ಉಡುಪಿ,ಮಾ.28; ನಗರದ ಹೊರವಲಯದ ಕೊರಂಗ್ರಪಾಡಿ ಎಂಬಲ್ಲಿ ರಸ್ತೆ ಸನಿಹ ಬಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಗುರುವಾರ ನಡೆದಿದೆ. ಕಾರ್ಯಚರಣೆಗೆ ಪೂಜಾ ಸಾಲ್ಯಾನ್ ಎನ್ನುವರು ನೆರವಾಗಿದ್ದರು.
ದಾಖಲಿಸಲ್ಪಟ್ಟಿರುವ ವ್ಯಕ್ತಿಗೆ ಕಣ್ಣುಕಾಣುವುದಿಲ್ಲ. ಮಾನಸಿಕ ಖಿನ್ನತೆಗೆ ಒಳಪಟ್ಟವರಂತೆ ಕಂಡುಬಂದಿದ್ದಾರೆ. ವೃದ್ಧರು ಹೆಸರು ಬಸವನಪ್ಪ ಮಾವಾಡಿ, ಗದಗದ ನಿವಾಸಿ ಎಂದು ಹೇಳಿಕೊಂಡಿದ್ದಾರೆ. ವೃದ್ಧರು ದಿಕ್ಕುತಪ್ಪಿ ಬಂದಿರುವ ಶಂಕೆ ವ್ಯಕ್ತವಾಗಿದೆ. ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ







