಂ ಪದವಿಯ ಸಂಚಾಲಕರಾದ ಡಾ. ಶಿಲ್ಪಾ ಗೋಪಾಲ್‌, ಬಿಕಾಂ ಪದವಿಯ ಸಂಚಾಲಕರಾದ ಡಾ. ಅಭಿಷೇಕ್‌ ರಾವ್‌ ಅವರು ಅತಿಥಿಗಳ ಪರಿಚಯವನ್ನು ನೀಡಿದರು. ವಿದ್ಯಾರ್ಥಿ ನಿರ್ವಹಣೆ ವಿಭಾಗ [ಸ್ಟೂಡೆಂಟ್‌ ಎಂಗೇಜ್‌ಮೆಂಟ್‌] ದ ಸಹಾಯಕ ಮುಖ್ಯಸ್ಥ ಡಾ. ಮಾಥ್ಯೂ ಥಾಮಸ್‌ ಗಿಲ್‌ ಅವರು ಧನ್ಯವಾದ ಸಮರ್ಪಿಸಿದರು.
ಕೋಮಲ್‌ ಜೆನ್ನಿಫೆರ್‌ ಡಿ’ಸೋಜಾ ಮತ್ತು ಪ್ರಿನ್ಸಿಯಾ ನಿಕಿಟಾ ಡಿ’ಸೋಜಾ ಅವರು ಕಾರ್ಯಕ್ರಮ ನಿರ್ವಹಿಸಿದರು.

Previous Post

ಕುಂದಾಪುರ ಉಪವಿಭಾಗದ ಎಸಿ ರಶ್ಮಿ ಎಸ್.ಆರ್ ವರ್ಗಾವಣೆ : ನೂತನ ಎಸಿ ಆಗಿ ಮಹೇಶ್‌ಚಂದ್ರ  ನೇಮಕ.!! 

Next Post

ಬೆಳ್ತಂಗಡಿ : ಬೈಕ್ಗೆ ಬೊಲೆರೊ ವಾಹನ ಡಿಕ್ಕಿ : 6ನೇ ತರಗತಿ ವಿದ್ಯಾರ್ಥಿನಿ ಮೃತ್ಯು ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಬೆಳ್ತಂಗಡಿ : ಬೈಕ್ಗೆ ಬೊಲೆರೊ ವಾಹನ ಡಿಕ್ಕಿ : 6ನೇ ತರಗತಿ ವಿದ್ಯಾರ್ಥಿನಿ ಮೃತ್ಯು ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸಿಂಗಲ್ ಲೇಔಟ್ ಅನುಮತಿ ವಿಳಂಬ ಆರೋಪ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಎದುರು ರಘುಪತಿ ಭಟ್ ಧರಣಿ

ಸಿಂಗಲ್ ಲೇಔಟ್ ಅನುಮತಿ ವಿಳಂಬ ಆರೋಪ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಎದುರು ರಘುಪತಿ ಭಟ್ ಧರಣಿ

23/03/2026
ಆತ್ರಾಡಿ: ಟೆಂಪೋ–ಬೈಕ್ ಮುಖಾಮುಖಿ ಡಿಕ್ಕಿ – ಸವಾರ ಮೃತ್ಯು

ಆತ್ರಾಡಿ: ಟೆಂಪೋ–ಬೈಕ್ ಮುಖಾಮುಖಿ ಡಿಕ್ಕಿ – ಸವಾರ ಮೃತ್ಯು

23/03/2026
ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರಥೋತ್ಸವ ಮತ್ತು ದೈವಗಳ ನೇಮೋತ್ಸವ

ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರಥೋತ್ಸವ ಮತ್ತು ದೈವಗಳ ನೇಮೋತ್ಸವ

23/03/2026
ಮಣಿಪಾಲದಲ್ಲಿ ಅಂಗಾಂಗ ದಾನ ಜಾಗೃತಿ ಕುರಿತು ಎರಡು ದಿನಗಳ CME ಕಾರ್ಯಕ್ರಮ

ಮಣಿಪಾಲದಲ್ಲಿ ಅಂಗಾಂಗ ದಾನ ಜಾಗೃತಿ ಕುರಿತು ಎರಡು ದಿನಗಳ CME ಕಾರ್ಯಕ್ರಮ

23/03/2026

Recent News

ಸಿಂಗಲ್ ಲೇಔಟ್ ಅನುಮತಿ ವಿಳಂಬ ಆರೋಪ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಎದುರು ರಘುಪತಿ ಭಟ್ ಧರಣಿ

ಸಿಂಗಲ್ ಲೇಔಟ್ ಅನುಮತಿ ವಿಳಂಬ ಆರೋಪ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಎದುರು ರಘುಪತಿ ಭಟ್ ಧರಣಿ

23/03/2026
ಆತ್ರಾಡಿ: ಟೆಂಪೋ–ಬೈಕ್ ಮುಖಾಮುಖಿ ಡಿಕ್ಕಿ – ಸವಾರ ಮೃತ್ಯು

ಆತ್ರಾಡಿ: ಟೆಂಪೋ–ಬೈಕ್ ಮುಖಾಮುಖಿ ಡಿಕ್ಕಿ – ಸವಾರ ಮೃತ್ಯು

23/03/2026
ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರಥೋತ್ಸವ ಮತ್ತು ದೈವಗಳ ನೇಮೋತ್ಸವ

ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರಥೋತ್ಸವ ಮತ್ತು ದೈವಗಳ ನೇಮೋತ್ಸವ

23/03/2026
ಮಣಿಪಾಲದಲ್ಲಿ ಅಂಗಾಂಗ ದಾನ ಜಾಗೃತಿ ಕುರಿತು ಎರಡು ದಿನಗಳ CME ಕಾರ್ಯಕ್ರಮ

ಮಣಿಪಾಲದಲ್ಲಿ ಅಂಗಾಂಗ ದಾನ ಜಾಗೃತಿ ಕುರಿತು ಎರಡು ದಿನಗಳ CME ಕಾರ್ಯಕ್ರಮ

23/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved