Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಾಹೆಯ ಎಂಸಿಎಚ್‌ಪಿಯಲ್ಲಿ 24ನೇಯ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ…!!  

Dhrishya News by Dhrishya News
29/11/2023
in ಕರಾವಳಿ, ಮುಖಪುಟ, ಸುದ್ದಿಗಳು
0
ಮಾಹೆಯ ಎಂಸಿಎಚ್‌ಪಿಯಲ್ಲಿ 24ನೇಯ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ…!!   
0
SHARES
7
VIEWS
Share on FacebookShare on Twitter

ಮಣಿಪಾಲ:ನವೆಂಬರ್ 29:ದ್ರಶ್ಯ ನ್ಯೂಸ್ : ಮಣಿಪಾಲ ಅಕಾಡೆಮಿ ಹೈಯರ್‌ ಎಜುಕೇಶನ್‌ [ಮಾಹೆ] ನ ಪ್ರತಿಷ್ಠಿತ ಘಟಕವಾಗಿರುವ, ಭಾರತದ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿರುವ ಮಣಿಪಾಲ್‌ ಆರೋಗ್ಯ ವಿಜ್ಞಾನಗಳ ಕಾಲೇಜು [ಮಣಿಪಾಲ್‌ ಕಾಲೇಜ್‌ ಆಫ್‌ ಹೆಲ್ತ್‌ ಸಾಯನ್ಸಸ್‌- ಎಂಸಿಪಿಎಚ್‌] ಇದರ 24 ನೇಯ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ನವೆಂಬರ್‌ 21, 2023 ರಂದು ನಡೆಯಿತು.

ಭಾರತದ ಆರೋಗ್ಯ ವಿಜ್ಞಾನದ ವೃತ್ತಿಪರ ಕ್ಷೇತ್ರದಲ್ಲಿಯೇ ಎಂಸಿಪಿಎಚ್‌ಗೆ ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ರೋಗಿಗಳ ಕಾಯಿಲೆ ಪತ್ತೆ, ರೋಗ ವಿಧಾನ, ರೋಗಿಯ ಅಸೌಖ್ಯದ ವಿವಿಧ ಸ್ಥಿತಿಗಳ ನಿಭಾಯಿಸುವಿಕೆಗಳಲ್ಲಿ ಬಹುಶಿಸ್ತೀಯ ಆರೋಗ್ಯ ಶುಶ್ರೂಷಾ ಬಳಗವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು ರೋಗಿಗಳ ಗುಣಮುಖತೆಯನ್ನು ವೃದ್ಧಿಸಿರುವುದು ಗಮನಾರ್ಹವಾಗಿದೆ.

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ನ ವೈಸ್‌ ಛಾನ್ಸಲರ್‌ ಲೆ, ಜ. [ಡಾ.] ಎಂ. ಡಿ. ವೆಂಕಟೇಶ್‌ ಅವರು ಜಾಗತಿಕವಾಗಿ ಶೀಘ್ರ ವೃದ್ಧಿ ಹೊಂದುತ್ತಿರುವ ಆರೋಗ್ಯ ಆರೈಕೆಯ ಕ್ಷೇತ್ರಕ್ಕೆ ಎಂಸಿಪಿಎಚ್‌ ಅತ್ಯುತ್ತಮ ಪದವೀಧರರನ್ನು ಒದಗಿಸುವಲ್ಲಿ ಬದ್ಧವಾಗಿದೆ. ಮಾಹೆಯ ಈ ಪ್ರತಿಷ್ಠಿತ ವಿಭಾಗವು ಆರಂಭವಾದ ದಿನಗಳಿಂದಲೂ ಅತ್ಯುತ್ತಮ ಪ್ರಗತಿಯನ್ನು ದಾಖಲಿಸಿದ್ದು, ಭಾರತದ ಆರೋಗ್ಯವಿಜ್ಞಾನ ಕ್ಷೇತ್ರದಲ್ಲಿಯೇ ಮಹತ್ತ್ವದ ಸ್ಥಾನವನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಈ ವಿಭಾಗವು ಸಮಕಾಲೀನ ಸಂದರ್ಭದ ಬೇಡಿಕೆಗೆ ತಕ್ಕಂಥ ಆರೋಗ್ಯ ಪ್ರವಿಧಾನ [ಪ್ರೊಗ್ರಾಮ್‌]ಗಳನ್ನು, ಅತ್ಯುತ್ಕೃಷ್ಠವಾದ ಮೂಲಸೌಕರ್ಯಗಳನ್ನು, ಸುಸಜ್ಜಿತವಾದ ಶುಶ್ರೂಷಾ ಸೌಲಭ್ಯಗಳನ್ನು, ಸಮರ್ಪಣಭಾವದ, ಉನ್ನತ ಅರ್ಹತೆಯ ಬೋಧಕ ಸಿಬ್ಬಂದಿಗಳನ್ನು ಹೊಂದಿದೆ’ ಎಂದರು.

ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಪ್ರೊ ವೈಸ್‌ ಛಾನ್ಸಲರ್‌ ಡಾ. ಶರತ್‌ ಕೆ. ರಾವ್‌ ಅವರು ಮಾತನಾಡಿ, ‘’ಮಾಹೆಯ ಮಣಿಪಾಲ್‌ ಕಾಲೇಜ್‌ ಆಫ್‌ ಹೆಲ್ತ್‌ ಸಾಯನ್ಸಸ್‌ ಘಟಕವು 7೦ ವಿಭಿನ್ನ ಪ್ರವಿಧಾನ [ಶೈಕ್ಷಣಿಕ ಪ್ರೋಗ್ರಾಮ್‌]ಗಳನ್ನು ಹೊಂದಿದ್ದು ಇದು ಸಂಸ್ಥೆಯ ಹಿರಿಮೆಯನ್ನು ಸೂಚಿಸುತ್ತದೆ. ಜಗತ್ತಿನ ಬೇರೆ ಬೇರೆ ಕಡೆಯ ವಿಶ್ವವಿದ್ಯಾನಿಲಯಗಳಲ್ಲಿ, ಆಸ್ಪತ್ರೆಗಳಲ್ಲಿ, ಆರೋಗ್ಯ ಆರೈಕೆಯ ಸಂಸ್ಥೆಗಳಲ್ಲಿ ಮತ್ತು ಖಾಸಗಿ ಶುಶ್ರೂಷಾಲಯಗಳಲ್ಲಿ ಎಂಸಿಪಿಎಚ್‌ನ ಪೂರ್ವವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿರುವುದು ಹೆಮ್ಮೆ ತರುವ ವಿಚಾರವಾಗಿದೆ’ ಎಂದು ಹೇಳಿದರು,

 

 

ಮಣಿಪಾಲ್‌ ಕಾಲೇಜ್‌ ಆಪ್‌ ಹೆಲ್ತ್‌ ಪ್ರೊಫೆಶನಲ್ಸ್‌ನ ಡೀನ್‌ ಡಾ. ಜಿ. ಅರುಣ್‌ ಮಯ್ಯ ಅವರು ಸ್ವಾಗತ ಭಾಷಣ ಮಾಡುತ್ತ, ಪ್ರಸ್ತುತ 2023ನೆಯ ವರ್ಷದಲ್ಲಿ ಬೋಧಕರ ಮತ್ತು ವಿದ್ಯಾರ್ಥಿಗಳ ಪ್ರಶಂಸನೀಯ ಸಾಧನೆಯ ಸ್ಥೂಲ ಚಿತ್ರಣವನ್ನು ನೀಡಿದರು. ಪೂರ್ವವಿದ್ಯಾರ್ಥಿ ಪ್ರಶಸ್ತಿ-2023 ನ್ನು ದೆಹಲಿಯ ಏಮ್ಸ್‌ [ಎಐಎಂಎಸ್‌]ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ, ಪ್ರಿಯಾಂಕಾ ಗುಪ್ತ ಅವರಿಗೆ ಪ್ರಧಾನ ಮಾಡಿ ಸನ್ಮಾನಿಸಲಾಯಿತು.

 

ಅಸೋಸಿಯೇಟ್‌ ಡೀನ್‌ಗಳಾದ ಡಾ. ರೆಷ್ಮಿ ಬಿ. ಮತ್ತು ಡಾ. ವೆಂಕಟರಾಜ ಐತಾಳ್‌, ಪೂರ್ವವಿದ್ಯಾರ್ಥಿಗಳ ಸಂಪರ್ಕ ವಿಭಾಗದ ಮುಖ್ಯಸ್ಥೆ ಡಾ. ಶೋವನ್‌ ಸಹಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Previous Post

ಮೂಡಿಗೆರೆ:ಚಾಲಕನ ನಿಯಂತ್ರಣ ತಪ್ಪಿ ಮನೆಯೊಳಗೆ ನುಗ್ಗಿದ ಇನ್ನೋವಾ ಕಾರು..!!

Next Post

ರಾಜ್ಯಾದ್ಯಂತ ‘108’ ಸೇವೆಗೆ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್‌ಗೆ ಸಿ ಎಂ ಸಿದ್ದರಾಮಯ್ಯ ಚಾಲನೆ …!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ರಾಜ್ಯಾದ್ಯಂತ ‘108’ ಸೇವೆಗೆ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್‌ಗೆ ಸಿ ಎಂ ಸಿದ್ದರಾಮಯ್ಯ ಚಾಲನೆ …!!

ರಾಜ್ಯಾದ್ಯಂತ '108' ಸೇವೆಗೆ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್‌ಗೆ ಸಿ ಎಂ ಸಿದ್ದರಾಮಯ್ಯ ಚಾಲನೆ ...!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಾ.ಹೆ 169 : ಸಾಣೂರು ಗ್ರಾಪಂ ವ್ಯಾಪ್ತಿಯಲ್ಲಿ  ರಸ್ತೆ ಮಧ್ಯದಲ್ಲಿ ಬಸ್ಸು ಕಾಯುವ ಸಂಕಷ್ಟಕ್ಕೆ ಪರಿಹಾರ ಸನ್ನಿಹಿತ : ಬಸ್ಸು ತಂಗುದಾಣಗಳ ನೀಲನಕಾಶೆ ಸಿದ್ದ..!!

ರಾ.ಹೆ 169 : ಸಾಣೂರು ಗ್ರಾಪಂ ವ್ಯಾಪ್ತಿಯಲ್ಲಿ  ರಸ್ತೆ ಮಧ್ಯದಲ್ಲಿ ಬಸ್ಸು ಕಾಯುವ ಸಂಕಷ್ಟಕ್ಕೆ ಪರಿಹಾರ ಸನ್ನಿಹಿತ : ಬಸ್ಸು ತಂಗುದಾಣಗಳ ನೀಲನಕಾಶೆ ಸಿದ್ದ..!!

06/12/2025
ಡಾ. ರಾಮದಾಸ್ ಎಂ ಪೈ ಬ್ಲಾಕ್‌ನಲ್ಲಿರುವ ಮಣಿಪಾಲ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ ( ಮಾರ್ಕ್) ಘಟಕವು ಪ್ರಾರಂಭವಾದ 16 ತಿಂಗಳೊಳಗೆ 100 ಯಶಸ್ವಿ ಗರ್ಭಧಾರಣೆಯ ಮೂಲಕ ಮಹತ್ವದ ಸಾಧನೆ ಮಾಡಿದೆ..!!

ಡಾ. ರಾಮದಾಸ್ ಎಂ ಪೈ ಬ್ಲಾಕ್‌ನಲ್ಲಿರುವ ಮಣಿಪಾಲ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ ( ಮಾರ್ಕ್) ಘಟಕವು ಪ್ರಾರಂಭವಾದ 16 ತಿಂಗಳೊಳಗೆ 100 ಯಶಸ್ವಿ ಗರ್ಭಧಾರಣೆಯ ಮೂಲಕ ಮಹತ್ವದ ಸಾಧನೆ ಮಾಡಿದೆ..!!

06/12/2025
ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

06/12/2025
ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

06/12/2025

Recent News

ರಾ.ಹೆ 169 : ಸಾಣೂರು ಗ್ರಾಪಂ ವ್ಯಾಪ್ತಿಯಲ್ಲಿ  ರಸ್ತೆ ಮಧ್ಯದಲ್ಲಿ ಬಸ್ಸು ಕಾಯುವ ಸಂಕಷ್ಟಕ್ಕೆ ಪರಿಹಾರ ಸನ್ನಿಹಿತ : ಬಸ್ಸು ತಂಗುದಾಣಗಳ ನೀಲನಕಾಶೆ ಸಿದ್ದ..!!

ರಾ.ಹೆ 169 : ಸಾಣೂರು ಗ್ರಾಪಂ ವ್ಯಾಪ್ತಿಯಲ್ಲಿ  ರಸ್ತೆ ಮಧ್ಯದಲ್ಲಿ ಬಸ್ಸು ಕಾಯುವ ಸಂಕಷ್ಟಕ್ಕೆ ಪರಿಹಾರ ಸನ್ನಿಹಿತ : ಬಸ್ಸು ತಂಗುದಾಣಗಳ ನೀಲನಕಾಶೆ ಸಿದ್ದ..!!

06/12/2025
ಡಾ. ರಾಮದಾಸ್ ಎಂ ಪೈ ಬ್ಲಾಕ್‌ನಲ್ಲಿರುವ ಮಣಿಪಾಲ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ ( ಮಾರ್ಕ್) ಘಟಕವು ಪ್ರಾರಂಭವಾದ 16 ತಿಂಗಳೊಳಗೆ 100 ಯಶಸ್ವಿ ಗರ್ಭಧಾರಣೆಯ ಮೂಲಕ ಮಹತ್ವದ ಸಾಧನೆ ಮಾಡಿದೆ..!!

ಡಾ. ರಾಮದಾಸ್ ಎಂ ಪೈ ಬ್ಲಾಕ್‌ನಲ್ಲಿರುವ ಮಣಿಪಾಲ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ ( ಮಾರ್ಕ್) ಘಟಕವು ಪ್ರಾರಂಭವಾದ 16 ತಿಂಗಳೊಳಗೆ 100 ಯಶಸ್ವಿ ಗರ್ಭಧಾರಣೆಯ ಮೂಲಕ ಮಹತ್ವದ ಸಾಧನೆ ಮಾಡಿದೆ..!!

06/12/2025
ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

06/12/2025
ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

06/12/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved