ಬಾರಕೂರು : ನೇಶನಲ್ ಹೈಸ್ಕೂಲ್ ಮತ್ತು ಇಲ್ಲಿಯ ಇಂಟರಾಕ್ಟ್ ಕ್ಲಬ್ ಒಟ್ಟಾಗಿ ಸುಜ್ಞಾನ ಪಿ. ಯು.ಕಾಲೇಜ್ ಸಹಯೋಗದಲ್ಲಿ ಇದೇ ಆಗಸ್ಟ್ 29 30, (ಶನಿವಾರ ಮತ್ತು ಭಾನುವಾರ ಅರ್ಧ ದಿನ ) ಶಾಲಾ ಸಭಾಭವನದಲ್ಲಿ “ಪುಸ್ತಕ ಮೇಳ ” ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಮಕ್ಕಳ ಶೈಕ್ಷಣಿಕ ಮತ್ತು ಬೌದ್ಧಿಕ ವಿಕಾಸದ ದೃಷ್ಟಿಯಿಂದ ಅಗತ್ಯ ಮತ್ತು ಅನುಕೂಲಕರ ಪುಸ್ತಕಗಳು ಮಾರಾಟಕ್ಕೆ ಬರ್ತಾ ಇದೆ. ಸುಮಾರು 3 ಲಕ್ಷ ಮೌಲ್ಯದ ಪುಸ್ತಕ ಕೈಗೆಟಕುವ ದರದಲ್ಲಿ ಮಕ್ಕಳ ಬಳಿಯೇ ಬರ್ತಾ ಇದೆ. ಮಕ್ಕಳಲ್ಲಿ ಓದುವ ಮತ್ತು ಜ್ಞಾನಾಸಕ್ತಿ ಬೆಳಿಸುವ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಿದೆ. ಎಲ್ಲ ವಯೋಮಾನದ ಪ್ರಜ್ಞಾವಂತ ಓದುಗರನ್ನು ಗಮನದಲ್ಲಿ ಇಟ್ಟುಕೊಂಡೆ ಪುಸ್ತಕಗಳ ಆಯ್ಕೆ ಮಾಡಲಾಗಿದೆ. ಆ ದಿನ ಬೆಳಿಗ್ಗೆ ನಡೆಯುವ ಉದ್ಘಾಟನ ಕಾರ್ಯಕ್ರಮದಲ್ಲಿ ಖ್ಯಾತ ರಂಗಕರ್ಮಿ ಡಾ. ಶ್ರೀಪಾದ ಭಟ್ ಪುಸ್ತಕ ಮೇಳಕ್ಕೆ ಚಾಲನೆ ನೀಡಲಿದ್ದಾರೆ.
ನೇಶನಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಬಿ ಶಾಂತಾರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಉಡುಪಿ ಡಿಡಿಪಿಐ ಲೋಕೇಶ್ ಸಿ, ಸುಜ್ಞಾನ ಪಿ ಯು ಕಾಲೇಜು ಅಧ್ಯಕ್ಷ ರಮೇಶ್ ಶೆಟ್ಟಿ , ರುಕ್ಮಿಣಿ ಶೇಡ್ತಿ ಡಿಗ್ರಿ ಕಾಲೇಜು ಪ್ರಾಂಶುಪಾಲ ಭಾಸ್ಕರ ಶೆಟ್ಟಿ, ಬ್ರಹ್ಮಾವರ ಕ್ಷೇತ್ರಶಿಕ್ಷಣಾಧಿಕಾರಿ ಉಮಾ ಇತರ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು” ಪುಸ್ತಕ ಮೇಳ ” ಸಂಘಟಕ
ಜಿ ಪಿ ಪ್ರಭಾಕರ ತುಮರಿ ಮತ್ತು
ನೇಶನಲ್ ಹೈಸ್ಕೂಲ್ ಬಾರಕೂರು ಇದರ ಮುಖ್ಯ ಶಿಕ್ಷಕಿ ಹೇಮಾವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







