ಉಡುಪಿ :ಸನಾತನ ಹಿಂದೂ ಸಂಸ್ಕೃತಿಯ ಸಂರಕ್ಷಣೆ-ಸಂವರ್ಧನೆಗಾಗಿ ವಿಶ್ವಮಾನ್ಯ ಯತಿಕುಲಚಕ್ರವರ್ತಿ ಡಾ. ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನ – ದಿವ್ಯೋಪಸ್ಥಿತಿಯೊಂದಿಗೆ *ಗೀತಾ ಮಂದಿರದ ನೃಸಿಂಹ ಸಭಾ ಭವನದಲ್ಲಿ* *ಶ್ರೀ ಪುತ್ತಿಗೆ ಸುಗುಣ ಶಿಬಿರದ* ಉದ್ಘಾಟನೆ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಉಡುಪಿ ಶಾಸಕರಾದ ಶ್ರೀ ಯಶಪಾಲ್ ಸುವರ್ಣ , ಕಾಪು ಹೊಸ ಮಾರಿಗುಡಿಯ ರಾಜರ್ಷಿ ಶ್ರೀ ವಾಸುದೇವ ಶೆಟ್ಟಿ ಹಾಗೂ ಶ್ರೀನಿವಾಸ ಯುನಿವರ್ಸಿಟಿಯ ಕುಲಪತಿಗಳಾದ ಡಾ. ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಪ್ರಸ್ತಾವನೆ ಹಾಗು ನಿರೂಪಣೆಯನ್ನು ಶ್ರೀ ಕೆ.ವಿ.ರಮಣ ಆಚಾರ್ಯ ಹಾಗೂ ಶ್ರೀ ರಮೇಶ್ ಭಟ್ ನೆರವೇರಿಸಿದರು







