Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಅಪರಿಚಿತೆಗೆ ಜೀವಂತ ಕಿಡ್ನಿ ದಾನ: ಬೆಂಗಳೂರಿನ ವೈದ್ಯೆಯಿಂದ ಅಪೂರ್ವ ಮಾನವೀಯತೆ…..!

Dhrishya News by Dhrishya News
20/02/2026
in ಸುದ್ದಿಗಳು
0
ಅಪರಿಚಿತೆಗೆ ಜೀವಂತ ಕಿಡ್ನಿ ದಾನ: ಬೆಂಗಳೂರಿನ ವೈದ್ಯೆಯಿಂದ ಅಪೂರ್ವ ಮಾನವೀಯತೆ…..!
0
SHARES
6
VIEWS
Share on FacebookShare on Twitter

ಬೆಂಗಳೂರು, ಫೆ. 20: ಸಾಮಾನ್ಯವಾಗಿ ಕುಟುಂಬ ಸದಸ್ಯರ ನಡುವೆ ನಡೆಯುವ ಜೀವಂತ ಮೂತ್ರಪಿಂಡ ದಾನವನ್ನು ಮೀರಿಸಿ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ವೈದ್ಯೆಯೊಬ್ಬರು ಅಪರಿಚಿತ ಮಹಿಳೆಗೆ ತಮ್ಮ ಕಿಡ್ನಿ ದಾನ ಮಾಡುವ ಮೂಲಕ ಅಪೂರ್ವ ಉದಾಹರಣೆ ನಿರ್ಮಿಸಿದ್ದಾರೆ.

ಹಳೇ ಮದ್ರಾಸ್ ರಸ್ತೆಯ ಮಣಿಪಾಲ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭ್ರೂಣ ಔಷಧ ತಜ್ಞೆ ಡಾ. ತಂಕಮ್ ಸುಬ್ರಹ್ಮಣಿಯನ್ (59) ಅವರು ಆಂಧ್ರಪ್ರದೇಶದ ಸುರೇಖಾ (56) ಅವರಿಗೆ ತಮ್ಮ ಒಂದು ಜೀವಂತ ಮೂತ್ರಪಿಂಡವನ್ನು ಯಶಸ್ವಿಯಾಗಿ ದಾನ ಮಾಡಿದ್ದಾರೆ. ಫೆಬ್ರವರಿ 10ರಂದು ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಕರ್ನಾಟಕದಲ್ಲಿ ಅಪರಿಚಿತರಿಗೆ ಜೀವಂತ ಕಿಡ್ನಿ ದಾನ ಮಾಡಿದ ವಿರಳ ಪ್ರಕರಣವೆಂದು ಇದು ಗಮನ ಸೆಳೆದಿದೆ.

ದಶಕದ ಸಂಕಲ್ಪ ಸಾಕಾರ

ಕಳೆದ ಹತ್ತು ವರ್ಷಗಳಿಂದಲೇ ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡಬೇಕೆಂಬ ಸಂಕಲ್ಪ ಹೊಂದಿದ್ದ ಡಾ. ತಂಕಮ್, 2016ರಿಂದಲೇ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದರು. ಅಪರಿಚಿತರಿಗೆ ಅಂಗಾಂಗ ದಾನ ಮಾಡುವುದಕ್ಕೆ ಇರುವ ಕಟ್ಟುನಿಟ್ಟಿನ ನಿಯಮಗಳನ್ನು ಪೂರೈಸಿ, ಆಸ್ಪತ್ರೆಯ ಕಸಿ ಸಮಿತಿ ಹಾಗೂ ಅಂಗಾಂಗ ದಾನ ಸಮಿತಿಯ ಅನುಮೋದನೆ ಪಡೆದರು. 2025ರಲ್ಲಿ ಕರ್ನಾಟಕ ಹೈಕೋರ್ಟ್‌ನ ಅನುಮತಿ ಕೂಡ ಪಡೆದು ತಮ್ಮ ಸಂಕಲ್ಪವನ್ನು ಸಾಕಾರಗೊಳಿಸಿದರು.

2022ರಿಂದ ಡಯಾಲಿಸಿಸ್‌ಗೆ ಒಳಗಾಗಿದ್ದ ಸುರೇಖಾ

2016ರಲ್ಲಿ ದೀರ್ಘಕಾಲದ ಮೂತ್ರಪಿಂಡ ಸಮಸ್ಯೆ ಪತ್ತೆಯಾದ ಸುರೇಖಾ ಅವರು 2022ರಿಂದ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಇಸ್ಕೆಮಿಕ್ ನೆಫ್ರೋಸ್ಕ್ಲೆರೋಸಿಸ್‌ನಿಂದ ಬಳಲುತ್ತಿದ್ದ ಅವರು ಮೃತಪಟ್ಟವರ ಅಂಗಾಂಗಕ್ಕಾಗಿ ಕಾಯುತ್ತಿದ್ದರು. ಅಂತಿಮವಾಗಿ ಡಾ. ತಂಕಮ್ ಅವರ ಕಿಡ್ನಿ ಹೊಂದಿಕೆಯಾಗಿದ್ದು, ಯಶಸ್ವಿಯಾಗಿ ಕಸಿ ನಡೆಯಿತು. ತಮ್ಮ ತಾಯಿಯ ಜೀವ ಉಳಿಸಿದ ವೈದ್ಯೆಗೆ ಪುತ್ರ ಭರತ್ ಕೃತಜ್ಞತೆ ಸಲ್ಲಿಸಿದ್ದಾರೆ.

ಕುಟುಂಬದ ಆರಂಭಿಕ ಆತಂಕ

ಅಪರಿಚಿತೆಗೆ ಕಿಡ್ನಿ ದಾನ ಮಾಡುವ ನಿರ್ಧಾರವು ಆರಂಭದಲ್ಲಿ ಕುಟುಂಬದವರಲ್ಲಿ ಆತಂಕ ಹುಟ್ಟಿಸಿತು. ಆದರೆ ಡಾ. ತಂಕಮ್ ಅವರ ದೃಢ ನಿಲುವು ಹಾಗೂ ಸಾಮಾಜಿಕ ಕಳಕಳಿ ಮನಗಂಡು ಕುಟುಂಬವೂ ಬೆಂಬಲ ನೀಡಿತು. ಫೆ.7ರಂದು ತಮ್ಮ 59ನೇ ಹುಟ್ಟುಹಬ್ಬದಂದು ದಾನ ಪ್ರಕ್ರಿಯೆ ಆರಂಭಿಸಲು ಇಚ್ಛಿಸಿದ್ದರೂ, ವೈದ್ಯರ ಲಭ್ಯತೆ ಕೊರತೆಯಿಂದ ಫೆ.10ಕ್ಕೆ ಮುಂದೂಡಲಾಯಿತು.

‘ಒನ್ ಡೋನರ್ ಮೆನಿ ಲೈವ್ಸ್’ ಅಭಿಯಾನ

ಯುಕೆಯಲ್ಲಿ ಉನ್ನತ ಶಿಕ್ಷಣ ಪಡೆದಿರುವ ಡಾ. ತಂಕಮ್, 2005ರಿಂದ ಮಣಿಪಾಲ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮರಣಾನಂತರ ಅಂಗಾಂಗ ದಾನದಿಂದ ಎಂಟು ಮಂದಿಯ ಜೀವ ಉಳಿಸಬಹುದೆಂದು ಅವರು ತಿಳಿಸಿ, ಜೀವಂತವಾಗಿಯೇ ದಾನ ಮಾಡುವುದೂ ಸುರಕ್ಷಿತ ಎಂಬ ಸಂದೇಶ ಸಾರಿದ್ದಾರೆ. ತಮ್ಮ ಸಹೋದರನೊಂದಿಗೆ ‘ಒನ್ ಡೋನರ್ ಮೆನಿ ಲೈವ್ಸ್’ ಎಂಬ ವೆಬ್‌ಸೈಟ್ ಆರಂಭಿಸಿ, ಅಂಗಾಂಗ ದಾನ ಪ್ರತಿಜ್ಞೆಗೆ ಜನರನ್ನು ಪ್ರೇರೇಪಿಸುತ್ತಿದ್ದಾರೆ.

ಮಣಿಪಾಲ ಆಸ್ಪತ್ರೆಯ ಅಧ್ಯಕ್ಷ ಡಾ. ಎಚ್. ಸುದರ್ಶನ್ ಬಲ್ಲಾಳ್ ಅವರು ಡಾ. ತಂಕಮ್ ಅವರ ಈ ಕಾರ್ಯವನ್ನು ಶ್ಲಾಘಿಸಿ, ಯೆಮೆನ್ ಹಾಗೂ ಅಫ್ಘಾನಿಸ್ತಾನದಲ್ಲೂ ವೈದ್ಯಕೀಯ ಸೇವೆ ಸಲ್ಲಿಸಿರುವ ಅವರ ಸಮಾಜಪರ ಮನೋಭಾವ ಮಾದರಿಯಾಗಿದೆ ಎಂದು ಹೇಳಿದ್ದಾರೆ.

Previous Post

ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಲೀಟರ್‌ಗೆ ₹1 ಹೆಚ್ಚುವರಿ ಪ್ರೋತ್ಸಾಹಧನ….!

Next Post

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನದ ಆಚರಣೆ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನದ  ಆಚರಣೆ….!

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನದ ಆಚರಣೆ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

20/02/2026
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

20/02/2026
ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

20/02/2026
ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

20/02/2026

Recent News

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

20/02/2026
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

20/02/2026
ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

20/02/2026
ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

20/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved