Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಕೇರಳದ ದೇವಸ್ಥಾನದಲ್ಲಿ ನಟ ಮೊಹಮ್ಮದ್ ಫರ್ಮಾನ್ ಜೊತೆ ವಿವಾಹ…!

Dhrishya News by Dhrishya News
12/03/2026
in ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಕೇರಳದ ದೇವಸ್ಥಾನದಲ್ಲಿ ನಟ ಮೊಹಮ್ಮದ್ ಫರ್ಮಾನ್ ಜೊತೆ ವಿವಾಹ…!
0
SHARES
2
VIEWS
Share on FacebookShare on Twitter

ಮಾ. 12: 2025ರ ಕುಂಭಮೇಳದ ವೇಳೆ ತನ್ನ ಸೌಂದರ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದ್ದ ಮೊನಾಲಿಸಾ ಭೋಸ್ಲೆ (Monalisa Bhosle) ಇದೀಗ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ್ದಾರೆ. ಬುಧವಾರ (ಮಾ.11) ಸಂಜೆ ಕೇರಳದ ತಿರುವನಂತಪುರಂ ಸಮೀಪದ ದೇವಸ್ಥಾನದಲ್ಲಿ ನಟ ಮೊಹಮ್ಮದ್ ಫರ್ಮಾನ್ ಅವರೊಂದಿಗೆ ಅವರು ವಿವಾಹವಾಗಿದ್ದಾರೆ.

ಮೊನಾಲಿಸಾ ಮತ್ತು ಮೊಹಮ್ಮದ್ ಫರ್ಮಾನ್ ಅವರದ್ದು ಅಂತರ್‌ಧರ್ಮೀಯ ವಿವಾಹವಾಗಿದ್ದು, ಕುಟುಂಬದ ಕೆಲವರ ವಿರೋಧದ ನಡುವೆಯೇ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಿರುವನಂತಪುರಂನ ಅರುಮನೂರಿನಲ್ಲಿರುವ ದೇವಸ್ಥಾನದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಸ್ಥಳೀಯರು ಹಾಗೂ ಕೆಲವು ರಾಜಕೀಯ ಮುಖಂಡರು ಸಾಕ್ಷಿಯಾಗಿದ್ದರು. ಸಂಪ್ರದಾಯದಂತೆ ಅರ್ಚಕರಿಂದ ನೀಡಲಾದ ತಾಳಿಯನ್ನು ಕಟ್ಟಿ, ಕುಂಕುಮವನ್ನು ಇಡುವ ಮೂಲಕ ಫರ್ಮಾನ್ ಅವರು ಮೊನಾಲಿಸಾ ಅವರನ್ನು ವರಿಸಿಕೊಂಡರು. ಮದುವೆಯ ಬಳಿಕ ಮಾತನಾಡಿದ ದಂಪತಿ, “ಕೇರಳ ರಾಜ್ಯದ ಬಗ್ಗೆ ನಮಗೆ ವಿಶೇಷವಾದ ಅಭಿಮಾನವಿದೆ. ಇಲ್ಲಿನ ಪರಿಸರ ಮತ್ತು ಸುರಕ್ಷತೆ ಗಮನಿಸಿ ಇಲ್ಲಿಯೇ ಮದುವೆಯಾಗಲು ತೀರ್ಮಾನಿಸಿದ್ದೇವೆ” ಎಂದು ಹೇಳಿದ್ದಾರೆ.

ಮೊನಾಲಿಸಾ ಇಂದೋರ್ ಮೂಲದವರಾಗಿದ್ದು, ಮೊಹಮ್ಮದ್ ಫರ್ಮಾನ್ ಮಹಾರಾಷ್ಟ್ರದವರು. ಇಬ್ಬರೂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು ಆರು ತಿಂಗಳ ಹಿಂದೆ ಚಿತ್ರೀಕರಣದ ವೇಳೆ ಪರಿಚಯವಾದದ್ದು ಬಳಿಕ ಸ್ನೇಹ ಪ್ರೀತಿಯಾಗಿ ಬೆಳೆಯಿತು. “ಚಿತ್ರೀಕರಣದ ಸೆಟ್‌ನಲ್ಲಿ ಮೊನಾಲಿಸಾಳನ್ನು ಭೇಟಿಯಾದೆ. ಕಳೆದ ಆರು ತಿಂಗಳಲ್ಲಿ ನಮ್ಮ ಬಾಂಧವ್ಯ ಬಹಳ ಗಾಢವಾಗಿದೆ. ಈ ಅವಧಿ ನಮಗೆ ದೀರ್ಘಕಾಲದ ಸಂಬಂಧದಂತೇ ಅನುಭವವಾಗಿದೆ” ಎಂದು ಫರ್ಮಾನ್ ಹೇಳಿದ್ದಾರೆ.

ಸಿನಿಮಾ ಕೆಲಸದ ನಿಮಿತ್ತ ಕೇರಳಕ್ಕೆ ಆಗಮಿಸಿದ್ದ ಈ ಜೋಡಿ ಅಲ್ಲಿನ ಸಂಸ್ಕೃತಿ ಮತ್ತು ಜನರ ಸ್ನೇಹಭಾವದಿಂದ ಆಕರ್ಷಿತರಾಗಿದ್ದಾರೆ. “ಬೇರೆ ರಾಜ್ಯಗಳಲ್ಲಿ ನಮ್ಮ ಸಂಬಂಧಕ್ಕೆ ವಿರೋಧ ಎದುರಾಗುವ ಸಾಧ್ಯತೆ ಇದ್ದುದರಿಂದ, ಸುರಕ್ಷಿತವೆನಿಸಿದ ಕೇರಳದಲ್ಲಿ ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿ ಪಡೆದುಕೊಂಡೆವು” ಎಂದು ಫರ್ಮಾನ್ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ತಂದೆ ಇನ್ನೂ ಈ ಸಂಬಂಧಕ್ಕೆ ಸಂಪೂರ್ಣ ಒಪ್ಪಿಗೆ ನೀಡಿಲ್ಲ ಎಂಬುದನ್ನೂ ಅವರು ತಿಳಿಸಿದ್ದಾರೆ.

ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ದಂಪತಿಗೆ ಶುಭಾಶಯ ಕೋರಿದರು. ಹೊರರಾಜ್ಯದ ಕಲಾವಿದರು ಕೇರಳಕ್ಕೆ ಬಂದು ಅಲ್ಲಿನ ಸಂಪ್ರದಾಯದಂತೆ ವಿವಾಹವಾಗಿರುವುದು ವಿಶೇಷವೆಂದು ಅವರು ಹೇಳಿದ್ದಾರೆ. ಮದುವೆಯ ಬಳಿಕ ತಮ್ಮ ಸುರಕ್ಷತೆಗಾಗಿ ಫರ್ಮಾನ್ ಹಾಗೂ ಮೊನಾಲಿಸಾ ಕೇರಳ ಪೊಲೀಸರ ಬಳಿ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದಾರೆ.

Previous Post

ಟ್ರೇಡಿಂಗ್ ನೆಪದಲ್ಲಿ ಬ್ಯಾಂಕ್ ಖಾತೆ ಪಡೆದು ಸೈಬರ್ ವಂಚನೆ; ಇಬ್ಬರ ವಿರುದ್ಧ ದೂರು…!

Next Post

ಹೊರರಾಜ್ಯದ ವಾಹನ ಎಫ್‌ಸಿ ಅಕ್ರಮಕ್ಕೆ ಕಡಿವಾಣ: ಸಾರಿಗೆ ಇಲಾಖೆಯ ಹೊಸ ಆದೇಶ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಹೊರರಾಜ್ಯದ ವಾಹನ ಎಫ್‌ಸಿ ಅಕ್ರಮಕ್ಕೆ ಕಡಿವಾಣ: ಸಾರಿಗೆ ಇಲಾಖೆಯ ಹೊಸ ಆದೇಶ…!

ಹೊರರಾಜ್ಯದ ವಾಹನ ಎಫ್‌ಸಿ ಅಕ್ರಮಕ್ಕೆ ಕಡಿವಾಣ: ಸಾರಿಗೆ ಇಲಾಖೆಯ ಹೊಸ ಆದೇಶ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಇಸ್ರೇಲ್–ಇರಾನ್ ಸಂಘರ್ಷದ ಬಳಿಕ ಹರ್ಮುಜ್ ಜಲಸಂಧಿ ದಾಟಿ ಮುಂಬೈ ತಲುಪಿದ ಭಾರತೀಯ ತೈಲ ನೌಕೆ…!

