ಉಡುಪಿ:ದಿನಾಂಕ 08.05.2026 ರಂದು ಉಡುಪಿ ವಿಭಾಗದ ಮಸೀದಿ ಪಡುಬಿದ್ರಿ ಸೆಕ್ಷನ್ನಲ್ಲಿ ರೈಲ್ವೆ ಸುರಕ್ಷತಾ ಜಾಗೃತಿ ಅಭಿಯಾನ ನಡೆಸಲಾಯಿತು.
ಅಭಿಯಾನದಲ್ಲಿ ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ರೈಲು ಹಳಿಗಳನ್ನು ದಾಟದಂತೆ ಜಾಗೃತಿ ಮೂಡಿಸಲಾಯಿತು. ಯಾವುದೇ ಸಮರ್ಪಕ ಕಾರಣವಿಲ್ಲದೆ ಅಲಾರಂ ಚೈನ್ ಎಳೆಯಬಾರದು ಎಂದು ಸೂಚಿಸಲಾಯಿತು.
ಅದೇ ರೀತಿ ಫುಟ್ಬೋರ್ಡ್ನಲ್ಲಿ ಪ್ರಯಾಣಿಸದಂತೆ ಎಚ್ಚರಿಕೆ ನೀಡಲಾಗಿದ್ದು, ಪ್ರಯಾಣದ ವೇಳೆ ಅಪರಿಚಿತ ವ್ಯಕ್ತಿಗಳಿಂದ ಆಹಾರ ಅಥವಾ ಪಾನೀಯಗಳನ್ನು ಸ್ವೀಕರಿಸಬಾರದು, ಅವುಗಳಲ್ಲಿ ವಿಷಕಾರಿ ಪದಾರ್ಥಗಳು ಇರಬಹುದೆಂದು ತಿಳಿಸಲಾಯಿತು.
ರೈಲುಗಳಿಗೆ ಕಲ್ಲು ಅಥವಾ ಇತರೆ ವಸ್ತುಗಳನ್ನು ಎಸೆಯಬಾರದು ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು. ಜೊತೆಗೆ ಪ್ರಯಾಣದ ಸಮಯದಲ್ಲಿ ಸಹಾಯಕ್ಕಾಗಿ ರೈಲ್ವೆ ಹೆಲ್ಪ್ಲೈನ್ ಸಂಖ್ಯೆ 139 ಹಾಗೂ ತುರ್ತು ಸಹಾಯ ಸಂಖ್ಯೆ 112 ಕುರಿತು ಮಾಹಿತಿ ನೀಡಲಾಯಿತು.
ಈ ಜಾಗೃತಿ ಅಭಿಯಾನವನ್ನು ಉಡುಪಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ನಡೆಸಲಾಯಿತು.







