Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ಗೆ ಫೊಟೊಮಾಡ್ಯುಲೇಶನ್‌ ಥೆರಪಿಯ ಜಾಗತಿಕ ಸಂಘಟನೆಯಿಂದ ಶ್ರೇಷ್ಠ ಸಂಸ್ಥೆಯಾಗಿ ಮಾನ್ಯತೆ..!!

Dhrishya News by Dhrishya News
03/11/2023
in ಕರಾವಳಿ, ಸುದ್ದಿಗಳು
0
0
SHARES
10
VIEWS
Share on FacebookShare on Twitter

ಮಣಿಪಾಲ, 03 ನವೆಂಬರ್ 2023: ಫೊಟೊಮಾಡ್ಯುಲೇಶನ್ ಥೆರಪಿ [ಪಿಬಿಎಂ] ಕ್ಷೇತ್ರದ ಮಹತ್ತ್ವಪೂರ್ಣ ಸಾಧನೆಗಾಗಿ ಫೊಟೊಮಾಡ್ಯುಲೇಶನ್ ಥೆರಪಿಯ ಜಾಗತಿಕ ಸಂಘಟನೆ [ಡಬ್ಲ್ಯುಎಎಲ್ಟಿ]ಯು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ಇದರ ಪಾದಚಿಕಿತ್ಸೆ ಹಾಗೂ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನ ಕೇಂದ್ರವನ್ನು ಶ್ರೇಷ್ಠ ಸಂಸ್ಥೆಯಾಗಿ ಮಾನ್ಯ ಮಾಡಿದೆ.

ಡಬ್ಲ್ಯುಎಎಲ್ಟಿ (ವಾಲ್ಟ್] ಯ ಸದಸ್ಯ ನಿರ್ದೇಶಕ ಡಾ. ಜಿ. ಅರುಣ್ ಮಯ್ಯ, ಈ ಕ್ಷೇತ್ರದ ಮುಂಚೂಣಿ ಸಾಧಕರಾಗಿದ್ದು ಜಾಗತಿಕ ಮಾನ್ಯತೆಯನ್ನು ದೊರಕಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಡಾ. ಮಯ್ಯ ಅವರ ಸಹಭಾಗಿತ್ವದ ಸಂಶೋಧನೆ, ವಿಪುಲ ಪ್ರಕಟಣೆ, ವೈಜ್ಞಾನಿಕ ಸಂವಾದಗಳಿಗೆ ನೀಡಲಾದ ಮಹತ್ತ್ವದ ಕೊಡುಗೆಗಳು, ನೋವಿನ ನಿಭಾವಣೆ ಮತ್ತು ಕಾಯಿಲೆಯ ಸ್ಥಿತಿಗನುಗುಣವಾಗಿ ಅಂಗಾಂಶ ಚಿಕಿತ್ಸೆಗೆ ಸಂಬಂಧಿಸಿದ ಫೊಟೊಮಾಡ್ಯುಲೇಶನ್ ಥೆರಪಿಯಲ್ಲಿ ವಿಶೇಷ ಸುಧಾರಣೆಯನ್ನು ದಾಖಲಿಸಿವೆ.

ಭಾರತವು ಆರೋಗ್ಯ ಪಾಲನೆ ಮತ್ತು ಸಂಶೋಧನೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದು ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಆಗಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಸಂಸ್ಥೆಯು ಶಿಕ್ಷಣ ಮತ್ತು ಸಂಶೋಧನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. 2021-24 ಸಾಲಿನ ಡಬ್ಲ್ಯುಎಎಲ್ಟಿಯ ಅಧ್ಯಕ್ಷರಾಗಿರುವ ಪಿಆರ್. ಆರ್ಜೆ. ಬೆನ್ಸಾಡೌನ್ ಅವರು ಮಾಹೆಯ ಪಾದಚಿಕಿತ್ಸೆ ಹಾಗೂ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನ ಕೇಂದ್ರ [ಪೋಡಿಯಾಟ್ರಿ ಮತ್ತು ಡಯಬಿಟಿಕ್ ಫೂಟ್ ಕೇರ್ ಸೆಂಟರ್] ವನ್ನು ಶ್ರೇಷ್ಠ ಫೊಟೊಮಾಡ್ಯುಲೇಶನ್ ಥೆರಪಿಯ ಕೇಂದ್ರವಾಗಿ ಅನುಮೋದಿಸಿದ್ದಾರೆ ಮತ್ತು ಡಾ. ಜಿ. ಅರುಣ್ ಮಯ್ಯ ಅವರನ್ನು ವಿಶೇಷ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಸಹ ಕುಲಾಧಿಪತಿ ಡಾ. ಎಚ್. ಎಸ್, ಬಲ್ಲಾಳ್ ಅವರು, ಜಾಗತಿಕ ಮನ್ನಣೆ ಪಡೆದಿರುವ ಪಾದಚಿಕಿತ್ಸೆ ಹಾಗೂ ಡಯಬಿಟಿಕ್ ಪಾದ ಆರೈಕೆ ಮತ್ತು ಸಂಶೋಧನ ಕೇಂದ್ರವನ್ನು ಅಭಿನಂದಿಸುತ್ತ, “ಪ್ರಸ್ತುತ ಲಭಿಸಿರುವ ಜಾಗತಿಕ ಮಾನ್ಯತೆಯು ಸಾಮಾಜಿಕ ಸ್ವಾಸ್ಥ್ಯಪಾಲನೆಯಲ್ಲಿ ಸಂಸ್ಥೆಯ ಬದ್ಧತೆ ಮತ್ತು ಪ್ರಾಧ್ಯಾಪಕರ ನಿರಂತರ ಸಂಶೋಧನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ” ಎಂದರು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್ ಅವರು, ಡಾ. ಜಿ. ಅರುಣ್ ಮಯ್ಯ ಅವರನ್ನು ಅಭಿನಂದಿಸುತ್ತ, ‘”ಕರ್ತವ್ಯದ ಬದ್ಧತೆಯಿಂದಾಗಿ ಜಾಗತಿಕ ಮಾನ್ಯತೆಯನ್ನು ಪಡೆಯಲು ಸಾಧ್ಯವಾಗಿದೆ.

ಮಾಹೆ ಘಟಕಕ್ಕೆ ದೊರೆತಿರುವ ಜಾಗತಿಕ ಮಾನ್ಯತೆಯು ಮುಂದೆ ಸಮಾಜದ ಆರೋಗ್ಯಪಾಲನೆಯ ಕಾರ್ಯದಲ್ಲಿ ಹೆಚ್ಚಿನ ಕೆಲಸವನ್ನು ಮಾಡಲು ದೊರೆತ ಪ್ರೋತ್ಸಾಹವಾಗಿದೆ” ಎಂದರು.

 

ಮಾಹೆಯಲ್ಲಿರುವ ಪಾದಚಿಕಿತ್ಸೆ ಮತ್ತು ಮಧುಮೇಹ ಪಾದ ಆರೈಕೆ ಮತ್ತು ಸಂಶೋಧನ ಕೇಂದ್ರವು ಫೊಟೊಮಾಡ್ಯುಲೇಶನ್ ಥೆರಪಿ [ಪಿಬಿಎಂ] ಕ್ಷೇತ್ರದ ಉತ್ಕೃಷ್ಟ ಸಂಸ್ಥೆಯಾಗಿ ಅಂತಾರಾಷ್ಟ್ರೀಯವಾಗಿ ಮಾನ್ಯವಾಗಿರುವುದು ಇದರ ಸಾಧನೆಗೆ ಪ್ರಮುಖ ಮೈಲಿಗಲ್ಲಾಗಿದೆ. ಭಾರತದಲ್ಲಿ ಆರೋಗ್ಯಪಾಲನೆ ಮತ್ತು ಸಂಶೋಧನ ಕ್ಷೇತ್ರಕ್ಕೆ ವಿಶೇಷ ಆದ್ಯತೆ ಇರುವುದನ್ನು ಇದು ದೃಢಪಡಿಸುತ್ತದೆ.

Tags: #ಮಣಿಪಾಲ#ಮಾಹೆ#ಕೆಎಂಸಿ#ಅಕಾಡೆಮಿ#ನ್ಯೂಸ್
Previous Post

ನ.7 ಹಾಗೂ 8ರಂದು ಬಿಸಿಯೂಟ ಬಂದ್ : ಪ್ರತಿಭಟನೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅಕ್ಷರ ದಾಸೋಹ ನೌಕರರ ಸಂಘ ಮನವಿ.!!

Next Post

ಮಹಿಳೆಯ ರಕ್ಷಣೆ: ಸೂಚನೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಹಿಳೆಯ ರಕ್ಷಣೆ: ಸೂಚನೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026
ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

13/08/2026
ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

13/08/2026
ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

13/08/2026

Recent News

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026
ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

13/08/2026
ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

13/08/2026
ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

13/08/2026