Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಣಿಪಾಲ : ಕೆಎಂಸಿಯ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕೇಂದ್ರಕ್ಕೆ ಜರ್ಮನಿಯ ಮರ್ಕ್‌ ಫೌಂಡೇಶನ್‌ನಿಂದ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಮಾನ್ಯತೆ..!!

Dhrishya News by Dhrishya News
20/10/2023
in ಕರಾವಳಿ, ಮುಖಪುಟ, ಸುದ್ದಿಗಳು
0
0
SHARES
25
VIEWS
Share on FacebookShare on Twitter

ಮಣಿಪಾಲ, ಅಕ್ಟೋಬರ್‌ 19, 2023 – ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸುಧಾರಿತ ಜಾಗತಿಕ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಶ್ರಮಿಸುತ್ತಿರುವ ಪ್ರತಿಷ್ಠಿತ ಮರ್ಕ್‌ ಫೌಂಡೇಶನ್‌ ಸಂಸ್ಥೆಯು ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕೇಂದ್ರ [ಕ್ಲಿನಿಕಲ್‌ ಎಂಬ್ರಿಯಾಲಜಿ ಸೆಂಟರ್‌] ಕ್ಕೆ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಮಾನ್ಯತೆ ನೀಡಿದೆ.

 

ಸೌಲಭ್ಯವಂಚಿತ ಸಮುದಾಯಗಳಿಗೆ ಆರೋಗ್ಯಸೇವೆಯನ್ನು ಹೆಚ್ಚಿಸುವುದರಲ್ಲಿ ಮರ್ಕ್‌ ಫೌಂಡೇಶನ್‌ ಬದ್ಧವಾಗಿದೆ. ‘ಮರ್ಕ್‌-ಮಾತೆಗಿಂತ ಮಿಗಿಲು’  ಎಂಬ ಪ್ರಮುಖ ಆರಂಭಿಕ ಧ್ಯೇಯದೊಂದಿಗೆ ಅನೇಕ ಆಫ್ರಿಕನ್‌ ಸಂಸ್ಥೆಗಳೊಂದಿಗೆ, ಒಡಂಬಡಿಕೆಯನ್ನು ಮಾಡಿಕೊಂಡಿದೆ. ಸಾಕಷ್ಟು ಸೌಲಭ್ಯಗಳಿಲ್ಲದ ಪ್ರದೇಶಗಳಲ್ಲಿ ಸುಧಾರಿತ ಫಲವಂತಿಕೆಯ ಆರೈಕೆಯ ಅಗತ್ಯದ ಕಡೆ ಇದು ಗಮನಹರಿಸುತ್ತಿದೆ.

ಸಾಮರ್ಥ್ಯ-ನಿರ್ಮಾಣದ ಯೋಜನೆಗಳಲ್ಲಿ ಮಣಿಪಾಲ ಕೆಎಂಸಿಯಲ್ಲಿರುವ ಶುಶ್ರೂಷಾ ಭ್ರೂಣಶಾಸ್ತ್ರ [ಕ್ಲಿನಿಕಲ್‌ ಎಂಬ್ರಿಯಾಲಜಿ] ಕೇಂದ್ರವು ಪ್ರಮುಖ ಜಾಗತಿಕ ಮಟ್ಟದ ಸಹಭಾಗಿಯಾಗಿದೆ. ಮರ್ಕ್‌ ಪೌಂಡೇಶನ್‌ ಮತ್ತು ಮಣಿಪಾಲದ ಕೆಎಂಸಿ ಸಂಯುಕ್ತ ಸಹಕಾರದಿಂದಾಗಿ 27 ದೇಶಗಳಲ್ಲಿನ ಸುಮಾರು ನೂರು ವೈದ್ಯರು ಮತ್ತು ವಿಜ್ಞಾನಿಗಳು ಉನ್ನತ ಶ್ರೇಣಿಯ ಭ್ರೂಣಶಾಸ್ತ್ರ ತರಬೇತಿಯನ್ನು ಮಣಿಪಾಲದಲ್ಲಿ ಪಡೆದಿದ್ದಾರೆ, ಈ ತರಬೇತಿ ಪಡೆದ ವೃತ್ತಿಪರರು ಅವರವರ ದೇಶಗಳಲ್ಲಿ ಬಂಜೆತನದ ಕಾಳಜಿಯ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಈ ಮಾನ್ಯತೆಯನ್ನು ಮುಂಬೈಯಲ್ಲಿ ಅಕ್ಟೋಬರ್‌ 18, 2023ರಂದು ಜರಗಿದ ಮರ್ಕ್‌-ಆಫ್ರಿಕಾ-ಏಷ್ಯಾ ಪ್ರಸಿದ್ಧ ಸಮಾವೇಶದಲ್ಲಿ ಪ್ರದಾನ ಮಾಡಲಾಯಿತು. ಮರ್ಕ್‌ ಫೌಂಡೇಶನ್‌ನ ಸಿಇಓ ಸೆನೆಟರ್‌ ಡಾ. ರಾಶ ಕಲೇಜ್‌, ಇ-ಮರ್ಕ್‌-ಕೆಜಿಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಪ್ರೊ. ಡಾ. ಫ್ರ್ಯಾಂಕ್‌ ಸ್ಟ್ಯಾಂಜನ್‌ಬರ್ಗ್‌-ಹ್ಯಾವರ್‌ಕ್ಯಾಂಪ್‌, 14 ಆಫ್ರಿಕನ್‌ ದೇಶಗಳ ಪ್ರಥಮ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಾಹೆಯ ಪ್ರೊ ವೆ,ಸ್‌ ಛಾನ್ಸಲರ್‌ ಡಾ. ಶರತ್‌ ರಾವ್‌, ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಭ್ರೂಣಶಾಸ್ತ್ರ ಕಾರ್ಯಸೂಚಿಯ ಮುಖ್ಯಸ್ಥ ಡಾ. ಸತೀಶ್‌ ಅಡಿಗ ಈ ಪುರಸ್ಕಾರವನ್ನು ಸ್ವೀಕರಿಸಿದರು.

ಈ ಮೂಲಕ ಏಷ್ಯಾದ ಪ್ರಮುಖ ಐವಿಎಫ್‌ ತರಬೇತಿ ಕೇಂದ್ರವಾಗಿರುವ ಮಣಿಪಾಲ ಕೆಎಂಸಿಯ ಕ್ಲಿನಿಕಲ್‌ ಎಂಬ್ರಿಯಾಲಜಿ ಕೇಂದ್ರವು ದಾಖಲೆಯನ್ನು ಮಾಡಿದೆ. ಈ ಕೇಂದ್ರವು ಜಗತ್ತಿನಲ್ಲಿ ಬಂಜೆತನದಲ್ಲಿ ಬಳಲುತ್ತಿರುವ ದಂಪತಿಗಳಿಗೆ ನೆರವಾಗುವುದಕ್ಕಾಗಿ ನೂರಾರು ವೈದ್ಯರು ಮತ್ತುವಿಜ್ಞಾನಿಗಳನ್ನು ಸಜ್ಜುಗೊಳಿಸಿದೆ.

 

 

Previous Post

ಇದೀಗ ಉಡುಪಿಯಲ್ಲಿ ಭವ್ಯವಾದ “ರಾಜಸ್ಥಾನಿ ಬೃಹತ್ ಆರ್ಟ್ ಮತ್ತು ಕ್ರಾಫ್ಟ್ ಪ್ರದರ್ಶನ ಹಾಗೂ ಮಾರಾಟ ಮೇಳ”…!!

Next Post

ನಾಡಿನ ಹಿತರಕ್ಷಣೆಗಾಗಿ ಹೋರಾಡಿದ್ದ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಸಿಎಂ ಸಿದ್ದರಾಮಯ್ಯ ಕ್ರಮ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ನಾಡಿನ ಹಿತರಕ್ಷಣೆಗಾಗಿ ಹೋರಾಡಿದ್ದ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಸಿಎಂ ಸಿದ್ದರಾಮಯ್ಯ ಕ್ರಮ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮೇಕ್-ಎ-ವಿಶ್ ಫೌಂಡೇಶನ್–ಕಸ್ತೂರ್ಬಾ ಆಸ್ಪತ್ರೆ ಸಹಯೋಗ: ಕ್ಯಾನ್ಸರ್ ಪೀಡಿತ ಮಕ್ಕಳ ಆಸೆ ಈಡೇರಿಸಿ ನಗು ಮೂಡಿಸಿದ ಕಾರ್ಯಕ್ರಮ..!!

ಮೇಕ್-ಎ-ವಿಶ್ ಫೌಂಡೇಶನ್–ಕಸ್ತೂರ್ಬಾ ಆಸ್ಪತ್ರೆ ಸಹಯೋಗ: ಕ್ಯಾನ್ಸರ್ ಪೀಡಿತ ಮಕ್ಕಳ ಆಸೆ ಈಡೇರಿಸಿ ನಗು ಮೂಡಿಸಿದ ಕಾರ್ಯಕ್ರಮ..!!

17/03/2026
ಸಮಗ್ರ ಶಿಕ್ಷಣ ಸಿಬ್ಬಂದಿಗೆ ಸಿಹಿ ಸುದ್ದಿ: ₹14.21 ಕೋಟಿ ಅನುದಾನ ಬಿಡುಗಡೆ…!

ಸಮಗ್ರ ಶಿಕ್ಷಣ ಸಿಬ್ಬಂದಿಗೆ ಸಿಹಿ ಸುದ್ದಿ: ₹14.21 ಕೋಟಿ ಅನುದಾನ ಬಿಡುಗಡೆ…!

17/03/2026
ಮೊಟ್ಟೆ ಮಾರಾಟಕ್ಕೆ ಹೊಸ ನಿಯಮ: ಏಪ್ರಿಲ್ 1ರಿಂದ ದಿನಾಂಕ ಮುದ್ರೆ ಕಡ್ಡಾಯ…!

ಮೊಟ್ಟೆ ಮಾರಾಟಕ್ಕೆ ಹೊಸ ನಿಯಮ: ಏಪ್ರಿಲ್ 1ರಿಂದ ದಿನಾಂಕ ಮುದ್ರೆ ಕಡ್ಡಾಯ…!

17/03/2026
ಎಲ್‌ಪಿಜಿ ಕೊರತೆಯ ನಡುವೆ ಬೆಂಗಳೂರಿನ ಯುವಕನ ‘ರಾಕೆಟ್ ಸ್ಟವ್’ ಸಂಚಲನ…!

ಎಲ್‌ಪಿಜಿ ಕೊರತೆಯ ನಡುವೆ ಬೆಂಗಳೂರಿನ ಯುವಕನ ‘ರಾಕೆಟ್ ಸ್ಟವ್’ ಸಂಚಲನ…!

17/03/2026

Recent News

ಮೇಕ್-ಎ-ವಿಶ್ ಫೌಂಡೇಶನ್–ಕಸ್ತೂರ್ಬಾ ಆಸ್ಪತ್ರೆ ಸಹಯೋಗ: ಕ್ಯಾನ್ಸರ್ ಪೀಡಿತ ಮಕ್ಕಳ ಆಸೆ ಈಡೇರಿಸಿ ನಗು ಮೂಡಿಸಿದ ಕಾರ್ಯಕ್ರಮ..!!

ಮೇಕ್-ಎ-ವಿಶ್ ಫೌಂಡೇಶನ್–ಕಸ್ತೂರ್ಬಾ ಆಸ್ಪತ್ರೆ ಸಹಯೋಗ: ಕ್ಯಾನ್ಸರ್ ಪೀಡಿತ ಮಕ್ಕಳ ಆಸೆ ಈಡೇರಿಸಿ ನಗು ಮೂಡಿಸಿದ ಕಾರ್ಯಕ್ರಮ..!!

17/03/2026
ಸಮಗ್ರ ಶಿಕ್ಷಣ ಸಿಬ್ಬಂದಿಗೆ ಸಿಹಿ ಸುದ್ದಿ: ₹14.21 ಕೋಟಿ ಅನುದಾನ ಬಿಡುಗಡೆ…!

ಸಮಗ್ರ ಶಿಕ್ಷಣ ಸಿಬ್ಬಂದಿಗೆ ಸಿಹಿ ಸುದ್ದಿ: ₹14.21 ಕೋಟಿ ಅನುದಾನ ಬಿಡುಗಡೆ…!

17/03/2026
ಮೊಟ್ಟೆ ಮಾರಾಟಕ್ಕೆ ಹೊಸ ನಿಯಮ: ಏಪ್ರಿಲ್ 1ರಿಂದ ದಿನಾಂಕ ಮುದ್ರೆ ಕಡ್ಡಾಯ…!

ಮೊಟ್ಟೆ ಮಾರಾಟಕ್ಕೆ ಹೊಸ ನಿಯಮ: ಏಪ್ರಿಲ್ 1ರಿಂದ ದಿನಾಂಕ ಮುದ್ರೆ ಕಡ್ಡಾಯ…!

17/03/2026
ಎಲ್‌ಪಿಜಿ ಕೊರತೆಯ ನಡುವೆ ಬೆಂಗಳೂರಿನ ಯುವಕನ ‘ರಾಕೆಟ್ ಸ್ಟವ್’ ಸಂಚಲನ…!

ಎಲ್‌ಪಿಜಿ ಕೊರತೆಯ ನಡುವೆ ಬೆಂಗಳೂರಿನ ಯುವಕನ ‘ರಾಕೆಟ್ ಸ್ಟವ್’ ಸಂಚಲನ…!

17/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved