ಉಡುಪಿ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ AURA Creations Event & Promotion, Udupi ವತಿಯಿಂದ Dhrishya Media ಸಹಯೋಗದಲ್ಲಿ 0 ಯಿಂದ 4 ವರ್ಷ ಮತ್ತು 4ರಿಂದ 8 ವರ್ಷದೊಳಗಿನ ಪುಟ್ಟ ಮಕ್ಕಳಿಗಾಗಿ ಆಯೋಜಿಸಲಾಗಿದ್ದ “ಮುದ್ದು ಕೃಷ್ಣ ಸ್ಪರ್ಧೆ–2026” ಆಗಸ್ಟ್ 29 ರಂದು ಬನ್ನಂಜೆ ನಾರಾಯಣ ಗುರು ಬಿಲ್ಲವರ ಸೇವಾ ಸಂಘದಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ ಪುಟ್ಟ ಮಕ್ಕಳು ಕೃಷ್ಣನ ವಿವಿಧ ವೇಷಭೂಷಣಗಳಲ್ಲಿ ಮಿಂಚಿ, ಶ್ರೀಕೃಷ್ಣನ ಬಾಲಲೀಲೆಗಳನ್ನು ಪ್ರತಿಬಿಂಬಿಸುವಂತೆ ಸುಂದರವಾಗಿ ಸಿಂಗಾರಗೊಂಡು ಉತ್ಸಾಹದಿಂದ ಭಾಗವಹಿಸಿದರು.
ಮಕ್ಕಳ ಆಕರ್ಷಕ ವೇಷಭೂಷಣ, ಅಭಿನಯ ಹಾಗೂ ಪ್ರತಿಭೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳ ಜೊತೆಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿ ಕೃಷ್ಣರಿಗೆ ಆಯೋಜಕರ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪೋಷಕರು, ತೀರ್ಪುಗಾರರು, ಪ್ರಾಯೋಜಕರು ಹಾಗೂ ಎಲ್ಲಾ ಸಹಭಾಗಿಗಳಿಗೆ AURA Creations Event & Promotion ಮತ್ತು Dhrishya Media ವತಿಯಿಂದ ಧನ್ಯವಾದಗಳು
🎥 ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಿ
“ಮುದ್ದು ಕೃಷ್ಣ ಸ್ಪರ್ಧೆ–2026” ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇
👉 https://www.facebook.com/share/v/19Lf6xTcEU/