ಇಸ್ರೇಲ್–ಇರಾನ್ ಸಂಘರ್ಷದ ಬಳಿಕ ಹರ್ಮುಜ್ ಜಲಸಂಧಿ ದಾಟಿ ಮುಂಬೈ ತಲುಪಿದ ಭಾರತೀಯ ತೈಲ ನೌಕೆ…!

12/03/2026
ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ: ಇಂದಿನ ಹೊಸ ದರಪಟ್ಟಿ ಇಲ್ಲಿದೆ…!

ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ: ಇಂದಿನ ಹೊಸ ದರಪಟ್ಟಿ ಇಲ್ಲಿದೆ…!

12/03/2026
ಹೊರರಾಜ್ಯದ ವಾಹನ ಎಫ್‌ಸಿ ಅಕ್ರಮಕ್ಕೆ ಕಡಿವಾಣ: ಸಾರಿಗೆ ಇಲಾಖೆಯ ಹೊಸ ಆದೇಶ…!

ಹೊರರಾಜ್ಯದ ವಾಹನ ಎಫ್‌ಸಿ ಅಕ್ರಮಕ್ಕೆ ಕಡಿವಾಣ: ಸಾರಿಗೆ ಇಲಾಖೆಯ ಹೊಸ ಆದೇಶ…!

12/03/2026
ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಕೇರಳದ ದೇವಸ್ಥಾನದಲ್ಲಿ ನಟ ಮೊಹಮ್ಮದ್ ಫರ್ಮಾನ್ ಜೊತೆ ವಿವಾಹ…!

ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಕೇರಳದ ದೇವಸ್ಥಾನದಲ್ಲಿ ನಟ ಮೊಹಮ್ಮದ್ ಫರ್ಮಾನ್ ಜೊತೆ ವಿವಾಹ…!

12/03/2026

Recent News

ಇಸ್ರೇಲ್–ಇರಾನ್ ಸಂಘರ್ಷದ ಬಳಿಕ ಹರ್ಮುಜ್ ಜಲಸಂಧಿ ದಾಟಿ ಮುಂಬೈ ತಲುಪಿದ ಭಾರತೀಯ ತೈಲ ನೌಕೆ…!

ಇಸ್ರೇಲ್–ಇರಾನ್ ಸಂಘರ್ಷದ ಬಳಿಕ ಹರ್ಮುಜ್ ಜಲಸಂಧಿ ದಾಟಿ ಮುಂಬೈ ತಲುಪಿದ ಭಾರತೀಯ ತೈಲ ನೌಕೆ…!

12/03/2026
ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ: ಇಂದಿನ ಹೊಸ ದರಪಟ್ಟಿ ಇಲ್ಲಿದೆ…!

ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ: ಇಂದಿನ ಹೊಸ ದರಪಟ್ಟಿ ಇಲ್ಲಿದೆ…!

12/03/2026
ಹೊರರಾಜ್ಯದ ವಾಹನ ಎಫ್‌ಸಿ ಅಕ್ರಮಕ್ಕೆ ಕಡಿವಾಣ: ಸಾರಿಗೆ ಇಲಾಖೆಯ ಹೊಸ ಆದೇಶ…!

ಹೊರರಾಜ್ಯದ ವಾಹನ ಎಫ್‌ಸಿ ಅಕ್ರಮಕ್ಕೆ ಕಡಿವಾಣ: ಸಾರಿಗೆ ಇಲಾಖೆಯ ಹೊಸ ಆದೇಶ…!

12/03/2026
ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಕೇರಳದ ದೇವಸ್ಥಾನದಲ್ಲಿ ನಟ ಮೊಹಮ್ಮದ್ ಫರ್ಮಾನ್ ಜೊತೆ ವಿವಾಹ…!

ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಕೇರಳದ ದೇವಸ್ಥಾನದಲ್ಲಿ ನಟ ಮೊಹಮ್ಮದ್ ಫರ್ಮಾನ್ ಜೊತೆ ವಿವಾಹ…!

12/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved