ಬ್ರಹ್ಮಾವರ:ಮರಾಠಿ ಸಮುದಾಯದವರ ಆರಾಧನಾ ದೇವಿ ಗೋಪಾಲಪುರ ಸಂತೆಕಟ್ಟೆಯ ಶ್ರೀ ದುರ್ಗಾ ಭವಾನಿ ಅಮ್ಮನವರ ಹತ್ತರಕಟ್ಟೆ ವೃಂದಾವನ ಪ್ರತಿಷ್ಠೆ ತಂತ್ರಿಗಳಾದ ಪ್ರಸನ್ನ ಉಪಾಧ್ಯಾಯ ಮಾರ್ಪಳ್ಳಿ ಇವರಿಂದ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಿತು.
ಮರಾಠಿ ಸಮುದಾಯದ ಗುರಿಕಾರ ಶಂಕರ ನಾಯ್ಕ್ ಮುಂದಾಳತ್ವದಲ್ಲಿನಡೆದ ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸಂಘದ ಅಧ್ಯಕ್ಷ ಉಮೇಶ್ ನಾಯ್ಕ್ ,ಉಡುಪಿ ಜಿಲ್ಲಾ ಮರಾಠಿ ಸ ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ಸೇರಿದಂತೆ ಅನೇಕ ಗಣ್ಯರು ಆಗಮಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಿ ಗೌರವವನ್ನು ಸ್ವೀಕರಿಸಿದರು.
ರಮೇಶ್ ನಾಯ್ಕ್ ಗೋಪಾಲಪುರ,ವಿಶ್ವನಾಥ್ ನಾಯ್ಕ್ ಗೋಪಾಲಪುರ, ನಾಗೇಶ್ ನಾಯ್ಕ್ ನೀಲಾವರ, ಗೋಪಾಲ್ ನಾಯ್ಕ್ ನೀಲಾವರ ದಾಮೋದರ ನಾಯ್ಕ್ ಗರಡಿಮಜಲು ಸೇರಿದಂತೆ ಮರಾಠಿ ಸಮುದಾಯದ ಅನೇಕಕರು ಭಾಹಗವಹಿಸಿದ್ದರು.








