ಉಡುಪಿ: ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಪುತ್ತಿಗೆ ಮಠಾಧೀಶರಾದ ವಿಶ್ವ ಮಾನ್ಯ ಯತಿಕುಲ ಚಕ್ರವರ್ತಿ ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತವರ ಶಿಷ್ಯ ಶ್ರೀಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರ ಸಂಕಲ್ಪ ಮತ್ತು ಮಾರ್ಗದರ್ಶನದಂತೆ ವಿಶ್ವಯೋಗ ದಿನದ ಪ್ರಯುಕ್ತ ಗೀತಾಮಂದಿರದಲ್ಲಿ ಚಯರ್ ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜೂನ್ 21 ರ ಅಪರಾಹ್ನ 4 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಉಡುಪಿಯಎಸ್ ಡಿ ಎಂ ಆಯುರ್ವೇದ ಕಾಲೆe ಜಿನ ಪ್ರಾಚಾರ್ಯೆ ಡಾ. ಮಮತಾ ಕೆ.ವಿ. ಸಂಪನ್ಮೂಲ ವ್ಯಕ್ತಿ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ರಾಘವೇಂದ್ರ ಭಟ್, ನವದೆಹಲಿಯ ಸಿಸಿಆರ್ ಎ ಯಸ್ ತಜ್ಞ ದಿಲೀಪ್ ಕುಮಾರ್ಕರ್ ಉಪಸ್ಥಿತಿಯಲ್ಲಿ ದಿವಾನ ನಾಗರಾಜ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷವಾಗಿ ಭಿನ್ನ ಸಾಮರ್ಥ್ಯದವರಿಗೂ ಪ್ರಯೋಜನವಾಗುವಂತೆ ಕುರ್ಚಿಯಲ್ಲಿ ಕುಳಿತುಕೊಂಡೇ ಮಾಡುವ ಯೋಗ – ಆಸನ – ಪ್ರಾಣಾಯಾಮಗಳ ತರಬೇತಿ ನೀಡಲಾಗುತ್ತಿದ್ದು ಆನ್ ಲೈನ್ನಲ್ಲಿಯೂ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಧನ್ವಂತರಿ ಪೂಜೆ ಸಹಿತ ಯೋಗ ನೃತ್ಯ, ದಶಾವತಾರ ಆಸನ ಪ್ರದರ್ಶನಗಳನ್ನೂ ಆಳವಡಿಸಿಕೊಳ್ಳಲಾಗಿದ್ದುಹೆಚ್ಚಿನ ಮಾಹಿತಿ ಮತ್ತು ಉಚಿತ ನೋಂದಣಿಗಾಗಿ ವಿದ್ವಾನ್ ಕೆ.ವಿ. ರಮಣಾಚಾರ್ಯರನ್ನು -8792158946 – ಸಂಪರ್ಕಿಸಬಹುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ






