Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಶ್ರೀರಾಮನಂತೆ ಸ್ಮಿತಪೂರ್ವಭಾಷಿಯಾಗಬೇಕು: ಭೀಮನಕಟ್ಟೆ ಶ್ರೀ..!!

Dhrishya News by Dhrishya News
23/01/2024
in ಕರಾವಳಿ, ಸುದ್ದಿಗಳು
0
0
SHARES
7
VIEWS
Share on FacebookShare on Twitter

ಉಡುಪಿ, ಜನವರಿ 23: ಸತ್ಯವಾದ ಮಾತುಗಳನ್ನು ಮತ್ತೊಬ್ಬರ ಮನಸ್ಸು ನೋವಾಗದ ಹಾಗೆ ಮಂದಸ್ಮಿತದಿಂದ ಮೃದುವಾಗಿ ಆಡುವುದರ ಮೂಲಕ ಪರಮಾತ್ಮ ಶ್ರೀರಾಮಚಂದ್ರನು ಸ್ಮಿತಪೂರ್ವಭಾಷಿಯಾಗಿದ್ದಾನೆ. ಅಂತಹ ಒಂದು ಸದ್ಗುಣವನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಮ್ಮಿಂದಾಗಬೇಕು ಎಂದು ಶ್ರೀ ಮದಚ್ಚುತ ಪ್ರೇಕ್ಷಾಚಾರ್ಯ ಮಹಾಸಂಸ್ಥಾಾನ ಭೀಮನಕಟ್ಟೆ ಮಠಾಧಿಪತಿ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು ನುಡಿದರು.

ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಾಣ ಪ್ರತಿಷ್ಠೆ ಸಂಭ್ರಮಾಚರಣೆ ಪ್ರಯುಕ್ತ ಕ್ಷೇತ್ರದಲ್ಲಿ ನಡೆದ ರಾಮನಾಮ ತಾರಕ ಮಂತ್ರ ಹೋಮದ ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದರು ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. 

ಅಯೋಧ್ಯೆಯಲ್ಲಿ 5 ಶತಮಾನಗಳ ಅನಂತರ ಪುನಃ ಶ್ರೀರಾಮನಿಗೆ ಗುಡಿ ನಿರ್ಮಾಣಗೊಂಡು ಸಕಲ ಭಕ್ತರಿಗೆ ಹಬ್ಬದ ದಿನವಾಗಿದೆ. ಮನುಷ್ಯನಾಗಿ ಹೇಗೆ ಬಾಳಬೇಕೆಂದು ಪ್ರಪಂಚ ಮುಖಕ್ಕೆ ತೋರಿಸಿಕೊಡಲು ಧರೆಗಿಳಿದ ದೊಡ್ಡ ಅವತಾರವೇ ರಾಮಾವತಾರ. ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯಾದಂತೆ ನಮ್ಮ ಹೃದಯವೆಂಬ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಪ್ರತಿಷ್ಠಾಾಪನೆ ಮಾಡಿಕೊಂಡರೆ ಎಲ್ಲವೂ ಒಳಿತಾಗುವುದು. ಶ್ರೀರಾಮನನ್ನು ಧ್ಯಾಾನಿಸುವಾಗ ಆತನ ಒಂದು ಗುಣ ಸ್ವಭಾವವನ್ನಾದರೂ ನಮ್ಮೊಳಗೆ ತುಂಬಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದು ಆಶೀರ್ವಚನ ನೀಡಿದರು.

ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆಯಿಂದ ದೇಶದೆಲ್ಲೆೆಡೆ ಭಕ್ತರಿಗೆ ಸಂಭ್ರಮಾಚರಣೆ. ನಾವೆಲ್ಲರೂ ಶ್ರೀರಾಮನ ಆದರ್ಶವನ್ನು ಪಾಲಿಸಿಕೊಂಡು ಬದುಕುವ ಯೋಗ-ಯೋಗ್ಯತೆಯನ್ನು ಅವನೇ ಕರುಣಿಸಬೇಕೆಂಬುದೇ ಪ್ರಾಾರ್ಥನೆಯಾಗಿದೆ ಎಂದರು.

ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆ ವಹಿಸಿ, ಕ್ಷೇತ್ರದಲ್ಲಿ ನೆರವೇರಿಸಲಾದ ರಾಮತಾರಕ ಮಂತ್ರ ಹೋಮವನ್ನು ಪ್ರಧಾನಿ ನರೇಂದ್ರ ಮೋದಿಯವರನ್ನೇ ಸಂಕಲ್ಪವಾಗಿರಿಸಿ, ದೇಶದ ಸುಭಿಕ್ಷೆಗೆ ಪ್ರಾರ್ಥಿಸಲಾಗಿದೆ ಎಂದು ಆಶೀರ್ವಚನ ನೀಡಿದರು.

ರಂಜನಿ ಮೆಮೋರಿಯಲ್ ಟ್ರಸ್ಟ್  ಅಧ್ಯಕ್ಷ ಡಾ ಅರವಿಂದ ಹೆಬ್ಬಾರ್, ಪಲಿಮಾರು ಮಠದ ಪಿಆರ್‌ಒ ಶ್ರೀಶ ಭಟ್ ಕಡೆಕಾರು ಉಪಸ್ಥಿತರಿದ್ದರು. ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ನಿರೂಪಿಸಿ, ವಂದಿಸಿದರು.

Previous Post

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ :” ಶ್ರೀರಾಮನಾಮ ತಾರಕಮ್” ಹರಿದು ಬಂದ ಭಕ್ತ ಸಾಗರ…!!

Next Post

ಅಯೋಧ್ಯೆಯ ರಾಮಲಲ್ಲಾನಿಗೆ ಗುಜರಾತ್ ನ ವ್ಯಾಪಾರಿಯಿಂದ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಣೆ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಅಯೋಧ್ಯೆಯ ರಾಮಲಲ್ಲಾನಿಗೆ ಗುಜರಾತ್ ನ ವ್ಯಾಪಾರಿಯಿಂದ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಣೆ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಏಪ್ರಿಲ್ 1ರಿಂದ UPI-ATM ಹಣ ತೆಗೆಯುವಿಕೆಗೆ ಶುಲ್ಕ: ಉಚಿತ ಮಿತಿ ಬಳಿಕ ₹20-25 ಚಾರ್ಜ್ ಸಾಧ್ಯ….!

ಏಪ್ರಿಲ್ 1ರಿಂದ UPI-ATM ಹಣ ತೆಗೆಯುವಿಕೆಗೆ ಶುಲ್ಕ: ಉಚಿತ ಮಿತಿ ಬಳಿಕ ₹20-25 ಚಾರ್ಜ್ ಸಾಧ್ಯ….!

18/03/2026
ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

18/03/2026
ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ….!

ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ….!

18/03/2026
ಸರಕಾರಿ ಉದ್ಯೋಗದ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ  ರೂ.ವಂಚನೆ…!

ಸರಕಾರಿ ಉದ್ಯೋಗದ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ ರೂ.ವಂಚನೆ…!

18/03/2026

Recent News

ಏಪ್ರಿಲ್ 1ರಿಂದ UPI-ATM ಹಣ ತೆಗೆಯುವಿಕೆಗೆ ಶುಲ್ಕ: ಉಚಿತ ಮಿತಿ ಬಳಿಕ ₹20-25 ಚಾರ್ಜ್ ಸಾಧ್ಯ….!

ಏಪ್ರಿಲ್ 1ರಿಂದ UPI-ATM ಹಣ ತೆಗೆಯುವಿಕೆಗೆ ಶುಲ್ಕ: ಉಚಿತ ಮಿತಿ ಬಳಿಕ ₹20-25 ಚಾರ್ಜ್ ಸಾಧ್ಯ….!

18/03/2026
ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

18/03/2026
ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ….!

ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ….!

18/03/2026
ಸರಕಾರಿ ಉದ್ಯೋಗದ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ  ರೂ.ವಂಚನೆ…!

ಸರಕಾರಿ ಉದ್ಯೋಗದ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ ರೂ.ವಂಚನೆ…!

18/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved