ಸಿಹಿನೀರಿನ ಪರಿಸರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು AUMOVIO ಇಂಡಿಯಾ ಸಂಸ್ಥೆಯು ದುಂತೂರು ಕೆರೆಯ ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಈ ಯೋಜನೆಯು 8 ಹಳ್ಳಿಗಳ ಸುಮಾರು 1,700 ಕುಟುಂಬಗಳಿಗೆ ಮತ್ತು ಸ್ಥಳೀಯ ಜನರಿಗೆ ನೆರವಾಗಲಿದೆ.
ಕನಕಪುರ, ಆಗಸ್ಟ್ 29, 2026: ಜರ್ಮನಿಯ ಪ್ರಸಿದ್ಧ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಭಾರತೀಯ ವಿಭಾಗವಾದ AUMOVIO ಇಂಡಿಯಾ, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ದುಂತೂರು ಕೆರೆಯ ಪುನಶ್ಚೇತನ ಯೋಜನೆಯನ್ನು ಪ್ರಕಟಿಸಿದೆ. ಈ ಕಾರ್ಯಕ್ರಮವು ಸಂಸ್ಥೆಯ ಸಾಮಾಜಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಬದ್ಧತೆಯ ಭಾಗವಾಗಿದೆ.
ದುಂತೂರು ಗ್ರಾಮದಲ್ಲಿರುವ ಈ ಕೆರೆಯು 10 ಎಕರೆ 27 ಗುಂಟೆ ವಿಸ್ತೀರ್ಣವನ್ನು ಹೊಂದಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದೆ. ಪುನಶ್ಚೇತನ ಕಾಮಗಾರಿಗಳ ಮೂಲಕ ಕೆರೆಯ ಪರಿಸರವನ್ನು ಬಲಪಡಿಸುವುದು, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಸ್ಥಳೀಯ ಸಸ್ಯ ಹಾಗೂ ಪ್ರಾಣಿ ಸಂಕುಲದ ಪುನರುಜ್ಜೀವನಕ್ಕೆ ಬೆಂಬಲ ನೀಡುವುದು AUMOVIO ಇಂಡಿಯಾದ ಮುಖ್ಯ ಉದ್ದೇಶವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗುವುದರಿಂದ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಸುಧಾರಿಸಲಿದ್ದು, ಅನಿಶ್ಚಿತ ಮಳೆಯ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.
2011ರ ಜನಗಣತಿಯ ಪ್ರಕಾರ, ಕಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 8 ಗ್ರಾಮಗಳ 1700 ಕುಟುಂಬಗಳು ಹಾಗೂ 7000 ಕ್ಕೂ ಹೆಚ್ಚು ಜನರು ಈ ಯೋಜನೆಯಿಂದ ನೇರ ಪ್ರಯೋಜನ ಪಡೆಯಲಿದ್ದಾರೆ. ಪರಿಸರ ಪುನಶ್ಚೇತನದ ಜೊತೆಗೆ, ಜಲ ಸಂರಕ್ಷಣೆ, ಪರಿಸರ ಸುಸ್ಥಿರತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯ ಬಗ್ಗೆ ಸ್ಥಳೀಯ ಜನರಲ್ಲಿ, ಯುವಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈ ಯೋಜನೆ ನೆರವಾಗಲಿದೆ.
AUMOVIO ಇಂಡಿಯಾದ ಪ್ರೆಸಿಡೆಂಟ್ & ಸಿಇಒ ಪ್ರಶಾಂತ್ ದೊರೆಸ್ವಾಮಿ ಮಾತನಾಡಿ, “AUMOVIO ಇಂಡಿಯಾದಲ್ಲಿ, ಪ್ರಗತಿಯು ಕೇವಲ ವ್ಯವಹಾರಿಕ ಕಾರ್ಯಗಳಿಗೆ ಸೀಮಿತವಾಗಿರದೆ ನಮ್ಮ ಸುತ್ತಮುತ್ತಲಿನ ಸಮುದಾಯಗಳಿಗೆ ಅರ್ಥಪೂರ್ಣ ಮೌಲ್ಯವನ್ನು ತರಬೇಕು ಎಂದು ನಾವು ನಂಬುತ್ತೇವೆ.
ದುಂತೂರು ಕೆರೆಯ ಪುನಶ್ಚೇತನವು ಸ್ಥಳೀಯ ಜಲ ಭದ್ರತೆಯನ್ನು ಬಲಪಡಿಸಲು, ಜೈವಿಕ ವೈವಿಧ್ಯತೆಯನ್ನು ಬೆಂಬಲಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಸಮುದಾಯದ ಜವಾಬ್ದಾರಿಯನ್ನು ಬೆಳೆಸಲು ಪ್ರಮುಖ ಹೆಜ್ಜೆಯಾಗಿದೆ. ಈ ಸಿಹಿನೀರಿನ ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸುವ ಮೂಲಕ, ನಾವು ಕನಕಪುರ ಪ್ರದೇಶದಲ್ಲಿ ದೀರ್ಘಕಾಲೀನ ಪರಿಸರ ಮತ್ತು ಸಾಮಾಜಿಕ ಸುಸ್ಥಿರತೆಗೆ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ,” ಎಂದು ತಿಳಿಸಿದರು.







