ಉಡುಪಿ: ಶ್ರೀ ಪುತ್ತಿಗೆ ಮಠಾಧೀಶರಾದ ವಿಶ್ವಮಾನ್ಯ ಯತಿಕುಲ ಚಕ್ರವರ್ತಿ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದಗಳೊಂದಿಗೆ ಅಧಿಕ ಮಾಸದ ಅಧಿಕ ಫಲ ಸಂಪಾದನೆ ಮತ್ತು ಲೋಕಕಲ್ಯಾಣಕ್ಕಾಗಿ ಶ್ರೀಮದ್ಭಗವದ್ಗೀತೆಯ 15 ನೇ ಅಧ್ಯಾಯವನ್ನು 33 ಬಾರಿ ಸಾಮೂಹಿಕವಾಗಿ ಪಾರಾಯಣ ಮಾಡಲು ಸಂಕಲ್ಪಿಸಲಾಗಿದೆ.
ಜೂನ್ 12 , ಶುಕ್ರವಾರ ಅಪರಾಹ್ನ 2 ರಿಂದ ಶ್ರೀಕೃಷ್ಣ ಮಠಕ್ಕೆ ಸನಿಹದಲ್ಲಿರುವ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಅಡಿಟೋರಿಯಂನಲ್ಲಿ ಈ ಪುಣ್ಯಪ್ರದ ಕಾರ್ಯಕ್ರಮ ನಡೆಯಲಿದೆ. ಸಾಮೂಹಿಕ ಪಾರಾಯಣ – ಶಾಸ್ತ್ರೀಯ ನೃತ್ಯಾಭಿವ್ಯಕ್ತಿ ಮತ್ತು ಕಿರು ನಿರೂಪಣಾ ವ್ಯಾಖ್ಯಾನಗಳೊಂದಿಗೆ ಹಿತಮಿತ ಹಿಮ್ಮೇಳವಾದ್ಯಗಳನ್ನು ಬಳಸಿಕೊಂಡು ವೈಶಿಷ್ಟ್ಯಪೂರ್ಣವಾಗಿ ಸಂಯೋಜಿಸಲಾಗಿದೆ. ಆಸಕ್ತ ಭಗವದ್ಭಕ್ತರು ಮುಕ್ತವಾಗಿ ಭಾಗವಹಿಸಿ ಶ್ರೀಕೃಷ್ಣಾನುಗ್ರಹಕ್ಕೆ ಪಾತ್ರರಾಗಬಹುದು .
ವಿಶ್ವ ಗೀತಾ ಪರ್ಯಾಯದ ಅವಧಿಯಲ್ಲಿ ಶ್ರೀಪುತ್ತಿಗೆ ಶ್ರೀಗಳ ಸಂಕಲ್ಪ ಮತ್ತು ದಿವ್ಯೋಪಸ್ಥಿತಿಯೊಂದಿಗೆ
ನಡೆದ ಅಪೂರ್ವ ಲಕ್ಷ ಕಂಠ ಗೀತಾಪಾರಾಯಣದಲ್ಲಿ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದೀಜಿ ಭಾಗವಹಿಸಿ ಇವೇ 20 ಶ್ಲೋಕಗಳ ಪಠಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು..
ಆನ್ ಲೈನ್ ನಲ್ಲಿ ಕೂಡಾ ಭಾಗವಹಿಸಲು ಅವಕಾಶವಿದ್ದು ,
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಂದಾಯಿಸಿ ಕೊಳ್ಳಿ.
https://forms.gle/WHVDbW3YQ6crNU6W8
ಅಧಿಕ ಮಾಸದ ವಿಶೇಷ ರಿಯಾಯಿತಿಯ ಗ್ರಂಥ ದಾನ ಸೇವೆ,ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ
879215 8946
9880605691
9663891702
9886498O69
ಸಂಪರ್ಕಿಸಿರಿ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.






