ಉಡುಪಿ: ರಂಜಿತ್ ನಾಯ್ಕ್ ಅವರ ಕಿಡ್ನಿ ಕಸಿ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ, ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಸುಷ್ಮಾ ಎಸ್. ಬಂಟ್ವಾಳ ಅವರು ಸಮಾಜಮುಖಿ ಸಂದೇಶ ಸಾರುವ ವಿಶಿಷ್ಟ ವೇಷದೊಂದಿಗೆ ಜನರ ಮುಂದೆ ಬರುತ್ತಿದ್ದಾರೆ.
ಕಳೆದ ಬಾರಿಯೂ ಜನ್ಮಾಷ್ಟಮಿ ಸಂದರ್ಭದಲ್ಲಿ ವಿಶಿಷ್ಟ ವೇಷದ ಮೂಲಕ ಸಮಾಜಮುಖಿ ಸಂದೇಶ ಸಾರಿದ್ದ ಸುಷ್ಮಾ ಎಸ್. ಬಂಟ್ವಾಳ ಅವರು, ಈ ಬಾರಿಯೂ ವಿಭಿನ್ನ ವೇಷದ ಮೂಲಕ ರಂಜಿತ್ ನಾಯ್ಕ್ ಅವರ ಚಿಕಿತ್ಸೆಗೆ ನೆರವು ಒದಗಿಸುವ ಸದುದ್ದೇಶದಿಂದ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ರಂಜಿತ್ ನಾಯ್ಕ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಕಿಡ್ನಿ ಕಸಿ ಮಾಡಿಸುವುದು ಅನಿವಾರ್ಯವಾಗಿದೆ. ರಂಜಿತ್ ಅವರ ತಂದೆಯೇ ಕಿಡ್ನಿ ದಾನ ಮಾಡಲು ಮುಂದಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಚಿಕಿತ್ಸೆಗೆ ಸಿದ್ಧತೆ ನಡೆಸಲಾಗಿದೆ. ಆದರೆ ಚಿಕಿತ್ಸೆಗೆ ಸುಮಾರು ₹25 ಲಕ್ಷ ವೆಚ್ಚವಾಗುವ ನಿರೀಕ್ಷೆಯಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಈ ಮೊತ್ತವನ್ನು ಭರಿಸುವುದು ಕಷ್ಟಕರವಾಗಿದೆ.
ಈ ಹಿನ್ನೆಲೆಯಲ್ಲಿ ‘Donating Hands’ ಮೂಲಕ ಸಹಾಯಕ್ಕಾಗಿ ಮನವಿ ಮಾಡಲಾಗಿದ್ದು, ಸಹೃದಯ ದಾನಿಗಳು ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡುವ ಮೂಲಕ ರಂಜಿತ್ ನಾಯಕ್ ಅವರ ಚಿಕಿತ್ಸೆಗೆ ನೆರವಾಗುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
ರಂಜಿತ್ ಅವರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಸುಷ್ಮಾ ಎಸ್. ಬಂಟ್ವಾಳ ಅವರು ಕೈಗೊಂಡಿರುವ ಈ ಸಮಾಜಮುಖಿ ಪ್ರಯತ್ನಕ್ಕೆ ಸಾರ್ವಜನಿಕರ ಸಹಕಾರ, ಪ್ರೋತ್ಸಾಹ ಹಾಗೂ ಆಶೀರ್ವಾದ ಅಗತ್ಯವಾಗಿದೆ. ಅವರ ಈ ವಿಶೇಷ ಪ್ರಯತ್ನಕ್ಕೆ ಕೈಜೋಡಿಸುವ ಮೂಲಕ ರಂಜಿತ್ ಅವರ ಚಿಕಿತ್ಸೆಗೆ ನೆರವಾಗೋಣ.
ನಿಮ್ಮ ಒಂದು ಸಣ್ಣ ಸಹಾಯವೂ ಒಂದು ಜೀವಕ್ಕೆ ದೊಡ್ಡ ಭರವಸೆಯಾಗಬಹುದು.
ಸಹಾಯಕ್ಕಾಗಿ ಸಂಪರ್ಕಿಸಿ 9743464176
ಬ್ಯಾಂಕ್ ವಿವರಗಳು:
ಹೆಸರು: Kalyani Naik
ಬ್ಯಾಂಕ್: State Bank of India
A/c No.: 45051437752
IFSC: SBIN0015473
UPI ID: mrs.kalyaninai4798k@sbi
ರಂಜಿತ್ ನಾಯ್ಕ್ ಅವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲು ನಿಮ್ಮ ಕೈಲಾದ ನೆರವು ನೀಡಿ, ಈ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿ.









