ಉಡುಪಿ, ಫೆ.19: ಕಳೆದ ಜನವರಿ 28 ರಂದು ಪೆರ್ಣಂಕಿಲದಲ್ಲಿ ಸುಡುಬಿಸಿಲಿನಲ್ಲಿ ಪ್ರಜ್ಞಾಹೀನನಾಗಿ ಬಿದ್ದುಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಬಾಬಾಸಾಹೇಬ್ (ರಾಯಚೂರು ನಿವಾಸಿ) ಯುವಕನು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ರಕ್ಷಣೆ ಮತ್ತು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲವಾಗಿ ಗುಣಮುಖರಾಗಿದ್ದಾನೆ.

ಬಾಬಾಸಾಹೇಬ್ ಅವರ ವಾರಸುದಾರರು ತಕ್ಷಣ ಕರೆದುಕೊಂಡು ಹೋಗಲು ಸಿದ್ಧರಾಗದ ಕಾರಣ, ಕಾರ್ಕಳದ ಹೊಸಬೆಳಕು ಆಶ್ರಮದ ಸಂಚಾಲಕರಾದ ತನುಲಾ ತರುಣ್ ಮತ್ತು ಗೌರೀಶ್ ಅವರು ಆಶ್ರಮದಲ್ಲಿ ಯುವಕನಿಗೆ ತಾತ್ಕಾಲಿಕ ಆಶ್ರಯ ಒದಗಿಸಿದ್ದಾರೆ.
ಸಮಾಜಸೇವಕರು, ಯುವಕನನ್ನು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು, ಅಂಬುಲೆನ್ಸ್ ಮೂಲಕ ಕಾರ್ಕಳ ಹೊಸಬೆಳಕು ಆಶ್ರಮಕ್ಕೆ ಸಾಗಿಸಿ, ಪುನರ್ವಸತಿಗೆ ನೆರವಾದರು.
ಯುವಕನ ಸಂಬಂಧಿಕರು ತುರ್ತಾಗಿ ಕಾರ್ಕಳ ಹೊಸಬೆಳಕು ಆಶ್ರಮವನ್ನು ಸಂಪರ್ಕಿಸಲು ಸೂಚಿಸಲಾಗಿದೆ.







