Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಮಾಹೆ ಮತ್ತು ಸಿಡ್ನಿ ವಿ. ವಿ. ಒಡಂಬಡಿಕೆ: ಸಂಶೋಧನೆ, ನಾವೀನ್ಯ ಮತ್ತು ಜಾಗತಿಕ ಶೈಕ್ಷಣಿಕ ಸಹಭಾಗಿತ್ವಕ್ಕೆ ಉತ್ತೇಜನ

Dhrishya News by Dhrishya News
04/09/2026
in मौसम
0
ಮಾಹೆ ಮತ್ತು ಸಿಡ್ನಿ ವಿ. ವಿ. ಒಡಂಬಡಿಕೆ: ಸಂಶೋಧನೆ, ನಾವೀನ್ಯ ಮತ್ತು ಜಾಗತಿಕ ಶೈಕ್ಷಣಿಕ ಸಹಭಾಗಿತ್ವಕ್ಕೆ ಉತ್ತೇಜನ

Exchange of signed MoU documents between Dr. Sharath K. Rao, Vice Chancellor, MAHE, and Professor Mike Ryan, Deputy Vice-Chancellor (Research), University of Sydney, in Mumbai on September 2, 2026 in presence of His Excellency Philip Green OAM, High Commissioner of Australia to India (extreme right) Dr Anup Naha, Director, International Collaboration, MAHE, Dr Jocelyne Basseal, Director -Global Research Engagement, Paul Murphy, Australian Consul General in Mumbai and Ms Kirsten Andrews, Vice-President (External Engagement) are in the picture.

0
SHARES
4
VIEWS
Share on FacebookShare on Twitter

ಮಣಿಪಾಲ, ಸೆಪ್ಟೆಂಬರ್ 04, 2026: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ ಮತ್ತು ಸಿಡ್ನಿ ವಿಶ್ವವಿದ್ಯಾಲಯ (ಯುಎಸ್‌ವೈಡಿ) ಶಿಕ್ಷಣ, ಸಂಶೋಧನೆ, ನಾವೀನ್ಯ ಹಾಗೂ ಶೈಕ್ಷಣಿಕ ವಿನಿಮಯ ಕ್ಷೇತ್ರಗಳಲ್ಲಿ ತಮ್ಮ ಸಹಭಾಗಿತ್ವವನ್ನು ಮತ್ತಷ್ಟು ದೃಢಪಡಿಸುವ ಆಶಯದಲ್ಲಿ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ.

ಮುಂಬೈಯ ಆಸ್ಟ್ರೇಲಿಯಾ ಕಾನ್ಸುಲೇಟ್-ಜನರಲ್ ಅವರ ನಿವಾಸದಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಮಾಹೆಯ ಉಪಕುಲಪತಿ ಡಾ. ಶರತ್ ಕೆ. ರಾವ್ ಮತ್ತು ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಉಪಕುಲಪತಿ ಪ್ರೊ. ಮೈಕ್ ರಯಾನ್ ಅವರು ಸೆಪ್ಟೆಂಬರ್ 2, 2026ರಂದು ಆಸ್ಟ್ರೇಲಿಯಾ ಹೈಕಮಿಷನರ್ ಫಿಲಿಪ್ ಒಎಎಂ ಹಾಗೂ ಮುಂಬೈನಲ್ಲಿರುವ ಆಸ್ಟ್ರೇಲಿಯನ್ ಕಾನ್ಸಲ್ ಜನರಲ್ ಪಾಲ್ ಮರ್ಫಿ ಅವರ ಸಮ್ಮುಖದಲ್ಲಿ ಸಹಿ ಹಾಕಿದರು.

ಈ ಒಪ್ಪಂದವು ಮಾಹೆ ಮತ್ತು ಸಿಡ್ನಿ ವಿಶ್ವವಿದ್ಯಾಲಯ ಕೆಳಗಿನ ಐದು ಪ್ರಮುಖ ಕ್ಷೇತ್ರಗಳಲ್ಲಿ ಸಹಭಾಗಿತ್ತ್ವನ್ನು ಸಾಧ್ಯವಾಗಿಸುತ್ತದೆ:
• ಉನ್ನತ ಸಂಶೋಧನ ಕಾರ್ಯಕ್ರಮ
• ಜಂಟಿ ಸಂಶೋಧನ ಅನುದಾನ ಮತ್ತು ಸಂಶೋಧನ ಶಿಕ್ಷಣ
• ವಿದ್ಯಾರ್ಥಿಗಳು ಮತ್ತು ಬೋಧಕವರ್ಗದ ಅಂತಾರಾಷ್ಟ್ರೀಯ ವಿನಿಮಯವನ್ನು ವಿಸ್ತರಣೆ
• ನಾವೀನ್ಯ ಮತ್ತು ಜ್ಞಾನದ ಪ್ರಾಯೋಗಿಕ ಅನ್ವಯ
• ಜಂಟಿ ನಿರ್ವಹಣೆ ಮತ್ತು ವ್ಯವಸ್ಥಿತ ಫಲಿತಾಂಶ
ಭಾರತ ಮತ್ತು ಆಸ್ಟ್ರೇಲಿಯಾದ ವಿದ್ಯಾರ್ಥಿಗಳು, ಸಂಶೋಧಕರು, ಆರೋಗ್ಯ ವೃತ್ತಿಪರರು, ಉದ್ಯಮಿಗಳು ಹಾಗೂ ಕೈಗಾರಿಕಾ ಪಾಲುದಾರರಿಗೆ ಪರಸ್ಪರ ಸಂವಾದ ನಡೆಸಲು ಈ ಒಡಂಬಡಿಕೆಯಿಂದ ಸಾಧ್ಯವಾಗಿದೆ. ಅಲ್ಲದೆ, ಇದು, ಸಂಶೋಧನ ಫಲಿತಾಂಶಗಳನ್ನು ಸಮಾಜಕ್ಕೆ ಉಪಯುಕ್ತವಾಗುವಂತೆ ಪರಿವರ್ತಿಸಲು ಇದು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.

ಭಾರತದಲ್ಲಿನ ಆಸ್ಟ್ರೇಲಿಯಾ ಹೈಕಮಿಷನರ್, ಗೌರವಾನ್ವಿತರಾದ ಶ್ರೀ ಫಿಲಿಪ್ ಗ್ರೀನ್ ಓಎಎಂ ಅವರು ಮಾತನಾಡಿ, “ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧವು ದೃಢವಾಗಿದೆ. ಶಿಕ್ಷಣ, ಸಂಶೋಧನೆ, ನಾವೀನ್ಯ ಮತ್ತು ಪರಸ್ಪರ ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ನಿರಂತರವಾಗಿ ವೃದ್ಧಿಸಲು ಇದು ಪೂರಕವಾಗಿದೆ. ಈ ಸಹಯೋಗವು ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಅವಕಾಶವನ್ನು ಒದಗಿಸುತ್ತದೆ. ವಿಶೇಷವಾಗಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಎರಡೂ ದೇಶಗಳ ವಿದ್ಯಾರ್ಥಿಗಳು, ಬೋಧಕವರ್ಗ ಹಾಗೂ ಸಂಶೋಧಕರಿಗೆ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸುವಲ್ಲಿ ಇದು ಪೂರಕವಾಗಿಲಿದೆ’ ಎಂದು ಹೇಳಿದರು.

ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, “ ಮಾಹೆ ಮತ್ತು ಸ್ಡ್ನಿ ವಿಶ್ವವಿದ್ಯಾನಿಲಯದ ನಡುವಿನ ಒಪ್ಪಂದವು ಸಂಶೋಧನ ಮತ್ತು ಶೈಕ್ಕ್ಷಣಿಕ ಕ್ಷೇತ್ರದ ಮಹತ್ವದ ಹೆಜ್ಜೆಯಾಗಿದೆ. ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಬೋಧಕವರ್ಗಕ್ಕೆ ಪರಿವರ್ತನಾತ್ಮಕ ಅವಕಾಶಗಳನ್ನು ಸೃಷ್ಟಿಸಬಹುದಾಗಿದೆ. ಜಾಗತಿಕ ಮಟ್ಟದ ಈ ಮಹತ್ತ್ವದ ಒಪ್ಪಂದವನ್ನು ಸಾಧ್ಯವಾಗಿಸಿದ ಬಗ್ಗೆ ಮಾಹೆ ಅಭಿಮಾನ ಪಡುತ್ತಿದೆ’ ಎಂದರು.
ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧನ ವಿಭಾಗದ ಉಪಕುಲಪತಿ ಪ್ರೊ. ಮೈಕ್ ರಯಾನ್ ಅವರು ಮಾತನಾಡಿ, “ಸಿಡ್ನಿ ವಿಶ್ವವಿದ್ಯಾಲಯ ಮತ್ತು ಮಾಹೆಯ ದೀರ್ಘಕಾಲದ ಸಂಬಂಧಕ್ಕೆ ಈ ಒಡಂಬಡಿಕೆ ಪೂರಕವಾಗಿದೆ. ಈ ಹೊಸ ಒಪ್ಪಂದವು ಜಂಟಿ ಸಂಶೋಧನೆ, ಡಾಕ್ಟರಲ್ ಶಿಕ್ಷಣ, ವಿದ್ಯಾರ್ಥಿ–ಬೋಧಕವರ್ಗದ ವಿನಿಮಯ ಹಾಗೂ ನಾವೀನ್ಯದ ಮೂಲಕ ಸಹಭಾಗಿತ್ವ ವಿಸ್ತರಣೆ ಇವುಗಳನ್ನು ಬೆಂಬಲಿಸುತ್ತದೆ. ಅಂತಿಮವಾಗಿ ಸಮಾಜಕ್ಕೆ ಸದುಪಯೋಗವಾಗುವ ಫಲಿತಾಂಶವನ್ನು ಕಂಡುಕೊಳ್ಳುವುದು ನಮ್ಮ ಆಶಯವಾಗಿದೆ” ಎಂದು ಹೇಳಿದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಶೈಕ್ಷಣಿಕ ಸಂಬಂಧಗಳನ್ನು ಉತ್ತೇಜಿಸುವುದು, ಜಾಗತಿಕ ಸಂಶೋಧನಾ ಸಹಯೋಗವನ್ನು ಬಲಪಡಿಸುವುದು ಹಾಗೂ ನವೀನತೆ ಆಧಾರಿತ ಸಹಭಾಗಿತ್ವದ ಅವಕಾಶಗಳನ್ನು ಸೃಷ್ಟಿಸುವ ದಿಸೆಯಲ್ಲಿ ಈ ಪಾಲುದಾರಿಕೆ ಒಂದು ಮಹತ್ವದ ಮೈಲುಗಲ್ಲುಗಳಾಗಲಿವೆ.

 

Previous Post

ಉಡುಪಿಯಲ್ಲಿ ಕೃಷ್ಣಾಷ್ಟಮಿ–ವಿಟ್ಲಪಿಂಡಿ ಸಂಭ್ರಮ: ಅಷ್ಟಮಿಗೆ ಕ್ಷಣಗಣನೆ, ವಿಟ್ಲಪಿಂಡಿಗೆ ಭರದ ಸಿದ್ಧತೆ..!!

Next Post

ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ಪ್ರಯುಕ್ತ ತರಕಾರಿ ಮುಹೂರ್ತ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ಪ್ರಯುಕ್ತ ತರಕಾರಿ ಮುಹೂರ್ತ

ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ಪ್ರಯುಕ್ತ ತರಕಾರಿ ಮುಹೂರ್ತ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ಪ್ರಯುಕ್ತ ತರಕಾರಿ ಮುಹೂರ್ತ

ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ಪ್ರಯುಕ್ತ ತರಕಾರಿ ಮುಹೂರ್ತ

05/09/2026
ಮಾಹೆ ಮತ್ತು ಸಿಡ್ನಿ ವಿ. ವಿ. ಒಡಂಬಡಿಕೆ: ಸಂಶೋಧನೆ, ನಾವೀನ್ಯ ಮತ್ತು ಜಾಗತಿಕ ಶೈಕ್ಷಣಿಕ ಸಹಭಾಗಿತ್ವಕ್ಕೆ ಉತ್ತೇಜನ

ಮಾಹೆ ಮತ್ತು ಸಿಡ್ನಿ ವಿ. ವಿ. ಒಡಂಬಡಿಕೆ: ಸಂಶೋಧನೆ, ನಾವೀನ್ಯ ಮತ್ತು ಜಾಗತಿಕ ಶೈಕ್ಷಣಿಕ ಸಹಭಾಗಿತ್ವಕ್ಕೆ ಉತ್ತೇಜನ

04/09/2026
ಉಡುಪಿಯಲ್ಲಿ ಕೃಷ್ಣಾಷ್ಟಮಿ–ವಿಟ್ಲಪಿಂಡಿ ಸಂಭ್ರಮ: ಅಷ್ಟಮಿಗೆ ಕ್ಷಣಗಣನೆ, ವಿಟ್ಲಪಿಂಡಿಗೆ ಭರದ ಸಿದ್ಧತೆ..!!

ಉಡುಪಿಯಲ್ಲಿ ಕೃಷ್ಣಾಷ್ಟಮಿ–ವಿಟ್ಲಪಿಂಡಿ ಸಂಭ್ರಮ: ಅಷ್ಟಮಿಗೆ ಕ್ಷಣಗಣನೆ, ವಿಟ್ಲಪಿಂಡಿಗೆ ಭರದ ಸಿದ್ಧತೆ..!!

04/09/2026
ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿಗಳ ಉತ್ತಮ ಸಾಧನೆ..!

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿಗಳ ಉತ್ತಮ ಸಾಧನೆ..!

04/09/2026

Recent News

ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ಪ್ರಯುಕ್ತ ತರಕಾರಿ ಮುಹೂರ್ತ

ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ಪ್ರಯುಕ್ತ ತರಕಾರಿ ಮುಹೂರ್ತ

05/09/2026
ಮಾಹೆ ಮತ್ತು ಸಿಡ್ನಿ ವಿ. ವಿ. ಒಡಂಬಡಿಕೆ: ಸಂಶೋಧನೆ, ನಾವೀನ್ಯ ಮತ್ತು ಜಾಗತಿಕ ಶೈಕ್ಷಣಿಕ ಸಹಭಾಗಿತ್ವಕ್ಕೆ ಉತ್ತೇಜನ

ಮಾಹೆ ಮತ್ತು ಸಿಡ್ನಿ ವಿ. ವಿ. ಒಡಂಬಡಿಕೆ: ಸಂಶೋಧನೆ, ನಾವೀನ್ಯ ಮತ್ತು ಜಾಗತಿಕ ಶೈಕ್ಷಣಿಕ ಸಹಭಾಗಿತ್ವಕ್ಕೆ ಉತ್ತೇಜನ

04/09/2026
ಉಡುಪಿಯಲ್ಲಿ ಕೃಷ್ಣಾಷ್ಟಮಿ–ವಿಟ್ಲಪಿಂಡಿ ಸಂಭ್ರಮ: ಅಷ್ಟಮಿಗೆ ಕ್ಷಣಗಣನೆ, ವಿಟ್ಲಪಿಂಡಿಗೆ ಭರದ ಸಿದ್ಧತೆ..!!

ಉಡುಪಿಯಲ್ಲಿ ಕೃಷ್ಣಾಷ್ಟಮಿ–ವಿಟ್ಲಪಿಂಡಿ ಸಂಭ್ರಮ: ಅಷ್ಟಮಿಗೆ ಕ್ಷಣಗಣನೆ, ವಿಟ್ಲಪಿಂಡಿಗೆ ಭರದ ಸಿದ್ಧತೆ..!!

04/09/2026
ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿಗಳ ಉತ್ತಮ ಸಾಧನೆ..!

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿಗಳ ಉತ್ತಮ ಸಾಧನೆ..!

04/09/2026