Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

Dhrishya News by Dhrishya News
18/02/2026
in ಕರಾವಳಿ, ಸುದ್ದಿಗಳು
0
ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!
0
SHARES
49
VIEWS
Share on FacebookShare on Twitter

ಕಟಪಾಡಿ, ಫೆ. 18: ಸ್ನೇಹಿತರೊಂದಿಗೆ ಪುಣ್ಯಕ್ಷೇತ್ರ ಸಂದರ್ಶನಕ್ಕೆ ತೆರಳಿದ್ದ ಕಾಪು ತಾಲೂಕು ಸರಕಾರಿಗುಡ್ಡೆ ಸುಭಾಸ್ ನಗರದ ಯುವಕ ಅಶೋಕ್ ಆಚಾರ್ಯ (33) ದಿಢೀರ್ ಆಗಿ ಅನಾರೋಗ್ಯ ಬಾಧಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸ್ಸಾಂನ ಗುವಾಹಟಿಯ ಸ್ವಾಗತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.15ರಂದು ಮೃತಪಟ್ಟ ಘಟನೆ ನಡೆದಿದೆ.

ಸಂತೆಕಟ್ಟೆ, ಬ್ರಹ್ಮಾವರ ಭಾಗಗದಲ್ಲಿ ಆಟೋ ಇಲೆಕ್ಟ್ರಿಷಿಯನ್ ವೃತ್ತಿ ನಿರತ ಅಶೋಕ್ ಆಚಾರ್ಯ ಉಡುಪಿ ಭಾಗದ 9 ಮಂದಿ ಸ್ನೇಹಿತರು ಜತೆಗೂಡಿಕೊಂಡು ಫೆ.6 ರಂದು ವಿಮಾನ ಯಾನದ ಮೂಲಕ ಅಸ್ಸಾಂ ಗುವಾಹಟಿಯ ನೀಲಾಚಲ್ ಹಿಲ್ ನಲ್ಲಿರುವ ಕಾಮಾಕ್ಯ ದೇವಾಲಯಕ್ಕೆ ಪುಣ್ಯಕ್ಷೇತ್ರ ಸಂದರ್ಶನದ ಪ್ರವಾಸ ಕೈಗೊಂಡಿದ್ದರು.

ಫೆ.7ರಂದು ಕಾಮಾಕ್ಯ ದೇವಿಯ ದರ್ಶನವನ್ನು ಸಾವಕಾಶವಾಗಿ ಪೂರೈಸಿಕೊಂಡು, ಸ್ಥಳೀಯವಾಗಿಯೇ ಇದ್ದು ಪರಿಸರದಲ್ಲಿ ತಮ್ಮ ಸ್ಮರಣೀಯ ಕ್ಷಣಗಳನ್ನು ಸ್ನೇಹಿತರೊಂದಿಗೆ ಕಳೆದಿರುತ್ತಾರೆ.

ಫೆ.8ರಂದು ಹುಟ್ಟೂರಿಗೆ ಹಿಂತಿರುಗಲು ವಿಮಾನ ಪ್ರಯಾಣಕ್ಕೆ ಸಿದ್ಧರಾಗಿದ್ದು, ಚಳಿ ಮತ್ತು ತಲೆ ಸುತ್ತು ಬಂದ ಕಾರಣ ಅನಾರೋಗ್ಯ ಬಾಧಿಸಿದ್ದು, ಸ್ನೇಹಿತರು ಕೂಡಲೇ ಈತನನ್ನು ಅಸ್ಸಾಂನ ಗುವಾಹಟಿಯ ಸ್ವಾಗತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಅದಾಗಲೇ ಗಂಭೀರ ಪರಿಸ್ಥಿತಿಯ ಬಗ್ಗೆ ಅರಿವಿಗೆ ಬಂದ ಕ್ಷಣದ ಬಳಿಕ ಮನೆ ಮಂದಿಗೆ ಮಾಹಿತಿಯನ್ನು ನೀಡಿದ್ದು, ಸಹೋದರ ರಾಜೇಶ್ ಆಚಾರ್ಯ ಫೆ.9ರಂದು ಆಸ್ಪತ್ರೆಗೆ ತಲುಪಿದ್ದರು.

ಗಂಭೀರ ಸ್ಥಿತಿಯಲ್ಲಿ ಇಂಟೆನ್ಸಿವ್ ಕೇರ್ ಯುನಿಟ್ ನಲ್ಲಿ ನಿರಂತರ 8 ದಿನಗಳ ಜೀವನ್ಮರಣ ಹೋರಾಟದಲ್ಲಿ ಚಿಕಿತ್ಸೆಗೆ ಸ್ಪಂದಿಸಿದ ಅಶೋಕ್ ಆಚಾರ್ಯ ಫೆ.15ರಂದು ಮೃತಪಟ್ಟಿರುತ್ತಾರೆ.

ಬಳಿಕ ಕಾನೂನು ರೀತ್ಯಾ ಕ್ರಮಗಳನ್ನು ಪೂರೈಸಿಕೊಂಡು ಪಾರ್ಥಿವ ಶರೀರವನ್ನು ಬೆಂಗಳೂರು ವರೆಗೆ ವಿಮಾನದಲ್ಲಿ ಬಳಿಕ ಅಂಬುಲೆನ್ಸ್ ಮೂಲಕ ರಸ್ತೆ ಮಾರ್ಗವಾಗಿ ಉಡುಪಿ ಜಿಲ್ಲೆಯ ಕಾಪು ತಾಲೂಕು ಕಟಪಾಡಿ ಸರಕಾರಿಗುಡ್ಡೆ ಸುಭಾಸ್ ನಗರದ ಮನೆಗೆ ಕರೆತಂದು ಅಂತಿಮ ಪ್ರಕ್ರಿಯಗೆಳನ್ನು ಕೈಗೊಳ್ಳಲಾಗಿತ್ತು. ಅಕಾಲಿಕವಾಗಿ ಮೃತ್ಯುವಿಗೀಡಾಗಿದ್ದು ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಗ್ರಾಮಸ್ಥರು ದುಃಖತಪ್ತರಾಗಿದ್ದರು.

ಅವಿವಾಹಿತರಾಗಿದ್ದ ಅಶೋಕ್ ಆಚಾರ್ಯ ತಂದೆ ವ್ಯಾಸರಾಯ ಆಚಾರ್ಯ, ತಾಯಿ ವಾಣಿಶ್ರೀ, ಸಹೋದರರಾದ ಮಂಗಳೂರಿನಲ್ಲಿ ವಿಪ್ರೋ ಸೇಲ್ಸ್, ಸರ್ವಿಸ್ ಉದ್ಯೋಗಿ ರಾಜೇಶ್ ಆಚಾರ್ಯ ಮತ್ತು ಮೂಡಬಿದ್ರಿ ಮೈಟ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪ್ರೊಫೆಸರ್ ಸಂತೋಷ್ ಆಚಾರ್ಯ, ಸಹೋದರಿ ಶ್ವೇತಾ ಅವರನ್ನು ಅಗಲಿರುತ್ತಾರೆ.

ಜತೆಗಿದ್ದ ಸ್ನೇಹಿತರು: ಬಹಳಷ್ಟು ಸರಳ ಜೀವನ ನಡೆಸುತ್ತಿದ್ದ ಅಶೋಕ್ ಆಚಾರ್ಯ ಅವರ ಜತೆಗಿದ್ದ ಸ್ನೇಹಿತರು ಯಾರೂ ಕೂಡಾ ಹಿಂದಿರುಗಿ ಬಾರದೇ ಆಸ್ಪತ್ರೆಯಲ್ಲಿಯೇ ಇದ್ದು, ನಿರಂತರವಾಗಿ ಸೇವೆಯನ್ನು ಕೈಗೊಂಡಿದ್ದು, ಪಾರ್ಥಿವ ಶರೀರವನ್ನು ಮನೆಗೆ ತಲುಪಿಸಿ ಅಂತಿಮ ಪ್ರಕ್ರಿಯೆಗಳನ್ನು ಪೂರೈಸುವಲ್ಲಿವರೆಗೂ ದುಃಖದ ಮಡುವಲ್ಲಿಯೂ ಜತೆಯಾಗಿದ್ದರು.

Previous Post

ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

Next Post

ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ.....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

18/02/2026
ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

18/02/2026
ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

18/02/2026
ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

18/02/2026

Recent News

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

18/02/2026
ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

18/02/2026
ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳಿದ್ದ ,ಕಾಪು ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು…..!

18/02/2026
ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

ಡಾ. ಸಿಎ ಎ. ರಾಘವೇಂದ್ರ ರಾವ್ ವಿಧಿವಶ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ…!

18/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved