ಉಡುಪಿ :ಮೇ 17:ಖ್ಯಾತ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರ್ ವಯಲಿನ್ ವಾದನ ಕಛೇರಿ ಕಾರ್ಯಕ್ರಮ ಶ್ರೀಕೃಷ್ಣಮಠದ ರಾಜಾಂಗಣ ದಲ್ಲಿ ಮೇ 15ರಂದು ನಡೆಯಿತು .
ಅಪಾರ ಜನಪ್ರಿಯತೆ ಯನ್ನು ಪಡೆದುಕೊಂಡಿರುವ ಈ ಬಾಲಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ ಹರಸಿದರು .


ಗುರುಗಳಾದ ವಿದ್ವಾನ್ ಶ್ರೀ ಅನುರೂಪ್ ಅವರನ್ನೂ ಮತ್ತಿತರ ಸಹಕಲಾವಿದರನ್ನೂ ಪ್ರಸಾದ ನೀಡಿ ಹರಸಿದರು .

ಕಿಕ್ಕಿರಿದ ರಾಜಾಂಗಣ ದಲ್ಲಿ ನಡೆದ ಈ ಸಂಗೀತ ಗಾನ ಸುಧೆಯನ್ನು ಉಡುಪಿಯ ಹೆಸರಾಂತ ಗಾಂಧಿ ಆಸ್ಪತ್ರೆಯ ನಿರ್ದೇಶಕರಾದ ಡಾ .ಹರಿಶ್ಚಂದ್ರ ರವರು ತಮ್ಮ ಆಸ್ಪತ್ರೆಯ 30 ನೇ ವರ್ಧಂತ್ಯುತ್ಸವದ ನಿಮಿತ್ತ ಈ ಭವ್ಯ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು .

ಶ್ರೀ ಮಠದ ವಿಶೇಷ ಭಕ್ತರಾದ ಹರಿಶ್ಚಂದ್ರ ದಂಪತಿಗಳನ್ನು ಪೂಜ್ಯ ಪರ್ಯಾಯಶ್ರೀಪಾದರು ಶ್ರೀಕೃಷ್ಣಪ್ರಸಾದವನ್ನು ನೀಡಿ ಹರಸಿದರು .
ಕುಮಾರಿ ಗಂಗಾ ಳಿಗೆ ಭಗವದ್ಗೀತೆಯನ್ನು ಬರೆಯುವ ಕೋಟಿ ಗೀತಾ ಲೇಖನ ಯಜ್ಞದೀಕ್ಷೆಯನ್ನು ಪೂಜ್ಯ ಶ್ರೀಪಾದರು ನೀಡಿ ಉಜ್ವಲ ಭವಿಷ್ಯವನ್ನು ಹಾರೈಸಿದರು.


![ವೆಲ್ಕಮ್ಗ್ರೂಪ್ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಹೊಟೇಲ್ ಎಡ್ಮಿನಿಸ್ಟ್ರೇಶನ್ [ವಾಗ್ಷ]ದಿಂದ ಕೌಶಲ ತರಬೇತಿಯ ಕೇಂದ್ರ ಆರಂಭ..!!](https://www.dhrishyanews.com/wp-content/uploads/2024/05/IMG-20240517-WA0009-75x75.jpg)






