ಉಡುಪಿ, ಸೆ 2 : ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಾಲ್ಕು ಅನಾಥಾಶ್ರಮಗಳಿಗೆ ವಿಶು ಶೆಟ್ಟಿ ಅಂಬಲಪಾಡಿ ನೇತೃತ್ವದಲ್ಲಿ ಅನ್ನದಾಸೋಹಕ್ಕೆ ಅಕ್ಕಿ ನೀಡುವ ಕಾರ್ಯಕ್ರಮಕ್ಕೆ ಅಂಬಲಪಾಡಿ ದೇವಸ್ಥಾನದ ಮುಂಬಾಗದಲ್ಲಿ ಚಾಲನೆ ನೀಡಿದ, ಕೃಷ್ಣ ಅಂಬಲಪಾಡಿಯವರು ಆಡಂಬರ ರಹಿತ ಜನ ಸೇವೆಯೇ ಕೃಷ್ಣನ ನಿಜಾರ್ಥದಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯು ಅರ್ಥಪೂರ್ಣ ಎಂದು ನುಡಿದರು. ಶ್ರೀಮತಿ ಜಯಂತಿ ಅಂಬಲಪಾಡಿಯವರು ದೇವರ ಪ್ರಸಾದ ಹಚ್ಚಿ ಶುಭ ಹಾರೈಸಿದರು.
ಉಡುಪಿ ನಗರದಲ್ಲಿ ಅಸಾಯಕರಾಯಾಗಿ ನೊಂದು ಜೀವಿಸಲು ಅಸಾಧ್ಯವಾದ ನೂರಾರು ಜನರಿಗೆ ಉಡುಪಿ ಸುತ್ತಮುತ್ತಲಿನ ಆಶ್ರಮಗಳು ಆಶ್ರಯ ನೀಡಿದ್ದು ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಪ್ರಯುಕ್ತ, ಆಶ್ರಮಗಳಿಗೆ ಅಕ್ಕಿ ನೀಡಲು ವಿಶು ಶೆಟ್ಟಿ ಮುಂದಾದಾಗ ವಿಶು ಶೆಟ್ಟಿಯವರ , ಹಿತೈಷಿಗಳ ನೆರವಿನಿಂದ 3126 ಕೆಜಿ ಅಕ್ಕಿ ಸಂಗ್ರಹ ವಾಗಿದ್ದು, 1,500 ಕೆಜಿ ಹೊಸಬೆಳಕು ಆಶ್ರಮಕ್ಕೆ, 1,000 ಕೆಜಿ ಸ್ವರ್ಗ ಆಶ್ರಮಕ್ಕೆ, ಉಳಿದ ಅಕ್ಕಿಯನ್ನು, ಕಾರುಣ್ಯ, ಮತ್ತು, ಉಪ್ಪೂರಿನ ಸ್ಪಂದನ ಆಶ್ರಮಕ್ಕೆ, ಪಾಲು ಮಾಡಿ ನೀಡಲಾಯಿತು.
ಕಾರ್ಯಕ್ರಮಕ್ಕೆ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದರು.
ಸಮಾಜದ ಕಟ್ಟಕಡೆಯ ಅದಷ್ಟೋ ಜನ ಅಸಹಾಯಕರಾಗಿ
ಬೀದಿಪಾಲಾದಾಗ ರಕ್ಷಿಸುವ ಜವಾಬ್ದಾರಿ ಉಳ್ಳವರು ಅದೆಷ್ಟೋ ಪ್ರಕರಣಗಳಲ್ಲಿ ಸ್ಪಂದಿಸದೆ ಇದ್ದು ಆಶ್ರಮಗಳು ಆಶ್ರಯ ನೀಡಿ ಸಹಕರಿಸಿವೆ. ಇಂತಹ ಆಶ್ರಮಗಳಲ್ಲಿಯೂ ಪ್ರಮುಖ ಮೂಲಭೂತ ಕೊರತೆ ಗಳಿದ್ದು ಇಂತಹ ಆಶ್ರಮಗಳಿಗೆ ಸ್ಪಂದಿಸಿ ನೆರವಾಗುವುದು ಸಮಾಜದ ಕರ್ತವ್ಯ. ಆ ದೃಷ್ಟಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯನ್ನು ಅನ್ನ ದಾಸೋಹಕ್ಕೆ ಅಕ್ಕಿ ನೀಡುವ ಮುಖಾಂತರ ಅಳಿಲ ಸೇವೆಯನ್ನು ನೀಡಲಾಗಿದೆ ನಾನು ವೈಯಕ್ತಿಕವಾಗಿ 3 ಕ್ವಿಂಟಲ್ ಅಕ್ಕಿಯನ್ನು ನೀಡಲು ಮುಂದಾದಾಗ ಮಾಹಿತಿ ಪಡೆದ ನನ್ನ ಹಿತೈಷಿಗಳು ಕೈಜೋಡಿಸಿ 3126 ಕೆಜಿ ಅಕ್ಕಿ ಸಂಗ್ರಹವಾಯಿತು. ನೆರವಾದ ಎಲ್ಲರಿಗೂ ಕೃತಜ್ಞತೆಗಳು.







