Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಮಂಗಳೂರು :”ಎಂ.ಐ. ಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆ”ಯಲ್ಲಿ ಕ್ಯಾನ್ಸರ್ ಬಗ್ಗೆ ಭಯಬೇಡ,ಅರಿವಿರಲಿ ಎಂಬ ಧ್ಯೇಯ ದೊಂದಿಗೆ ಕ್ಯಾನ್ಸರ್ ಸಹಾಯವಾಣಿ 805063677 ಲೋಕಾರ್ಪಣೆ..!! 

Dhrishya News by Dhrishya News
09/01/2024
in ಮುಖಪುಟ, ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
100
VIEWS
Share on FacebookShare on Twitter

ಮಂಗಳೂರು :ಜನವರಿ 09: ದ್ರಶ್ಯ ನ್ಯೂಸ್ :ಕ್ಯಾನ್ಸರ್ ಬಗ್ಗೆ ಭಯಬೇಡ,ಅರಿವಿರಲಿ ಎಂಬ ಧ್ಯೇಯ ದೊಂದಿಗೆ ಮಂಗಳೂರಿನ ಎಂ.ಐ. ಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಿನಾಂಕ 8-01-2024ರಂದು ಕ್ಯಾನ್ಸರ್ ಸಹಾಯವಾಣಿ 8050636777  ಲೋಕಾರ್ಪಣೆ ಗೊಂಡಿತು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ,ಶ್ರೀ ಸಿ.ಬಿ ರಿಷ್ಯಂತ್ ಐ.ಪಿ.ಎಸ್,ಮುಖ್ಯ ಅತಿಥಿಯಾಗಿ ಆಗಮಿಸಿ ಸಹಾಯವಾಣಿಗೆ ಅಧಿಕೃತ ಚಾಲನೆಯನ್ನು ನೀಡಿದರು.ಈ ಸಂಧರ್ಭ ದಲ್ಲಿ ಮಾತನಾಡಿದ ಅವರು ಕ್ಯಾನ್ಸರ್ ಬಗ್ಗೆ ಸಮಾಜದಲ್ಲಿರುವ ಜನರಿಗಿರುವ ಭಯ,ತಪ್ಪು ತಿಳುವಳಿಕೆ, ಗೊಂದಲಗಳನ್ನು ಹೋಗಲಾಡಿಸಿ ಅರಿವು ಮೂಡಿಸಿ ಆರಂಭಿಕ ಹಂತದಲ್ಲಿಯೆ ಜನರು ಎಚ್ಚರ ಗೊಳ್ಳುವಂತೆ ಮಾಡುವುದು ಸಮಾಜದ ಜನರಿಗೆ ಸಹಾಯಹಸ್ತ ಚಾಚುವುದು ಇದರ ಪ್ರಮುಖ ಉದ್ದೇಶ.ಎಂ.ಐ. ಒ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು ಕ್ಯಾನ್ಸರ್ ಗೆ ಸಹಾಯದ ನಿರೀಕ್ಷೆಯಲ್ಲಿರುವ ಜನರಿಗೆ,ಇದು ದಾರಿದೀಪವಾಗಿ ಮೂಡಿ ಬರಲಿದೆ ಎಂದು ವಿಶ್ವಾಸ ವ್ಯಕ್ತಡಿಸಿದರು.ಕ್ಯಾನ್ಸರ್ ಎಂದಾಕ್ಷಣ ಜನರು ಬದುಕಿನ ವಿಶ್ವಾಸ ವನ್ನೆ ಕಳೆದುಕೊಳ್ಳುವುದು ಸಾಮಾನ್ಯವಾಗಿದೆ.ಕ್ಯಾನ್ಸರ್ ಭಾದಿತರಿಗೆ ಕಾಯಿಲೆಯ ಹಾಗೂ ಚಿಕಿತ್ಸೆಯ ಬಗ್ಗೆ ಸರಿಯಾದ ಸಲಹೆ ಸರಿಯಾದ ಸಮಯದಲ್ಲಿ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯಿಂದಲೆ ಸಿಗಲು ಕ್ಯಾನ್ಸರ್ ಸಹಾಯವಾಣಿ ನೆರವಾಗುತ್ತದೆ ಎಂದರು.ಎಂ.ಐ.ದ ಈ ಉತ್ತಮ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

ಎಂ.ಐ. ಒ ನ್ಯೂ ವೆಂಚರ್ಸ್ ನ ನಿರ್ದೇಶಕರಾದ ಡಾ.ಜಲಾಲುದ್ದೀನ್ ಅಕ್ಬರ್ ಅವರು ಎಂ.ಐ. ಒ ನಡೆದು ಬಂದ ಹಾದಿಯ ಬಗ್ಗೆ ಬೆಳಕು ಚೆಲ್ಲಿದರು.ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಮೊದಲ ಆದ್ಯತೆ ಯಾಗಿ ಎಂ.ಐ.ಒ ಮೂಡಿ ಬರುವಲ್ಲಿ ಸಿಬಂದಿಗಳ ಅಪೂರ್ವ ಸೇವೆಯೇ ಕಾರಣ ಎಂದರು.ಪ್ರಸ್ತುತ ನಮ್ಮ ಸೇವೆಯನ್ನು ಉಡುಪಿ,ತೀರ್ಥ ಹಳ್ಳಿ ಯಲ್ಲಿ ಯೂ ಎಂ.ಐ.ಒ ಆಸ್ಪತ್ರೆ ಯನ್ನು ತೆರೆಯುವ ಸನಿಹದಲ್ಲಿದೆ.ಇದು ಗ್ರಾಮೀಣ ಭಾಗದ ಜನರಿಗೆ ಇನ್ನಷ್ಟು ಸೇವೆ ನೀಡುವ ಅವಕಾಶ ನೀಡಿದೆ.

ಕಾರ್ಯ ಕ್ರಮದಲ್ಲಿ ಎಂ.ಐ. ಒ ದ ರೇಡಿಯೇಶನ್ ತಜ್ಞರಾದ ಡಾ.ವೆಂಕಟ್ರಮಣ್ ಕಿಣಿ ಮಾತನಾಡಿ ಕ್ಯಾನ್ಸರ್ ಸಹಾಯವಾಣಿ ಯಾವ ರೀತಿ ಕಾರ್ಯನಿರ್ವಹಿಸಲಿದೆ ಎನ್ನುವುದನ್ನು ವಿಸ್ತೃತವಾಗಿ ವಿವರಿಸಿದರು.

ಕ್ಯಾನ್ಸರ್ ಸಹಾಯವಾಣಿ 8050636777 ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗೆ ಕ್ಯಾನ್ಸರ್ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಅಥವಾ ಸಲಹೆ ,ಮಾರ್ಗದರ್ಶನಗಳನ್ನು ಪಡೆಯಲು ಕರೆ ಮಾಡಬಹುದಾಗಿದೆ.

ಪ್ರಾರಂಭಿಕ ಹಂತದಲ್ಲಿ ಪ್ರತಿ ದಿನ ಬೆಳಿಗ್ಗೆ 9ರಿಂದ ಸಂಜೆ 6ರ ತನಕ ಸಹಾಯವಾಣಿ ಸೇವೆ ನೀಡಲಿದ್ದು ಸಾರ್ವಜನಿಕರು ಯಾವ ಪ್ರದೇಶದಿಂದಲೂ ಸುಲಲಿತವಾಗಿ ಕರೆಗಳನ್ನು ಮಾಡಬಹುದಾಗಿದೆ.

ಸಹಾಯವಾಣಿಗೆ ಬಂದ ಕರೆಗಳಿಗೆ ಅನುಸಾರವಾಗಿ ಸಹಾಯವಾಣಿ ಸಿಬ್ಬಂದಿ ಸಂಬಂಧಿಸಿದ ವಿಭಾಗದವರೊಡನೆ ಸಮಾಲೋಚಿಸಿ ಸೂಕ್ತ ಪರಿಹಾರ ಒದಗಿಸಲಿದ್ದಾರೆ.

ಕ್ಯಾನ್ಸರ್ ಸಹಾಯವಾಣಿ ತಂಡದಲ್ಲಿ ಅನುಭವೀ ಸಿಬ್ಬಂದಿಗಳ ಜೊತೆ ಕ್ಯಾನ್ಸರ್ ತಜ್ಞ ವೈದ್ಯರು,ಅನುಭವಿ ಶುಷ್ರೂಶಕರು,ಆಪ್ತ ಸಮಾಲೋಚಕರು,ಆಹಾರ ತಜ್ಞರು,ವಿಮಾ ಅಧಿಕಾರಿಗಳು,ವೈದ್ಯಕೀಯ ಸಮಾಜ ಕಾರ್ಯ ವೃತ್ತಿಪರರು,ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನೂ ಒಳಗೊಂಡಂತೆ ಪರಸ್ಪರ ಸಂವಹನದ ಒಂದು ತಂಡವೇ ಕಾರ್ಯ ನಿರ್ವಹಿಸಲಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಜನ ಸಾಮಾನ್ಯರಿಗೆ ಕ್ಯಾನ್ಸರ್ ಕುರಿತಂತೆ ಕಾಡುವ ಹಲವಾರು ವಿಚಾರಗಳಿಗೆ,ಸೂಕ್ತ ಮಾಹಿತಿಯನ್ನು ಒದಗಿಸಿ ಜನರ ತಪ್ಪು ತಿಳುವಳಿಕೆ ಗಳನ್ನು ಹೋಗಲಾಡಿಸಿ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಒದಗಿಸಲು ಎಂ.ಐ. ಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆ, ಪಂಪ್ ವೆಲ್ ಮಂಗಳೂರು ಮುಂದಡಿ ಇಟ್ಟಿದ್ದು ಕ್ಯಾನ್ಸರ್ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ಯನ್ನು ನೈತಿಕ ಮೌಲ್ಯಗಳ ಜೊತೆ ಅನುಭೂತಿ ಯೊಂದಿಗೆ ನೀಡಿ ಸಹಸ್ರಾರು ರೋಗಿಗಳಿಗೆ ಗುಣಮಟ್ಟದ ಜೀವನವನ್ನು ಮರಳಿ ನೀಡಿರುವ ಹೆಗ್ಗಳಿಕೆ ಹೊಂದಿದೆ. ಇದು ಕ್ಯಾನ್ಸರ್ ಕುರಿತಂತೆ ಸಾರ್ವಜನಿಕರಿಗೆ ಸಹಾಯ ನೀಡಲು ಆರಂಭ ಗೊಳ್ಳಲಿರುವ ಪ್ರಥಮ ಕ್ಯಾನ್ಸರ್ ಸಹಾಯವಾಣಿ ಎಣಿಸಿಕೊಳ್ಳಲಿದೆ.

ಕ್ಯಾನ್ಸರ್ ಸಹಾಯವಾಣಿ ಮುಖ್ಯವಾಗಿ ಕ್ಯಾನ್ಸರ್ ನಿಂದ ನೊಂದವರ ಪಾಲಿನ ಆಸರೆ,ಕ್ಯಾನ್ಸರ್ ವಿಚಾರದಲ್ಲಿ ಮನಸ್ಸು ಗೊಂದಲ ಮಾಡಿಕೊಂಡವರಿಗಾಗಿ,ಚಿಕಿತ್ಸೆ ಪಡೆಯದೆ , ತ್ರಿಶಂಕು ಸ್ಥಿತಿಯಲ್ಲಿ ರುವವರ,ಸರಿಯಾದ ಮಾರ್ಗದರ್ಶನ ಸಿಗದೆ ತೊಳಲಾಡುತ್ತಿರುವವರ,ಕಾಯಿಲೆ ಗುಣಲಕ್ಷಣ ಗಳ ಹೊಂದಿದವರ,ಕ್ಯಾನ್ಸರ್ ಬಗ್ಗೆ ಜ್ಞಾನ ಪಡೆಯಲು ಬಯಸುವವರ , ಕ್ಯಾನ್ಸರ್ ರೋಗ ಚಿಕಿತ್ಸೆಗೆ ಇರುವ ಹಲವು ಯೋಜನೆಗಳು ,ಚಿಕಿತ್ಸೆಯ ಸಂಬಂಧಿಸಿದ ವಿಚಾರಗಳಿಗೆ ಹೀಗೆ ಹತ್ತು ಹಲವು ವಿಚಾರಗಳಿಗೆ ಮಾಹಿತಿ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಯಾವುದೇ ಫಲಾಪೇಕ್ಷೆಗಳಿಲ್ಲದೆ ಸಹಾಯವಾಣಿ ನೀಡಲಿದೆ.

ಸಾರ್ವಜನಿಕರು ಕ್ಯಾನ್ಸರ್ ಸಹಾಯವಾಣಿಯ ಸದುಪಯೋಗವನ್ನು ಪಡೆಯುವುದರ ಜೊತೆಗೆ ಕ್ಯಾನ್ಸರ್ ಅರಿವನ್ನು ಬೆಳೆಸಿಕೊಂಡು ಭಯವನ್ನು ಹೋಗಲಾಡಿಸಿ,ಅಲ್ಲದೆ ಕಷ್ಟದ ಸನಿವೇಶದಲ್ಲಿರುವ ತಮಗೆ ಗೊತ್ತಿರುವ ರೋಗಿಗಳಿಗೆ ಅಥವಾ ಕ್ಯಾನ್ಸರ್ ಭಾಧೆಗೊಳಗಾಗಿರುವವರಿ ಗೆ ಸಹಾಯ ಹಸ್ತ ಚಾಚಲು ಸಹಾಯ ವಾಣಿಯನ್ನು ಸೇತುವೆಯಾಗಿ ಬಳಸಿಕೊಳ್ಳಲು ಡಾ ಕಿಣಿ ಅವರು ಕರೆ. ನೀಡಿದರು

ಎಂ.ಐ.ಒ ದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶ್ರೀಕಾಂತ್ ರಾವ್ ,ಮಾತನಾಡಿ ಕ್ಯಾನ್ಸರ್ ಚಿಕಿತ್ಸೆ ಸಮಾಜದ ಎಲ್ಲ ವರ್ಗದವರಿಗೂ ಕ್ಲಪ್ತ ಸಮಯದಲ್ಲಿ ಮಿತದರದಲ್ಲಿ ಸಿಗಬೇಕೇನ್ನುವುದು ನಮ್ಮ ಮೊದಲ ಆದ್ಯತೆ ಹಾಗೆಯೇ ಸರಕಾರದ ಎಲ್ಲ ಯೋಜನೆಯಡಿಯಲ್ಲಿ ಜನರಿಗೆ ಯಾವುದೇ ತ್ರಾಸವಿಲ್ಲದೆ ಸುಲಲಿತವಾಗಿ ಚಿಕಿತ್ಸೆ ಪಡೆಯುವಂತಾಗಬೇಕು ಎನ್ನುವುದೇ ನಮ್ಮ ಧ್ಯೇಯ. ಎಂದರು.

ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳು,ರೋಗಿಗಳ ಕುಟುಂಬಿಕರು,ಸಿಬಂದಿಗಳು ಹಾಜರಿದ್ದರು. ಎಂ.ಐ. ಒ ಆಸ್ಪತ್ರೆಯ ಆಪರೇಶನ್ ಮ್ಯಾನೇಜರ್ ಶ್ರೀ ರಾಘವೇಂದ್ರ ಸಿಂಗ್ ವಂದನಾರ್ಪಣೆಗೈದರು, ಡಾ.ವಿಶ್ರುತ ದೇವಾಡಿಗ ಅವರು ಕಾರ್ಯಕ್ರಮ ನಿರೂಪಿಸಿದರು

Previous Post

ಯಶ್ ನೋಡಲು ಬರುತ್ತಿದ್ದ ಅಭಿಮಾನಿಯ ಸ್ಕೂಟಿ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು..!!

Next Post

ರಾಜ್ಯದಲ್ಲಿಂದು ‘252 ಜನರಿಗೆ ಕೊರೋನಾ ಪಾಸಿಟಿವ್..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ರಾಜ್ಯದಲ್ಲಿಂದು '252 ಜನರಿಗೆ ಕೊರೋನಾ ಪಾಸಿಟಿವ್..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026

Recent News

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved