ಉಡುಪಿ ‘ಜೂನ್ 11:ಅಖಿಲ ಭಾರತ ಜನವಾದಿ ಮಹಿಳಾ ಸಂಘ ಟನೆ ಉಡುಪಿ ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ಇಂದು ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಮಹಿಳಾ ಸ್ನೇಹಿಯಾಗಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮಣಿಪಾಲದ ಅಪಾರ ಜಿಲ್ಲಾಧಿಕಾರಿ ಯವರಿಗೆ ಮನವಿ ನೀಡಿ ಚರ್ಚಿಸಲಾಯಿತು.
ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಶೀಲಾವತಿ,ಕುಂದಾಪುರ ಮುಖಂಡರಾದ ಬಲ್ಕೀಸ್,ಕಾರ್ಕಳ ಮುಖಂಡರಾದ ಸುನೀತಾ ಶೆಟ್ಟಿ, ಬೈಂದೂರು ಮುಖಂಡರಾದ ಶೋಭಾ ,ನಾಗರತ್ನ ನಾಡ,ಉಡುಪಿ ಮುಖಂಡರಾದ ನಳಿನಿ.ಎಸ್ ಉಪಸ್ಥಿತರಿದ್ದರು.







